spot_img

ಗಿರೀಶ್‌ ಮಟ್ಟಣ್ಣನವರ್‌ ಮತ್ತು ಕುಡ್ಲ ರ‍್ಯಾಂಪೇಜ್‌ ವಿರುದ್ಧ FIR ದಾಖಲು

Date:

spot_img

ಹುಬ್ಬಳ್ಳಿ: ಧಾರ್ಮಿಕ ಸಾಮರಸ್ಯ ಕದಡುವ ಹೇಳಿಕೆಗಳಿಗಾಗಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಮಟ್ಟಣ್ಣನವರ್‌ ಹಾಗೂ ‘ಕುಡ್ಲ ರ‍್ಯಾಂಪೇಜ್’‌ ಎಂಬ ಯೂಟ್ಯೂಬ್‌ ವಾಹಿನಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗಿರೀಶ್‌ ಮಟ್ಟಣ್ಣನವರ್‌ ಅವರು ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಜೈನ ಸಮಾಜದ ಮುಖಂಡರಾದ ಅಜಿತ್‌ ಅವರು ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಗಿರೀಶ್‌ ಮಟ್ಟಣ್ಣನವರ್‌ ಅವರು ಜೈನ ಸಮುದಾಯದವರನ್ನು ‘ಕ್ರೂರರು, ಸ್ತ್ರೀಲೋಲರು, ಮತಾಂಧರು’ ಎಂದು ನಿಂದಿಸಿದ್ದಾರೆ. ಈ ಅವಹೇಳನಕಾರಿ ಮಾತುಗಳನ್ನು ಯಾವುದೇ ದಾಖಲೆಗಳಿಲ್ಲದೆ ‘ಕುಡ್ಲ ರ‍್ಯಾಂಪೇಜ್’‌ ಯೂಟ್ಯೂಬ್‌ ವಾಹಿನಿಯು ಪ್ರಸಾರ ಮಾಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ರೀತಿಯ ಹೇಳಿಕೆಗಳು ಜೈನ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಅಜಿತ್‌ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 299 ಮತ್ತು 196(1)(ಎ) ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಗಿರೀಶ್‌ ಮಟ್ಟಣ್ಣನವರ್‌ ಮತ್ತು ಯೂಟ್ಯೂಬ್‌ ವಾಹಿನಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೈನ ಸಮುದಾಯದ ಹಲವು ಮುಖಂಡರು ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ಕುರಿತು ತನಿಖೆ ಮುಂದುವರೆಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹೈದರಾಬಾದ್‌ನಲ್ಲಿ ಇಡಿ ಬಲೆಗೆ ‘ಬಾಹುಬಲಿ’ ರಾಣಾ: ಆನ್‌ಲೈನ್ ಬೆಟ್ಟಿಂಗ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬೆಟ್ಟಿಂಗ್ ಆಪ್‌ಗಳ ಪ್ರಚಾರ ವಿವಾದ: ನಟ ರಾಣಾ ದಗ್ಗುಬಾಟಿ ಇ.ಡಿ. ಎದುರು ಹಾಜರು, ತೆಲುಗು ಚಿತ್ರರಂಗದಲ್ಲಿ ಗರಿಗೆದರಿದ ಆತಂಕ

ಮೂತ್ರ ವಿಸರ್ಜನೆಗೆ ತೆರಳಿ ಪ್ರಪಾತಕ್ಕೆ ಬಿದ್ದ ಯುವಕ

ಚಾರ್ಮಾಡಿ ಘಾಟ್‌ನಲ್ಲಿ ಕಾಲು ಜಾರಿ 30 ಅಡಿ ಆಳಕ್ಕೆ ಬಿದ್ದ ಯುವಕನಿಗೆ ಗಂಭೀರ ಗಾಯ

ವಸೈನಲ್ಲಿ 12 ವರ್ಷದ ಬಾಲಕಿಯ ಮೇಲೆ 200ಕ್ಕೂ ಹೆಚ್ಚು ಮಂದಿ ಅತ್ಯಾಚಾರ; 10 ಮಂದಿ ಬಂಧನ

ಶಾಲೆ ಫೇಲ್ ಆಗಿದ್ದಕ್ಕೆ ಭಾರತಕ್ಕೆ ಬಂದಿದ್ದ ಬಾಂಗ್ಲಾ ಬಾಲಕಿ: ನಂಬಿದ ಮಹಿಳೆಯಿಂದಲೇ ವೇಶ್ಯಾವಾಟಿಕೆ ದಂಧೆಗೆ ಬಲಿ, 200ಕ್ಕೂ ಹೆಚ್ಚು ಪುರುಷರಿಂದ ಅತ್ಯಾಚಾರ

ಹೆಬ್ರಿ ಗಣೇಶೋತ್ಸವದ ಅಂಗವಾಗಿ ಅಂತರ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಇದರ ಸುವರ್ಣ ಸಂಭ್ರಮದ ಅಂಗವಾಗಿ ಹೆಬ್ರಿಯಲ್ಲಿ ಮೊದಲ ಬಾರಿಗೆ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು