
ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕರ ಸಂಕ್ರಾಂತಿ ಆಚರಿಸಲಾಯಿತು. ಕಾರ್ಕಳ ಎಸ್ ವಿ ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಜ್ಯೋತಿ ಪಾಟ್ಕರ್ ಮಾತನಾಡಿ , ಸಂಕ್ರಾಂತಿ ಹಬ್ಬವು ಪ್ರಕೃತಿಯ ಬದಲಾವಣೆಯ ಪರ್ವ ಕಾಲ, ಅದರಂತೆ ನಮ್ಮ ಒಳ್ಳೆತನದ ಪರ್ವಕಾಲವಾಗಬೇಕು. ಚಲನಶೀಲತೆಯು ಸಕಾರಾತ್ಮಕವಾದುದು, ಅದು ಮನುಷ್ಯನ ದೇಹ ಮತ್ತು ಮನಸ್ಸಿಗೆ ಬರಬೇಕು ಆದ್ದರಿಂದ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ, ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಸಂಸ್ಥೆಯ ಗುರುವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಗಗನ್ಯಾ ಸ್ವಾಗತಿಸಿ, ಪ್ರಾಂಜಲಿ ಪಿ ರಾವ್ ವಂದಿಸಿ, ಕೀರ್ತನ್ ನಾಯ್ಕ ನಿರೂಪಿಸಿದರು.




































