
ಕಾರ್ಕಳ : ತಾಲೂಕಿನ ಹಿರ್ಗಾನ ಗ್ರಾಮದ ಇತಿಹಾಸ ಪ್ರಸಿದ್ಧ ಹಾಡಿ ಮೂಲ ಗರಡಿ ಶ್ರೀ ಬ್ರಹ್ಮಬೈದರ್ಕಳ ಹಾಗೂ ಮಾಯಂದಾಲ ದೇವಿ ಸನ್ನಿಧಿಯಲ್ಲಿ ದಿನಾಂಕ 22-02-2026, ಭಾನುವಾರದಂದು ಭಕ್ತಿ ಸಂಭ್ರಮದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಶ್ರೀ ರಾಮಕ್ಷೇತ್ರ ಕನ್ಯಾಡಿಯ ಜಗದ್ಗುರು ಪೀಠದ ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಎಡಪದವು ವೇದಮೂರ್ತಿ ಬ್ರಹ್ಮಶ್ರೀ ಶ್ರೀ ವೆಂಕಟೇಶ ತಂತ್ರಿ ಇವರ ಆಚಾರ್ಯತ್ವದಲ್ಲಿ , ಶ್ರೀ ಶ್ರೀಕಾಂತ್ ಭಟ್ ಕಾನಂಗಿ ಇವರ ಸಹಭಾಗಿತ್ವದಲ್ಲಿ ಮಹಾ-ಚಂಡಿಕಾ ಯಾಗ ಮತ್ತು ವಿಖ್ಯಾತ ವಾಸ್ತುತಜ್ಞರು ಶ್ರೀ ಪ್ರಮಲ್ ಕುಮಾರ್, ಕಾರ್ಕಳ ಇವರ ಮಾರ್ಗದರ್ಶನದಲ್ಲಿ ನೂತನ ಸುತ್ತು ಪೌಳಿಯ ಶಿಲಾನ್ಯಾಸ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಲಿರುವುದು.
ಶ್ರೀ ಕ್ಷೇತ್ರದ ಪರಮ ಭಕ್ತರಾದ ಊರ – ಪರವೂರ ಮಹನೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಕ್ಷೇತ್ರದ ಸಿರಿ-ಮುಡಿ ಗಂಧ ಪ್ರಸಾದ ಸ್ವೀಕರಿಸಿ, ದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಸುತ್ತು ಪೌಳಿ ನವೀಕರಣ ಸಮಿತಿ, ಆಡಳಿತ ಮಂಡಳಿ, ತಂತ್ರಿಗಳು ಮತ್ತು ಅರ್ಚಕ ವರ್ಗ ಹಿರ್ಗಾನ ಗ್ರಾಮಸ್ಥರು ಹಾಗೂ ಊರ-ಪರವೂರ ಭಕ್ತಾಭಿಮಾನಿಗಳು ವಿನಂತಿಸಿಕೊಂಡಿದ್ದಾರೆ .



































