spot_img

ಶಂಕರನಾರಾಯಣದಲ್ಲಿ ಹೆಂಡತಿಯನ್ನು ಕತ್ತಿಯಿಂದ ಕಡಿದು ಕೊಂದ ಗಂಡ !

Date:

ಉಡುಪಿ : ಉಡುಪಿ ಜಿಲ್ಲೆಯ ಶಂಕರನಾರಾಯಣ ಬಳಿಯ ಹಿಲಿಯಾಣ ಗ್ರಾಮದ ಹೊಸಮಠದಲ್ಲಿ ಜೂನ್ 19ರ ರಾತ್ರಿ ನಡೆದ ಭೀಕರ ಘಟನೆಯಲ್ಲಿ ಗಂಡನೇ ತನ್ನ ಪತ್ನಿಯನ್ನು ಮನೆಯೊಳಗೆ ಕತ್ತಿಯಿಂದ ಕಡಿದು ಕೊಂದಿರುವ ಅಮಾನುಷ ಪ್ರಕರಣ ಬೆಳಕಿಗೆ ಬಂದಿದೆ.

27 ವರ್ಷದ ರೇಖಾ ಎಂಬ ಮಹಿಳೆಯು ಹತ್ಯೆಗೊಳಗಾಗಿದ್ದು, ಆರೋಪಿ ಗಂಡ ಗಣೇಶ ಪೂಜಾರಿ ಮದ್ಯಪಾನ ಚಟವನ್ನು ಹೊಂದಿದ್ದು , ಈ ಹಿಂದೆ ಕೂಡ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಮಾಹಿತಿಗಳು ಲಭ್ಯವಾಗಿವೆ.

ಹತ್ಯೆಯ ದಿನ ರಾತ್ರಿ 11:30ರ ವೇಳೆಗೆ, ರೇಖಾ ಕೆಲಸ ಮುಗಿಸಿ ಮನೆಗೆ ಬಂದ ನಂತರ ಮನೆಯೊಳಗೆ ಹೋದ ಗಣೇಶ್, ಬಾಗಿಲು ಲಾಕ್ ಮಾಡಿ ರೇಖಾ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ಕುಟುಂಬಸ್ಥರು ಕಿಟಕಿಯಿಂದ ನೋಡಿ ಸಾಕಷ್ಟು ಕೇಳಿಕೊಂಡರೂ ಆರೋಪಿ ಕೇಳದೆ ರೇಖಾರನ್ನು ಮಾರಕವಾಗಿ ಇರಿದು ಕೊಂದಿದ್ದಾನೆ. ನಂತರ ಹೊರಗೆ ಬಂದು “ಪೊಲೀಸರಿಗೆ ಹೇಳಿದರೆ ನಿಮ್ಮನ್ನೂ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.

ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ BNS ಕಲಂ 103 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ತನಿಖೆ ಆರಂಭವಾಗಿದೆ.

ಸ್ಥಳೀಯರು ಈ ಕ್ರೂರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ತಾಯಿ ರೇಖಾರ ಮರಣದಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚಕ್ರವರ್ತಿ ಸೂಲಿಬೆಲೆಯವರ ಮಾತಿಗೆ ಹೇರಿದ ನಿರ್ಬಂಧಕ್ಕೆ ವಿರೋಧವಿದೆ: ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ

ಚಕ್ರವರ್ತಿ ಸೂಲಿಬೆಲೆಯವರ ಮಾತಿಗೆ ಹೇರಿದ ನಿರ್ಬಂಧಕ್ಕೆ ವಿರೋಧವಿದೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ರವರು ಹೇಳಿದರು.

ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶುಕ್ರವಾರ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಅವರು ಕುಟುಂಬ ಸಮೇತರಾಗಿ ಶೃಂಗೇರಿಗೆ ಆಗಮಿಸಿದ್ದು, ಜಗದ್ಗುರುಗಳ ಆಶೀರ್ವಾದವೂ ಪಡೆದರು.

ದಿನ ವಿಶೇಷ – ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ.

ಇಸ್ರೇಲ್-ಇರಾನ್ ಸಂಘರ್ಷ ತೀವ್ರತೆಗೆ: ಇಸ್ಪಾಹಾನ್ ನ್ಯೂಕ್ಲಿಯರ್ ಘಟಕದತ್ತ ಇಸ್ರೇಲ್ ಕ್ಷಿಪಣಿದಾಳಿ

ಇಸ್ರೇಲ್ ಮತ್ತು ಇರಾನ್ ನಡುವಿನ ಸಾಯಂಕಾಲದ ಸಂಘರ್ಷ ಇಂದಿಗೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ರಕ್ಷಣಾ ಪಡೆ (IDF) ನಡೆಸಿದ ತೀವ್ರ ಕ್ಷಿಪಣಿದಾಳಿಯಿಂದ ಇರಾನ್‌ನ ಹಲವು ಸೈನಿಕ ಸೌಲಭ್ಯಗಳು ಧ್ವಂಸಗೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.