spot_img

‘ಗುಡ್ ಬ್ಯಾಡ್ ಅಗ್ಲಿ’ ಹಿಟ್ ಆಗುತ್ತಿದ್ದಂತೇ ಕಾನೂನು ಸಂಕಷ್ಟ! ಇಳಯರಾಜರಿಂದ ಅಜಿತ್ ಚಿತ್ರತಂಡಕ್ಕೆ ನೋಟೀಸ್

Date:

ಚೆನ್ನೈ: ಟಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅಭಿನಯಿಸಿರುವ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ನಡೆಸುತ್ತಿರುವ ನಡುವೆಯೇ ಕಾನೂನು ಸವಾಲನ್ನು ಎದುರಿಸಿದೆ.

ಪ್ರೀಮಿಯರ್ ನಂತರ ಐದು ದಿನ ಕಳೆದರೂ ಸಿನಿಮಾ ಕುರಿತು ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಭಾರತದಲ್ಲಿ ಮಾತ್ರ 101.30 ಕೋಟಿ ರೂ. ಗಳಿಸಿರುವ ಈ ಚಿತ್ರ, ವರ್ಲ್ಡ್‌ವೈಡ್‌ನಲ್ಲಿ 170 ಕೋಟಿ ರೂ. ಗಳಿಕೆ ಮಾಡಿದೆ. ಇದು ಪ್ರದೀಪ್ ರಂಗನಾಥನ್ ಅವರ ‘ಡ್ರಾಗನ್’ (152 ಕೋಟಿ ರೂ.) ಸಿನಿಮಾಗಳಿಕೆಯನ್ನು ಮೀರಿಸಿದೆ.

ಆದರೆ, ಈಗ ಈ ಯಶಸ್ವಿ ಸಿನಿಮಾಕ್ಕೆ ಮ್ಯೂಸಿಕ್ ಲೆಜೆಂಡ್ ಇಳಯರಾಜ ಕಾಪಿರೈಟ್ ಉಲ್ಲಂಘನೆಯ ಆರೋಪ ಹೇರಿದ್ದಾರೆ. ‘ಓಥ್ ರುಬಾಯುಮ್ ತಾರೆನ್’, ‘ಇಲಮೈ ಇಧೋ ಇಧೋ’ ಮತ್ತು ‘ಎನ್ ಜೋಡಿ ಮಂಜ ಕುರುವಿ’ ಎಂಬ ತಮ್ಮ ಹಳೆ ಹಿಟ್ ಹಾಡುಗಳ ಬದಲಾಗಿದ ಆವೃತ್ತಿಗಳನ್ನು ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದರಿಂದಾಗಿ ಇಳಯರಾಜ ಅವರ ಕಾನೂನು ತಂಡ ಸಿನಿಮಾ ನಿರ್ಮಾಪಕರಿಗೆ ನೋಟೀಸ್ ನೀಡಿದ್ದು, ಹಾಡುಗಳನ್ನು ತಕ್ಷಣ ತೆಗೆದುಹಾಕಬೇಕು ಅಥವಾ 5 ಕೋಟಿ ರೂ. ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದೆ.

ಇದಕ್ಕೂ ಮುನ್ನ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡ ಕೂಡಾ ಇಳಯರಾಜ ಅವರ ಅನುಮತಿಯಿಲ್ಲದೆ ಹಾಡು ಬಳಸಿದ್ದಕ್ಕಾಗಿ 60 ಲಕ್ಷ ರೂ. ಪರಿಹಾರ ನೀಡಿ ವ್ಯಾಜ್ಯ ನಿವಾರಿಸಿತ್ತು.

‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದಲ್ಲಿ ಅಜಿತ್ ಜತೆ ತ್ರಿಷಾ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ದಾಸ್, ಸುನಿಲ್, ಪ್ರಿಯಾ ಪ್ರಕಾಶ್ ವಾರಿಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿವಿ ಪ್ರಕಾಶ್ ಸಂಗೀತ ನೀಡಿರುವ ಈ ಸಿನಿಮಾ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ತಮಾಷೆಯ ಮಾತು ಕೊಲೆಯಲ್ಲಿ ಅಂತ್ಯ: ಹಣ್ಣಿನ ವ್ಯಾಪಾರಿಗಳ ನಡುವಿನ ಜಗಳಕ್ಕೆ ಚಿಂತಾಮಣಿಯಲ್ಲಿ ದುರಂತ ಅಂತ್ಯ

ಚಿಂತಾಮಣಿ ಪಟ್ಟಣದಲ್ಲಿ ನಡೆದ ದಾರುಣ ಘಟನೆಯಲ್ಲಿ, ಇಬ್ಬರು ಗೆಳೆಯರ ನಡುವಿನ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಮೂಗಿನ ಹತ್ತಿರದ ಪಿಂಪಲ್ ಒಡೆಯುವ ಮೊದಲು ಯೋಚಿಸಿ: ಮೆದುಳಿನ ಸೋಂಕಿನ ಅಪಾಯಕ್ಕೆ ಸಿಲುಕಿಸುವ ಕರಾಳ ಸತ್ಯ!

ಮೊಡವೆಗಳನ್ನು ಒಡೆದರೆ ಅಥವಾ ಚಿವುಟಿದರೆ ಗಂಭೀರ ಸೋಂಕು ಉಂಟಾಗುವ ಸಾಧ್ಯತೆ ಇದೆ ಎಂದು ಚರ್ಮರೋಗ ತಜ್ಞರು ಎಚ್ಚರಿಕೆ ನೀಡುತ್ತಾರೆ.

ಡಾ.ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನದ ಉದ್ಘಾಟನೆ.

ದಿನಾಂಕ 10-09-2025 ರ ಬುಧವಾರದಂದು ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರೆಡು ದಿನಗಳ ಕಾಲ ನಡೆಯಲಿರುವ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.

ಉಡುಪಿ ಡಿಸ್ಟಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ (ರಿ.) ಅಧ್ಯಕ್ಷರಾಗಿ ಆಯ್ಕೆ

ಉಡುಪಿ ಡಿಸ್ಟಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ (ರಿ.) ಉಡುಪಿ ಇದರ ನೂತನ ಅಧ್ಯಕ್ಷರಾಗಿ ಶ್ರೀಯುತ ಸಂತೋಷ್ ಕುಮಾರ್ ಮೂಡಬಿದ್ರಿಯವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.