spot_img

ಹನಿಟ್ರ್ಯಾಪ್ ರಾಜ್ಯದಲ್ಲಿ ಕೆಟ್ಟ ಟ್ರೆಂಡ್! ಸಿಬಿಐ ತನಿಖೆಗೆ ಆಗ್ರಹಿಸಿದ ಶ್ರೀರಾಮುಲು

Date:

ಯಾದಗಿರಿ: ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚುತ್ತಿದ್ದು, ಇದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಸಚಿವ ಬಿ. ಶ್ರೀರಾಮುಲು ಆತಂಕ ವ್ಯಕ್ತಪಡಿಸಿದ್ದು, “ಹನಿಟ್ರ್ಯಾಪ್ ರಾಜ್ಯದ ರಾಜಕೀಯದಲ್ಲಿ ಒಂದು ಕೆಟ್ಟ ಟ್ರೆಂಡ್ ಆಗುತ್ತಿದೆ. ಜನಪ್ರತಿನಿಧಿಗಳ ವಿಶ್ವಾಸಾ ರ್ಹತೆ ಉಳಿಸಲು ಸಿಬಿಐ ತನಿಖೆ ಅಗತ್ಯ” ಎಂದು ಹೇಳಿದ್ದಾರೆ.

ಯಾದಗಿರಿಯ ಮಹಲ್ ರೋಜಾದಲ್ಲಿ ಮಾತನಾಡಿದ ಶ್ರೀರಾಮುಲು, “ಈ ಪ್ರಕರಣದಿಂದ ರಾಜ್ಯದ ಜನರಿಗೇ ಅಸಹ್ಯವಾಗುತ್ತಿದೆ. ಇದು ಯಾವುದೇ ಪಕ್ಷದವರ ವಿಚಾರವಲ್ಲ, ರಾಜಕಾರಣಿಗಳ ಮೇಲೆ ಸಾರ್ವಜನಿಕರು ಇಟ್ಟ ವಿಶ್ವಾಸ ಹಾಳಾಗದಂತೆ ನೋಡಿಕೊಳ್ಳಬೇಕು. ಹನಿಟ್ರ್ಯಾಪ್ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ, ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗುತ್ತದೆ” ಎಂದು ತಿಳಿಸಿದ್ದಾರೆ.

ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ ಮತ್ತು ಪ್ರಸ್ತುತ ಸಚಿವ ರಾಜಣ್ಣ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿ ಬರುತ್ತಿರುವುದಾಗಿ ಅವರು ಹೇಳಿದ್ದಾರೆ. “ಇದು ಯಾರ ಆಟ? ಯಾರು ಡೈರೆಕ್ಟರ್, ಯಾರು ಪ್ರೊಡ್ಯೂಸರ್? ಹನಿಟ್ರ್ಯಾಪ್ ಫ್ಯಾಕ್ಟರಿಯನ್ನು ನಡೆಸುತ್ತಿರುವವರು ಯಾರು ಎಂಬುದು ಬಹಿರಂಗವಾಗಬೇಕಾದರೆ, ತಪ್ಪದೇ ಸಿಬಿಐ ತನಿಖೆ ನಡೆಯಬೇಕು” ಎಂದು ಶ್ರೀರಾಮುಲು ಒತ್ತಿಹೇಳಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ಮುಂದೆ ಹಲಸಿನ ಬೀಜ ಬಿಸಾಡಬೇಡಿ! ಆರೋಗ್ಯಕ್ಕೆ ಬೆಟ್ಟದಷ್ಟು ಲಾಭ ನೀಡುವ ಗುಣವಿದೆ

ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.

ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ: ಎಂ.ಬಿ.ಎ ವಿದ್ಯಾರ್ಥಿ ಹಾಗೂ ತಬಲ ವಾದಕ ಸಂಕೀರ್ತನ್ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಿನ್ನಿಮುಲ್ಕಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಉಡುಪಿ: ಎರಡು ದಿನಗಳ ರೋಚಕ ಕಾರ್ಯಾಚರಣೆ ಬಳಿಕ ಒಂಟಿ ಸಲಗ ಸೆರೆ – ಗ್ರಾಮಸ್ಥರಿಗೆ ನಿಟ್ಟುಸಿರು!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ, ಕಮಲಶಿಲೆ ಹಾಗೂ ಹೊಸಂಗಡಿ ಭಾಗಗಳಲ್ಲಿ ಎರಡು ದಿನಗಳ ಕಾಲ ಆತಂಕ ಮೂಡಿಸಿದ್ದ ಒಂಟಿ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದು, ಸಕ್ರೆಬೈಲಿಗೆ ಕಳುಹಿಸಲಾಗಿದೆ.

ಇರ್ವತ್ತೂರು ಕೊಳಕೆ ಶಾಲೆಯಲ್ಲಿ ಉಚಿತ ನೋಟ್ಸ್ ಪುಸ್ತಕ ವಿತರಣೆ

ಸುಮಾರು 15 ವರ್ಷಗಳಿಂದ ಇರ್ವತ್ತೂರು ಕೊಳಕೆ ಶಾಲೆಗೆ ಶಾಲಾ ಹೆಮ್ಮೆಯ ಹಳೆವಿದ್ಯಾರ್ಥಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ ಎಸ್ ಕೋಟ್ಯಾನ್ ಮತ್ತು ಮುಂಬೈ ಉದ್ಯಮಿ ವಿಠ್ಠಲ ಎಸ್ ಅಮೀನ್ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ ನೀಡುತ್ತಿದ್ದು ,ಈ ಬಾರಿಯೂ ಕೊಡುಗೆ ನೀಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.