spot_img

ಹಿರಿಯಡಕ ಗ್ರೀನ್ ಪಾರ್ಕ್ ಶಾಲೆ : ಪರೀಕ್ಷಾ ಪೂರ್ವ ತಯಾರಿ ಬಗ್ಗೆ ತರಬೇತಿ

Date:

spot_img

ಹಿರಿಯಡಕದ ಗ್ರೀನ್ ಪಾರ್ಕ್ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಕುರಿತು ಒಂದು ವಿಶೇಷ ಕಾರ್ಯಾಗಾರ ನಡೆಯಿತು. ಜೇಸೀಐ ಭಾರತದ ರಾಷ್ಟ್ರೀಯ ತರಬೇತುದಾರರಾದ ಜೇಸಿ. ದೀಪಕ್ ರಾಜ್ ಅವರು ತರಬೇತಿ ನೀಡಿದರು. ಈ ಕಾರ್ಯಕ್ರಮವನ್ನು ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್, ನೇಜಾರ್ ಲೇಜಿಯನ್‌ನ ವತಿಯಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಲಾ ಪ್ರಾಂಶುಪಾಲರಾದ ಕ್ಲಾರಿನ್ ನಿಕೋಲಸ್ ಅವರು ದೀಪ ಬೆಳಗುವ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಸಿ.ಐ ನೇಜಾರ್ ಲೇಜಿಯನ್‌ನ ಅಧ್ಯಕ್ಷರಾದ ಸುರೇಶ್ ಅಮೀನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಿತ್ರ ಕುಮಾರ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಯಶ್ರೀ ತೆಂಡೂಲ್ಕರ್ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿದರೆ, ರಂಜಿತಾ ಅವರು ದೀಪಕ್ ರಾಜ್ ಅವರನ್ನು ಪರಿಚಯಿಸಿದರು. ಶುಭ್ರ ಶೆಟ್ಟಿ ಅವರು ವಂದನಾರ್ಪಣೆ ಮಾಡಿದರು. ಶಾಲೆಯ ಆಡಳಿತಾಧಿಕಾರಿ ಶೇಖರ್ ಗುಜ್ಜರ್ ಬೆಟ್ಟು, ಸಂಯೋಜಕಿಯರಾದ ಉಷಾ ರಾವ್ ಮತ್ತು ಗೀತಾ ಭಟ್ ಹಾಗೂ ಇತರ ಶಿಕ್ಷಕ-ಶಿಕ್ಷಕಿಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡವನ್ನು ನಿರ್ವಹಿಸುವುದು, ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು, ಉತ್ತಮ ಸ್ಮರಣ ಶಕ್ತಿಯನ್ನು ಗಳಿಸುವುದು ಹಾಗೂ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ಎಂಬ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿ, ಉತ್ತಮ ಫಲಿತಾಂಶ ಪಡೆಯಲು ಪ್ರೇರೇಪಿಸಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹೈದರಾಬಾದ್‌ನಲ್ಲಿ ಇಡಿ ಬಲೆಗೆ ‘ಬಾಹುಬಲಿ’ ರಾಣಾ: ಆನ್‌ಲೈನ್ ಬೆಟ್ಟಿಂಗ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬೆಟ್ಟಿಂಗ್ ಆಪ್‌ಗಳ ಪ್ರಚಾರ ವಿವಾದ: ನಟ ರಾಣಾ ದಗ್ಗುಬಾಟಿ ಇ.ಡಿ. ಎದುರು ಹಾಜರು, ತೆಲುಗು ಚಿತ್ರರಂಗದಲ್ಲಿ ಗರಿಗೆದರಿದ ಆತಂಕ

ಮೂತ್ರ ವಿಸರ್ಜನೆಗೆ ತೆರಳಿ ಪ್ರಪಾತಕ್ಕೆ ಬಿದ್ದ ಯುವಕ

ಚಾರ್ಮಾಡಿ ಘಾಟ್‌ನಲ್ಲಿ ಕಾಲು ಜಾರಿ 30 ಅಡಿ ಆಳಕ್ಕೆ ಬಿದ್ದ ಯುವಕನಿಗೆ ಗಂಭೀರ ಗಾಯ

ವಸೈನಲ್ಲಿ 12 ವರ್ಷದ ಬಾಲಕಿಯ ಮೇಲೆ 200ಕ್ಕೂ ಹೆಚ್ಚು ಮಂದಿ ಅತ್ಯಾಚಾರ; 10 ಮಂದಿ ಬಂಧನ

ಶಾಲೆ ಫೇಲ್ ಆಗಿದ್ದಕ್ಕೆ ಭಾರತಕ್ಕೆ ಬಂದಿದ್ದ ಬಾಂಗ್ಲಾ ಬಾಲಕಿ: ನಂಬಿದ ಮಹಿಳೆಯಿಂದಲೇ ವೇಶ್ಯಾವಾಟಿಕೆ ದಂಧೆಗೆ ಬಲಿ, 200ಕ್ಕೂ ಹೆಚ್ಚು ಪುರುಷರಿಂದ ಅತ್ಯಾಚಾರ

ಹೆಬ್ರಿ ಗಣೇಶೋತ್ಸವದ ಅಂಗವಾಗಿ ಅಂತರ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಇದರ ಸುವರ್ಣ ಸಂಭ್ರಮದ ಅಂಗವಾಗಿ ಹೆಬ್ರಿಯಲ್ಲಿ ಮೊದಲ ಬಾರಿಗೆ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು