spot_img

ಅಲೆವೂರಿನಲ್ಲಿ ಹರೇ ಕೃಷ್ಣ ಭಜನಾ ಕುಟೀರದ ಶಿಲಾನ್ಯಾಸ ಕಾರ್ಯಕ್ರಮ

Date:

ಉಡುಪಿ:ಹರೇ ಕೃಷ್ಣ ಪ್ರಚಾರ ಕೇಂದ್ರ, ಉಡುಪಿಯ ನೇತೃತ್ವದಲ್ಲಿ ನೂತನ ‘ಹರೇ ಕೃಷ್ಣ ಭಜನಾ ಕುಟೀರ’ ನಿರ್ಮಾಣದ ಶಿಲಾನ್ಯಾಸ ಸಮಾರಂಭವು ಬರುವ ಏಪ್ರಿಲ್ 11, 2025ರಂದು ಬೆಳಿಗ್ಗೆ 9.30 ಗಂಟೆಗೆ ಉಡುಪಿಯ ಅಲೆವೂರು ಗ್ರಾಮದ ಹೊನ್ನೆಕೋಡಿಯಲ್ಲಿ ನೆರವೇರಲಿದೆ.

ಈ ಶಿಲಾನ್ಯಾಸವನ್ನು ಉಡುಪಿಯ ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ತಮ್ಮ ಅಮೃತ ಹಸ್ತದಿಂದ ನೆರವೇರಿಸಲಿದ್ದಾರೆ.

ಹರಿನಾಮ ಪ್ರಚಾರ ಮತ್ತು ಭಕ್ತಿ ಚಟುವಟಿಕೆಗಳ ಮೂಲಕ ಕಳೆದ ಹದಿನೈದು ವರ್ಷಗಳಿಂದ ಜಗದ್ಗುರು ಶ್ರೀಪಾದ ಮಧ್ವಾಚಾರ್ಯರ ತತ್ತ್ವ ಮತ್ತು ಶ್ರೀಲ ಪ್ರಭುಪಾದರ ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸುತ್ತಿರುವ ಹರೇ ಕೃಷ್ಣ ಪ್ರಚಾರ ಕೇಂದ್ರವು, ಈಗ ಈ ಸೇವಾ ಕಾರ್ಯವನ್ನು ಇನ್ನಷ್ಟು ವ್ಯಾಪಕಗೊಳಿಸುವ ಉದ್ದೇಶದಿಂದ ಅಲೆವೂರಿನಲ್ಲಿ ಭಜನಾ ಮಂದಿರ ನಿರ್ಮಾಣಕ್ಕೆ ಮುಂದಾಗಿದೆ.

ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಸಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ಕೃಷ್ಣ ಮುಖ್ಯಪ್ರಾಣರ ಕೃಪೆಗೆ ಪಾತ್ರರಾಗುವಂತೆ ರಾಜೇಶ್ ಶೆಟ್ ಬಿ ಅಧ್ಯಕ್ಷರು, ಹರೇ ಕೃಷ್ಣ ಪ್ರಚಾರ ಕೇಂದ್ರ, ಉಡುಪಿ ಮತ್ತು ಭಕ್ತ ವೃಂದದವರು ಹೃದಯಪೂರ್ವಕವಾಗಿ ಕೋರಿದ್ದಾರೆ.

ಸಂಪರ್ಕಕ್ಕೆ:
ಹರೇ ಕೃಷ್ಣ ಪ್ರಚಾರ ಕೇಂದ್ರ,
ಮಹಾಲಸಾ No.7-2-95C, ಪಿಳಿಚಂಡಿ ಮಾರ್ಗ, ಬೀಡಿನಗುಡ್ಡೆ ಉಡುಪಿ 576101
ದೂರವಾಣಿ: 9900096737

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ: ಮಂಗಳೂರು ಉರ್ವ ಠಾಣೆಯಲ್ಲಿ ಎಫ್‌ಐಆರ್!

ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಪುನೀತ್ ಕೆರೆಹಳ್ಳಿಯವರ ವಿರುದ್ಧ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಂತಿಯುತ ಬಕ್ರೀದ್‌ಗೆ ಮುನ್ನೆಚ್ಚರಿಕೆ ಕ್ರಮ: ಅನಧಿಕೃತ ಜಾನುವಾರು ವಧೆ ಹಾಗೂ ಸಾಗಾಣಿಕೆಗೆ ಕಡಿವಾಣ – ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ

ಬರುವ ಬಕ್ರೀದ್ ಹಬ್ಬದ ಆಚರಣೆಯ ವೇಳೆ ಜಾನುವಾರುಗಳ ಅನಧಿಕೃತ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಐಪಿಎಲ್ ಗೆಲುವಿಗೆ ದೇವರ ಆಶೀರ್ವಾದ? ವಿರಾಟ್-ಅನುಷ್ಕಾ ಭಕ್ತಿಯ ಹಿನ್ನಲೆ ಇದೀಗ ಚರ್ಚೆಗೆ ಕಾರಣ

ಐಪಿಎಲ್ ಟ್ರೋಫಿ ಗೆದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಭಾವುಕರಾದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಜೋಡಿ ಪಂದ್ಯಕ್ಕೂ ಮುನ್ನ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದ್ದ ವಿಚಾರವೂ ಇದೀಗ ಮತ್ತೆ ಬೆಳಕಿಗೆ ಬಂದಿದೆ.

ಆರ್‌ಸಿಬಿ ಅಭಿಮಾನಿ ಮೂಲ್ಕಿ ಮೂಲದ ಅಕ್ಷತಾ ಕಾಲ್ತುಳಿತದಿಂದ ಸಾವು: ಟೀಶರ್ಟ್‌ನಿಂದ ಗುರುತು ಹಚ್ಚಿದ ಪತಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಿದ್ದಾಪುರದ ಅಕ್ಷತಾ (27) ಮೃತಪಟ್ಟಿದ್ದಾರೆ. ಆರ್‌ಸಿಬಿ ಟೀಶರ್ಟ್‌ನಿಂದ ಪತ್ನಿಯ ಗುರುತನ್ನು ಗಂಡ ಆಶಯ್ ಪತ್ತೆ ಹಚ್ಚಿದರು.