spot_img

ಹಿರಿಯಡಕ ಗ್ರೀನ್ ಪಾರ್ಕ್ ಶಾಲೆ ಇಂಟರಾಕ್ಟ್ ಕ್ಲಬ್ ಪದ ಪ್ರದಾನ

Date:

spot_img

ಹಿರಿಯಡಕ : ಹಿರಿಯಡಕ ಗ್ರೀನ್ ಪಾರ್ಕ್‌ ಶಾಲೆಯಲ್ಲಿ ರೋಟರಿ ಪರ್ಕಳ ಇದರ ಪ್ರಾಯೋಜಕತ್ವದಲ್ಲಿ ಇಂಟಲ್ಯಾಕ್ಸ್ ಕ್ಲಬ್ ಪದ ಪ್ರದಾನ ಸಮಾರಂಭವನ್ನು ಪದ ಪ್ರದಾನ ಅಧಿಕಾರಿ ರೊ | PHF ಆತ್ರಾಡಿ ಪೃಥ್ವಿರಾಜ್ ಹೆಗ್ಡೆಯವರು ಕಾಲರ್ ಮತ್ತು ಗ್ಯಾವಲನ್ನು ಇಂಟರಾಕ್ಟ್ ಕ್ಲಬ್‌ ಅಧ್ಯಕ್ಷೆ ಕು| ಅನುಷಾ ಉಪಾಧ್ಯಾಯ ಅವರಿಗೆ ಹಸ್ತಾಂತರಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿಯೇ ಕಲಿಕೆಯೊಂದಿಗೆ ಸೇವಾ ಮನೋಭಾವನೆಯನ್ನು ರೂಢಿಸಿ ಕೊಳ್ಳಬೇಕೆಂದು ಹಿತವಚನ ನೀಡಿದರು.

ಪರ್ಕಳ ರೋಟರಿ ಕ್ಲಬ್‌ ಅಧ್ಯಕ್ಷರಾದ ರೊ PHF ಹಾಜಿ ಅಬೂಬಕರ್‌ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಪ್ರಾಂಶುಪಾಲೆ ಕ್ಲಾರಿನ್ ನಿಕೋಲಸ್, ಇಂಟರಾಕ್ಟ್ ಟೀಚರ್ ಕೋ-ಆರ್ಡಿನೇಟರ್ ಜಯಶ್ರೀ ತೆಂಡುಲ್ಕರ್ ಹಾಗೂ ರೊ| ಸತ್ಯಾನಂದ ನಾಯಕ್ ರವರು ಭಾಗವಹಿಸಿದ್ದರು.

ಇಂಟರಾಕ್ಟ್ ಕಾರ್ಯದರ್ಶಿ ತೇಜಸ್ ಆಚಾರ್ಯ ಗತವರ್ಷದ ವರದಿಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ರೋಟರಿ ನಿಕಟಪೂರ್ವ ಅಧ್ಯಕ್ಷರಾದ ರೊ | ರಾಮಮೂರ್ತಿ ಭಟ್, ರೊ 1 ಬಿ. ಹೆಚ್. ಶೆಟ್ಟಿಗಾರ್‌, ಶಾಲಾ ಆಡಳಿತಾಧಿಕಾರಿ ಶ್ರೀ ಶೇಕರ ಗುಜ್ಜರಬೆಟ್ಟು, ಸಂಯೋಜಕಿ ಉಷಾ ರಾವ್ ಮತ್ತು ಇತರ ಶಿಕ್ಷಕಿಯರು ಉಪಸ್ಥಿತರಿದ್ದರು. ರೊ | PHF ದಯಾನಂದ ನಾಯಕ್ ಪಿ. ಯವರು ಕಾರ್ಯಕ್ರಮ ನಿರೂಪಿಸಿ, ರೋಟರಿ ಕಾರ್ಯದರ್ಶಿ ರೋ | ವಿಶ್ವನಾಥ್ ನಾಯಕ್ ರವರು ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಎಲೋನ್ ಮಸ್ಕ್‌ನ ಗ್ರೋಕ್‌ನ ‘ಇಮ್ಯಾಜಿನ್’ ವೈಶಿಷ್ಟ್ಯಕ್ಕೆ ವಿವಾದಾತ್ಮಕ ‘ಸ್ಪೈಸಿ ಮೋಡ್’ ಸೇರ್ಪಡೆ

ಎಲೋನ್ ಮಸ್ಕ್ ಒಡೆತನದ xAI ಅಭಿವೃದ್ಧಿಪಡಿಸಿದ ಗ್ರೋಕ್ AI ಪ್ಲಾಟ್‌ಫಾರ್ಮ್, ತನ್ನ 'ಇಮ್ಯಾಜಿನ್' ವೈಶಿಷ್ಟ್ಯಕ್ಕೆ ಹೊಸ 'ಸ್ಪೈಸಿ ಮೋಡ್' ಅನ್ನು ಸೇರಿಸಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ಹೃದಯಾಘಾತದ ಮುನ್ಸೂಚನೆ: 10 ವರ್ಷಗಳ ಮೊದಲೇ ಈ ಬದಲಾವಣೆಗಳು ಕಾಣಿಸಿಕೊಳ್ಳಬಹುದು

ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ನಮ್ಮ ದೇಹವು ಹಲವು ವರ್ಷಗಳ ಮೊದಲೇ ಅದರ ಲಕ್ಷಣಗಳನ್ನು ಸೂಚಿಸಲು ಪ್ರಾರಂಭಿಸುತ್ತದೆ ಎಂದು ವೈದ್ಯರು ಮತ್ತು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ.

ಅಳಿಯನಿಂದಲೇ ಅತ್ತೆಯ ಭೀಕರ ಕೊಲೆ: ತುಮಕೂರಿನ ಶವದ ತುಂಡುಗಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಕೊರಟಗೆರೆ ರಸ್ತೆಗಳಲ್ಲಿ ಶವದ ತುಂಡುಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಳಿಯನೇ ತನ್ನ ಅತ್ತೆಯನ್ನು ಕೊಲೆ ಮಾಡಿ, ದೇಹವನ್ನು ತುಂಡು ತುಂಡಾಗಿ ಬಿಸಾಡಿರುವುದು ಬೆಳಕಿಗೆ ಬಂದಿದೆ.

ಧರ್ಮಸ್ಥಳದಲ್ಲಿ ಮತ್ತೊಂದು ವಿವಾದ: ಯೂಟ್ಯೂಬರ್ ‘ಕುಡ್ಲಾ ರಾಂ ಪೇಜ್’ ವಿರುದ್ಧ ಪ್ರಕರಣ ದಾಖಲು

ಧರ್ಮಸ್ಥಳದಲ್ಲಿ ವಿಡಿಯೋ ಚಿತ್ರೀಕರಣದ ವಿಚಾರದಲ್ಲಿ ನಡೆದ ವಾಗ್ವಾದವು ಹಲ್ಲೆ ಪ್ರಕರಣವಾಗಿ ಪರಿವರ್ತನೆಯಾಗಿದ್ದು, 'ಕುಡ್ಲಾ ರಾಂ ಪೇಜ್' ಎಂಬ ಯೂಟ್ಯೂಬ್ ಚಾನೆಲ್‌ನ ಯೂಟ್ಯೂಬರ್ ಮತ್ತು ಇಬ್ಬರು ಸಹಚರರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.