
ಬೈಲೂರು : ಹಿರಿಯಡ್ಕ ತಾಲ್ಲೂಕು ಬೈಲೂರು ಮಂಡಲದಲ್ಲಿ ನಡೆಯಲಿರುವ ಹಿಂದೂ ಸಂಗಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬೈಲೂರು, ಕೌಡೂರು, ಎರ್ಲಪಾಡಿ, ನೀರೆಕಣಜಾರು, ಜಾರ್ಕಳದ ಹಿಂದೂ ಪ್ರಮುಖರ ಉಪಸ್ಥಿತಿಯಲ್ಲಿ ಬೈಲೂರು ಮಾರಿಯಮ್ಮ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಈ ಕಾರ್ಯಕ್ರಮವು ದಿನಾಂಕ 25-01-2026 ಭಾನುವಾರದಂದು ನಡೆಯಲಿರುವುದು. ಕಾರ್ಯಕ್ರಮವು ಪ್ರಥಮವಾಗಿ
ಮಧ್ಯಾಹ್ನ 3-00 ಗಂಟೆಯಿಂದ ಬೈಲೂರು ಕೆಳಪೇಟೆ ಶ್ರೀ ರಾಮ ಮಂದಿರ ದಿಂದ ಶ್ರೀ ಮಾರಿಯಮ್ಮ ದೇವಸ್ಥಾನದ ವರಗೆ(ಬಸ್ ನಿಲ್ದಾಣದ ತನಕ) ಬೃಹತ್ ಶೋಭಾಯಾತ್ರೆಯೊಂದಿಗೆ ಸಾಗಿ ಬರಲಿದ್ದು ನಂತರ ಸಭಾ ಕಾರ್ಯಕ್ರಮ ನಡೆಯುವುದಾಗಿ ತಿಳಿಸಿರುತ್ತಾರೆ. ಕಾರ್ಯಕ್ರಮದಲ್ಲಿ 4000 ಕ್ಕೂ ಹೆಚ್ಚು ಹಿಂದೂ ಭಾಂದವರು ಸೇರುವ ನಿರೀಕ್ಷೆಯಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಭಾಗವಹಿಸಿ ಹಿಂದೂ ಶಕ್ತಿಯನ್ನು ತೋರಿಸುವಲ್ಲಿ ಯಶಸ್ವಿಯಾಗಬೇಕೆಂದು “ಬನ್ನಿಸೋದರರೇ – ಬನ್ನಿಬಾಂಧವರೇ – ಹೃದಯ ಹೃದಯಗಳ ಬೆಸೆಯೋಣ” ಎಂಬ ಸಂದೇಶದೊಂದಿಗೆ ಆಯೋಜಕರು ಕರೆ ನೀಡಿದ್ದಾರೆ. ಹಾಗೂ ಕಾರ್ಯಕ್ರಮದಲ್ಲಿ ಹಿಂದೂ ಸಂಗಮದ ಪೋಸ್ಟರನ್ನು ಬಿಡುಗಡೆ ಗೊಳಿಸಲಾಯಿತು.



































