
ಕಾರ್ಕಳ : “ಅನ್ಯಾಯದ ವಿರುದ್ಧ ನ್ಯಾಯ ಕೇಳಲು ಹೋರಾಟಕ್ಕೆ ಹೋದ ಅಮಾಯಕ ಹೆಣ್ಣು ಮಕ್ಕಳ ಜೊತೆ ರಾಜ್ಯದ ದುರಾಡಳಿತವು ತಾಲಿಬಾನ್ ಸಂಸ್ಕೃತಿ ಮೀರಿಸುವ ರೀತಿಯಲ್ಲಿ ವರ್ತಿಸುವುದು ಎಷ್ಟು ಸರಿ ? ಅತಿಯಾದರೆ ಅಮೃತವು ವಿಷ ಹಾಗಾಗಿ ಅತಿಯಾದ ಓಲೈಕೆ ಮುಂದೊಂದು ದಿನ ವಿಷವಾಗಿ ಕಾಡೀತು!
ಸಂವಿಧಾನದ ಪ್ರಕಾರ ಹೆಣ್ಣುಮಕ್ಕಳಿಗೆ ಮಹಿಳಾ ಪೇದೆಗಳು ಕಾನೂನು ಕ್ರಮ ತೆಗೆದು ಕೊಳ್ಳಬೇಕು ಎಂಬ ನಿಯಮ ಇರುವಾಗ ಇಂದು ಮಂಡ್ಯದಲ್ಲಿ ಪುರುಷ ಪೊಲೀಸ್ ಪೇದೆಯು ಮಹಿಳಾ ಹಕ್ಕಿನ ಸ್ಪಷ್ಟ ಉಲ್ಲಂಘನೆಯನ್ನು ಮಾಡಿದ್ದಾರೆ. ಸಂವಿಧಾನದ ಉಲ್ಲಂಘನೆ , ಮಹಿಳೆಯರ ಮೇಲೆ ಲಾಠಿ ಚಾರ್ಜು ಎಷ್ಟು ಸಮಂಜಸ ? ಹೇಗೆ ಕಾನೂನು ಕೈಗೆ ತೆಗೆದು ಕೊಂಡರು ? ಹಿಂದೂ ಮಹಿಳೆಯರಿಗೆ ಕರ್ನಾಟಕ ಸರಕಾರದಲ್ಲಿ ನ್ಯಾಯ ಇಲ್ಲವೇ ?
ಅತಿ ಶ್ರೀಘ್ರವಾಗಿ ಮಹಿಳೆಯ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸ್ ಪೇದೆಯ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳಬೇಕು. ಇಲ್ಲವಾದಲ್ಲಿ ಹಿಂದೂ ಮಹಿಳೆಯರು ಇನ್ನಷ್ಟು ರಸ್ತೆಗಿಳಿದು ಅನ್ಯಾಯದ ವಿರುದ್ಧ ಹೋರಾಡಬೇಕಾದೀತು. ನಮಗೆ ರಕ್ಷಣೆ ಕೊಡಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದರೆ ದಯವಿಟ್ಟು ತಿಳಿಸಿ ಅದೆಷ್ಟೋ ಹೋರಾಟಗಾರ್ತಿಯರು ಹುಟ್ಟಿದ ಮಣ್ಣಿನಲ್ಲಿ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುತೇವೆ. ನಿಮ್ಮ ಓಲೈಕೆ ಬಿಟ್ಟು ನ್ಯಾಯಕ್ಕೆ ಬಲವಾಗಿ ನಿಲ್ಲಿ, ನಿಮಗೆ ಬೇಕಾದಲ್ಲಿ ಹಿಂದೂ ಮಹಿಳೆಯರೇ ರಕ್ಷಣೆ ಕೊಡುತಾರೆ.”ಎಂದು ಸಾಮಾಜಿಕ ಚಿಂತಕಿಯಾದ ರಮಿತಾ ಶೈಲೇಂದ್ರರವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.