
ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಇಂದಿರಾನಗರದ ಎಂಬಲ್ಲಿ ನೆಲೆಸಿರುವ ಕಾರಣಿಕ ಶಕ್ತಿ ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಇದೇ ಡಿಸೆಂಬರ್ 27, 2025ರ ಶನಿವಾರದಂದು ಅದ್ದೂರಿ ಹರಕೆಯ ಕೋಲ ಸೇವೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕ್ಷೇತ್ರದ ಆರಾಧಕರಾದ ಸಂತೋಷ್ ಹೆಬ್ರಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಧಾರ್ಮಿಕ ಉತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಕರಾವಳಿಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ದಿನದಂದು ಭಜನಾ ಸಂಕೀರ್ತನೆ, ಮಹಾಪೂಜೆ ಹಾಗೂ ದೈವದ ಕೋಲದ ಮೂಲಕ ಭಕ್ತರ ಕಷ್ಟ-ಕಾರ್ಪಣ್ಯಗಳಿಗೆ ದೈವವು ಅಭಯ ನೀಡಲಿದೆ.
ಕಾರ್ಯಕ್ರಮದ ಸಮಯ ಮತ್ತು ವಿವರ:
- ಸಂಜೆ 6:00 ರಿಂದ 8:00: ಸ್ಥಳೀಯ ಭಜನಾ ಮಂಡಳಿಗಳಿಂದ ಭಕ್ತಿ ರಸಮಂಜರಿ ಮತ್ತು ಭಜನಾ ಸೇವೆ ನಡೆಯಲಿದೆ.
- ರಾತ್ರಿ 8:10: ಸ್ವಾಮಿ ಕೊರಗಜ್ಜನಿಗೆ ವಿಶೇಷ ಮಹಾಪೂಜೆ ನೆರವೇರಲಿದ್ದು, ತದನಂತರ ಭಕ್ತರಿಗೆ ಗಂಧ-ಪ್ರಸಾದ ವಿತರಣೆ ಮಾಡಲಾಗುವುದು.
- ರಾತ್ರಿ 8:30: ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಆರಂಭವಾಗಲಿದ್ದು, ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ.
- ರಾತ್ರಿ 9:00: ‘ಸ್ವಾಮಿ ಕೊರಗಜ್ಜ ಕೋಲ ಸೇವೆ’ ಆರಂಭವಾಗಲಿದೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಅಜ್ಜನ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯು ಪ್ರಕಟಣೆಯಲ್ಲಿ ವಿನಂತಿಸಿದೆ.



































