spot_img

ಅಲೆವೂರಿನಲ್ಲಿ ಹರೇ ಕೃಷ್ಣ ಭಜನಾ ಕುಟೀರದ ಶಿಲಾನ್ಯಾಸ ಕಾರ್ಯಕ್ರಮ

Date:

spot_img

ಉಡುಪಿ:ಹರೇ ಕೃಷ್ಣ ಪ್ರಚಾರ ಕೇಂದ್ರ, ಉಡುಪಿಯ ನೇತೃತ್ವದಲ್ಲಿ ನೂತನ ‘ಹರೇ ಕೃಷ್ಣ ಭಜನಾ ಕುಟೀರ’ ನಿರ್ಮಾಣದ ಶಿಲಾನ್ಯಾಸ ಸಮಾರಂಭವು ಬರುವ ಏಪ್ರಿಲ್ 11, 2025ರಂದು ಬೆಳಿಗ್ಗೆ 9.30 ಗಂಟೆಗೆ ಉಡುಪಿಯ ಅಲೆವೂರು ಗ್ರಾಮದ ಹೊನ್ನೆಕೋಡಿಯಲ್ಲಿ ನೆರವೇರಲಿದೆ.

ಈ ಶಿಲಾನ್ಯಾಸವನ್ನು ಉಡುಪಿಯ ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ತಮ್ಮ ಅಮೃತ ಹಸ್ತದಿಂದ ನೆರವೇರಿಸಲಿದ್ದಾರೆ.

ಹರಿನಾಮ ಪ್ರಚಾರ ಮತ್ತು ಭಕ್ತಿ ಚಟುವಟಿಕೆಗಳ ಮೂಲಕ ಕಳೆದ ಹದಿನೈದು ವರ್ಷಗಳಿಂದ ಜಗದ್ಗುರು ಶ್ರೀಪಾದ ಮಧ್ವಾಚಾರ್ಯರ ತತ್ತ್ವ ಮತ್ತು ಶ್ರೀಲ ಪ್ರಭುಪಾದರ ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸುತ್ತಿರುವ ಹರೇ ಕೃಷ್ಣ ಪ್ರಚಾರ ಕೇಂದ್ರವು, ಈಗ ಈ ಸೇವಾ ಕಾರ್ಯವನ್ನು ಇನ್ನಷ್ಟು ವ್ಯಾಪಕಗೊಳಿಸುವ ಉದ್ದೇಶದಿಂದ ಅಲೆವೂರಿನಲ್ಲಿ ಭಜನಾ ಮಂದಿರ ನಿರ್ಮಾಣಕ್ಕೆ ಮುಂದಾಗಿದೆ.

ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಸಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ಕೃಷ್ಣ ಮುಖ್ಯಪ್ರಾಣರ ಕೃಪೆಗೆ ಪಾತ್ರರಾಗುವಂತೆ ರಾಜೇಶ್ ಶೆಟ್ ಬಿ ಅಧ್ಯಕ್ಷರು, ಹರೇ ಕೃಷ್ಣ ಪ್ರಚಾರ ಕೇಂದ್ರ, ಉಡುಪಿ ಮತ್ತು ಭಕ್ತ ವೃಂದದವರು ಹೃದಯಪೂರ್ವಕವಾಗಿ ಕೋರಿದ್ದಾರೆ.

ಸಂಪರ್ಕಕ್ಕೆ:
ಹರೇ ಕೃಷ್ಣ ಪ್ರಚಾರ ಕೇಂದ್ರ,
ಮಹಾಲಸಾ No.7-2-95C, ಪಿಳಿಚಂಡಿ ಮಾರ್ಗ, ಬೀಡಿನಗುಡ್ಡೆ ಉಡುಪಿ 576101
ದೂರವಾಣಿ: 9900096737

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅತಿಯಾದ ಯೋಚನೆ ಅಪಾಯಕಾರಿ: ಮಾನಸಿಕ ಆರೋಗ್ಯ ಕಾಪಾಡಲು ತಜ್ಞರ ಸಲಹೆಗಳು!

ಅತಿಯಾಗಿ ಯೋಚಿಸುವುದು ಮೇಲ್ನೋಟಕ್ಕೆ ಹಾನಿಕರವಲ್ಲ ಎನಿಸಿದರೂ, ಅದು ನಿಧಾನವಾಗಿ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

ತಮಿಳುನಾಡು ವಿಧಾನಸಭಾ ಚುನಾವಣೆ: ಅಣ್ಣಾಮಲೈ ಸ್ಪರ್ಧೆ ಅನುಮಾನ, ರಾಷ್ಟ್ರಮಟ್ಟದ ಜವಾಬ್ದಾರಿಗೆ ಸಿದ್ಧತೆ?

ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಬುಧವಾರ ಮೂಲಗಳು ತಿಳಿಸಿವೆ.

ಕೆಂಪುಕಲ್ಲು-ಮರಳು ಸಮಸ್ಯೆ: ಕರಾವಳಿ ಬಿಜೆಪಿ ನಿಯೋಗದಿಂದ ಸಿಎಂಗೆ ಮನವಿ ಸಲ್ಲಿಕೆ!

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೀವ್ರ ಸಮಸ್ಯೆಯಾಗಿರುವ ಕೆಂಪುಕಲ್ಲು ಮತ್ತು ಮರಳಿನ ಕೊರತೆ ನೀಗಿಸಲು ಜಿಲ್ಲೆಯ ಸಂಸದರು, ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ: ಆರು IAS, ನಾಲ್ಕು IFS, ಓರ್ವ IPS ಅಧಿಕಾರಿಗಳ ವರ್ಗಾವಣೆ!

ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಆರು ಮಂದಿ ಐಎಎಸ್ ಅಧಿಕಾರಿಗಳು, ನಾಲ್ಕು ಐಎಫ್‌ಎಸ್ ಅಧಿಕಾರಿಗಳು ಹಾಗೂ ಓರ್ವ ಐಪಿಎಸ್ ಅಧಿಕಾರಿ ಸೇರಿದಂತೆ ಒಟ್ಟು 11 ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ತಕ್ಷಣದಿಂದ ಜಾರಿಗೆ ಬರುವಂತೆ ಹೊಸ ಹುದ್ದೆಗಳನ್ನು ನಿಯೋಜಿಸಿದೆ.