
ಹಿರಿಯಡ್ಕ: ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆ ಯಲ್ಲಿ ನ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಖ್ಯಾತ ನ್ಯಾಯವಾದಿ ಹಾಗೂ ನೋಟರಿ ಆತ್ರಾಡಿ ಪ್ರತ್ವಿರಾಜ್ ಹೆಗ್ಡೆ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಇಂಗ್ಲಿಷ್ ನೊಂದಿಗೆ ಕನ್ನಡದ ಬಗ್ಗೆ ಕೂಡ ಆಸಕ್ತಿ ಹೊಂದಿ ಕನ್ನಡಕ್ಕೆ ಮಾನ್ಯತೆ ನೀಡಬೇಕೆಂದು ಹಿತವಚನವನ್ನು ನೀಡಿದರು.
ಅರೆಕಾಲಿಕ ಕನ್ನಡ ಶಿಕ್ಷಕಿ ನಳಿನಾ ದೇವಿ ಯವರನ್ನು ಅವರ ಸೇವೆಗಾಗಿ ಗೌರವಿಸಿ ಸನ್ಮಾನಿಸಲಾಯಿತು.
ಪ್ರಾಂಶುಪಾಲೆ ಕ್ಲಾರಿನ್ ನಿಕೋಲಸ್ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ಶೇಕರ್ ಗುಜ್ಜರ್ ಬೆಟ್ಟು, ಉಪ ಪ್ರಾಂಶುಪಾಲೆ ಜಯಶ್ರೀ ತೆಂಡೂಲ್ಕರ್, ಸಂಯೋಜಕಿಯರಾದ ಗೀತಾ ಭಟ್, ಉಷಾ ಪ್ರಶಾಂತ್ ಹಾಗೂ ಕಾರ್ಯಕ್ರಮ ದ ನಿರ್ದೇಶಕಿ ಜಯಲಕ್ಷ್ಮಿ ಅಲ್ಲದೆ ಶಿಕ್ಷಕ – ಶಿಕ್ಷಕೇತರ ಸಿಬಂಧಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಗಳಾದ ಸೃಜನ್ ಸ್ವಾಗತಿಸಿ, ಆಗಮ್ ಪರಿಚಯಿಸಿ, ಸಿಂಚನ ಮೆಂಡನ್ ವಂದಿಸಿದರು. ಸಂಪ್ರೀತ್ ಕಾರ್ಯಕ್ರಮ ನಿರೂಪಿಸಿದರು.



































