spot_img

ರಸ್ತೆ ಅಪಘಾತಕ್ಕೆ 1.5 ಲಕ್ಷ ರೂ.ವರೆಗೆ ಉಚಿತ ನಗದುರಹಿತ ಚಿಕಿತ್ಸೆ: ಕೇಂದ್ರ ಸರ್ಕಾರದ ಹೊಸ ಮಹತ್ವದ ಯೋಜನೆ

Date:

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆಯ ಕೊರತೆಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟುವ ಉದ್ದೇಶದಿಂದ, ಕೇಂದ್ರ ಸರಕಾರ ಮಹತ್ವದ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಅಪಘಾತದ ದಿನದಿಂದ ಆರಂಭಿಸಿ ಏಳು ದಿನಗಳವರೆಗೆ ₹1.5 ಲಕ್ಷ ಮಿತಿಯಲ್ಲಿ ನಗದುರಹಿತ ಚಿಕಿತ್ಸೆ ಲಭ್ಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ದೇಶದ ಯಾವುದೇ ರಸ್ತೆಯಲ್ಲಿ, ಯಾವುದೇ ರೀತಿಯ ವಾಹನದಿಂದ ಸಂಭವಿಸುವ ಅಪಘಾತಕ್ಕೂ ಈ ಯೋಜನೆ ಅನ್ವಯವಾಗಲಿದೆ. ಅಪಘಾತಕ್ಕೀಡಾದವರು ತಕ್ಷಣವೇ ಹತ್ತಿರದ ಆಯ್ದ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಮುಂಗಡ ಹಣ ಪಾವತಿಸದೇ ತುರ್ತು ಚಿಕಿತ್ಸೆಯನ್ನು ಪಡೆಯಬಹುದು. ದಾಖಲಾಗುವಾಗ ಯಾವುದೇ ದಾಖಲಾತಿ ನೀಡುವ ಅಗತ್ಯವಿಲ್ಲ. ಗಾಯಗೊಂಡಿರುವ ವಾಹನ ಸವಾರರು, ಪ್ರಯಾಣಿಕರು ಅಥವಾ ಪಾದಚಾರಿಗಳು ಎಲ್ಲರೂ ಯೋಜನೆಯ ಲಾಭ ಪಡೆಯಬಹುದಾಗಿದೆ.

ಈ ಯೋಜನೆಯಡಿ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಔಷಧ, ಶಸ್ತ್ರಚಿಕಿತ್ಸೆ, ಐಸಿಯು ಸೌಲಭ್ಯಗಳು ಎಲ್ಲವೂ ಒಳಗೊಂಡಿವೆ. ಪ್ರತಿ ಪ್ರಕರಣಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳು, ಎಫ್‌ಐಆರ್ ಪ್ರತಿಗಳು ಇಟ್ಟುಕೊಂಡರೆ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಸಚಿವಾಲಯ ತಿಳಿಸಿದೆ.

ಈ ಯೋಜನೆಯ ಜವಾಬ್ದಾರಿಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಹೊತ್ತಿದ್ದು, ಪೊಲೀಸರ, ಆಸ್ಪತ್ರೆಗಳ ಹಾಗೂ ರಾಜ್ಯ ಆರೋಗ್ಯ ಸಂಸ್ಥೆಗಳ ಸಹಯೋಗದಿಂದ ಹಣವನ್ನು ನೇರವಾಗಿ ಆಸ್ಪತ್ರೆಗಳಿಗೆ ಪಾವತಿಸಲಾಗುವುದು. ಈ ಯೋಜನೆಯ ಸುಗಮ ಜಾರಿಗಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸುವುದಾಗಿ ಹೇಳಿದೆ. 2024ರ ನವೆಂಬರ್‌ನಲ್ಲೇ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ನಂಜೆ ಪ್ರೌಢ ಶಾಲೆಯಲ್ಲಿ ಯು.ಎಸ್.ರಾಜಗೋಪಾಲ ಆಚಾರ್ಯರವರಿಂದ ಪಾಠ ಅಭ್ಯಾಸದ ಕುರಿತು ತರಬೇತಿ

ದಿನಾಂಕ 30-06-2025ರಂದು ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆ, ಇನ್ನಂಜೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಿವೃತ್ತ ಹಿಂದಿ ಶಿಕ್ಷಕ ಯು.ಎಸ್.ರಾಜಗೋಪಾಲ ಆಚಾರ್ಯ ಇವರು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಯಾವ ರೀತಿ ಓದಬೇಕು. ಪಾಠ ಅಭ್ಯಾಸ ಮಾಡುವ ರೀತಿಯ ಬಗ್ಗೆ ತರಬೇತಿ ನೀಡಿದರು.

ಶ್ರೀರಾಮ ಸಂಗೀತಾಲಯದ ಉದ್ಘಾಟನಾ ಸಮಾರಂಭ

ಶ್ರೀರಾಮ ಸಂಗೀತಾಲಯದ ಉದ್ಘಾಟನಾ ಸಮಾರಂಭವು ವಿದ್ವಾನ್ ಶ್ರೀ ಅಶೋಕ್ ಆಚಾರ್ಯ ಸೈಬ್ರಾಕಟ್ಟೆ, ವಿದ್ವಾನ್ ಶ್ರೀ ಯಶವಂತ್ ಎಂ. ಜಿ, ಶ್ರೀ ರಾಘವೇಂದ್ರ ತೆಳ್ಳಾರು ರಸ್ತೆ ಕಾರ್ಕಳ, ಶ್ರೀ ಜಯರಾಮ ಆಚಾರ್ಯ ಕೋಟ್ನಕಟ್ಟೆ, ಹಿರಿಯಡಕ ಇವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ ಇಲ್ಲಿ ನಡೆಯಿತು.

ಮಾಜಿ ಶಾಸಕರಾದ ಗೋಪಾಲ ಭಂಡಾರಿಯವರ 6ನೇ ಪುಣ್ಯಸ್ಮರಣೆ: ಕಾರ್ಕಳದಲ್ಲಿ ರಕ್ತದಾನ ಶಿಬಿರ ಮತ್ತು ಸಸಿ ವಿತರಣೆ ಕಾರ್ಯಕ್ರಮ

ಮಾಜಿ ಶಾಸಕ ದಿ. ಹೆಚ್. ಗೋಪಾಲ ಭಂಡಾರಿಯವರ 6ನೇ ಪುಣ್ಯಸ್ಮರಣೆಯ ಅಂಗವಾಗಿ, ಕಾರ್ಕಳದಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಕೊಪ್ಪದ ಮೊರಾರ್ಜಿ ಶಾಲೆಯಲ್ಲಿ ದುರಂತ! 9ನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆ

ಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮತ್ತೊಂದು ಆತ್ಮಹತ್ಯೆ ದುರಂತ ಸಂಭವಿಸಿದೆ. ಬೊಮ್ಲಾಪುರದ ಸಮೀಪದ ಹೊಕ್ಕಳಿಕೆ ಗ್ರಾಮದ 14 ವರ್ಷದ ವಿದ್ಯಾರ್ಥಿನಿ ಶಮಿತಾ, ಶನಿವಾರ ಬೆಳಿಗ್ಗೆ ಶಾಲೆಯ ಹಾಸ್ಟೆಲ್ ಬಾತ್ ರೂಮ್‌ನಲ್ಲಿ ಚೂಡಿದಾರ ವೇಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.