spot_img

ಹೋಳಿ ಹಬ್ಬದಂದು ಚರ್ಮ ಕಾಪಾಡಲು ಈ ಟಿಪ್ಸ್ ಅನ್ನು ತಪ್ಪದೆ ಅನುಸರಿಸಿ

Date:

spot_img
spot_img

ಬೆಂಗಳೂರು: ಬಣ್ಣಗಳ ಹಬ್ಬ ಹೋಳಿ ಈ ವರ್ಷ ಮಾರ್ಚ್ 13ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಣ್ಣಗಳೊಂದಿಗೆ ಆಟವಾಡುವಾಗ ತ್ವಚೆಗೆ ಹಾನಿ ಉಂಟಾಗದಂತೆ ಜಾಗರೂಕತೆ ವಹಿಸುವುದು ಮುಖ್ಯ.

ಚರ್ಮ ಆರೋಗ್ಯವನ್ನು ಕಾಪಾಡಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್:

ಪೂರ್ಣ ತೋಳಿನ ಉಡುಪು ಧರಿಸಿ: ದೇಹದ ಭಾಗಗಳಿಗೆ ನೇರವಾಗಿ ಬಣ್ಣ ಬೀಳದಂತೆ ಉದ್ದವಾದ ಬಟ್ಟೆ ಧರಿಸುವುದು ಉತ್ತಮ.

ಐಸ್ ಕ್ಯೂಬ್ ಮಸಾಜ್ ಮಾಡಿ: ಆಟವಾಡಲು ಹೋಗುವ ಮುನ್ನ ಚರ್ಮಕ್ಕೆ ಐಸ್‌ ಕ್ಯೂಬ್‌ ಹಚ್ಚಿ ಮಸಾಜ್ ಮಾಡಿದರೆ ರಂಧ್ರಗಳು ಮುಚ್ಚಿ ಬಣ್ಣದ ಹಾನಿ ಕಡಿಮೆಯಾಗುತ್ತದೆ.

ಮಾಯಿಶ್ಚರೈಸರ್ ಬಳಸಿ: ಸೂರ್ಯನ ಕಿರಣ ಹಾಗೂ ಬಣ್ಣದ ಹಾನಿಕಾರಕ ಅಂಶಗಳಿಂದ ತ್ವಚೆಯನ್ನು ರಕ್ಷಿಸಲು ಮಾಯಿಶ್ಚರೈಸರ್ ಅನಿವಾರ್ಯ.

ಸನ್ ಸ್ಕ್ರೀನ್ ಬಳಕೆ ಮಾಡಿರಿ: ಬಟ್ಟೆಯಿಂದ ಮುಚ್ಚಿದರೂ ಸನ್‌ಸ್ಕ್ರೀನ್ ಬಳಸುವುದು ಚರ್ಮಕ್ಕೆ ರಕ್ಷಣೆ ನೀಡುತ್ತದೆ.

ಫೇಸ್ ಮಾಸ್ಕ್ ಅನ್ವಯಿಸಿ: ಹೋಳಿ ಆಟವಾಡಲು ಮುನ್ನ ನೈಸರ್ಗಿಕ ಫೇಸ್ ಮಾಸ್ಕ್ ಬಳಸಿ ಚರ್ಮವನ್ನು ಆರೈಕೆ ಮಾಡಿಕೊಳ್ಳಿ.

ಚರ್ಮಕ್ಕೆ ಎಣ್ಣೆ ಹಚ್ಚಿ: ತ್ವಚೆಗೆ ಎಣ್ಣೆ ಹಚ್ಚುವುದರಿಂದ ಬಣ್ಣದ ಹಾನಿ ಕಡಿಮೆ ಮಾಡಬಹುದು.

ಮೇಕಪ್ ಬೇಡ: ಬಣ್ಣಗಳೊಂದಿಗೆ ಮೇಕಪ್ ಮಿಶ್ರಣವಾಗುವುದರಿಂದ ಚರ್ಮದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮೇಕಪ್ ಇಲ್ಲದೇ ಇರುವುದೇ ಒಳ್ಳೆಯದು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ನಿಧನಕ್ಕೆ ದಿನಕರ ಶೆಟ್ಟಿ ಪಳ್ಳಿ ಸಂತಾಪ

ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (48) ಅವರ ಆತ್ಮಹತ್ಯೆಯ ದುರಂತ ಸಾವಿನ ವಿಷಯ ತಿಳಿದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ದಿನಕರ ಶೆಟ್ಟಿ, ಪಳ್ಳಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಪಾಸ್‌ಪೋರ್ಟ್‌ ವಿಷಯಕ್ಕೆ ಜಗಳ: ಮಗಳ ಎದುರೇ ಹೆಂಡತಿಯನ್ನು ಗುಂಡಿಟ್ಟು ಕೊಂದ ಪತಿ

ಪಾಸ್‌ಪೋರ್ಟ್ ವಿಚಾರವಾಗಿ ನಡೆದ ಜಗಳದಲ್ಲಿ ಪತಿಯೋರ್ವ ತನ್ನ ಮಗಳ ಎದುರೇ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಂಗಳವಾರ (ಅ. 14) ಬೆಳಗ್ಗೆ ನಡೆದಿದೆ.

ಜಿಟೆಕ್ಸ್ ಗ್ಲೋಬಲ್ 2025: ವೀಸಾ ಉಲ್ಲಂಘನೆ ಪತ್ತೆಗೆ ಎ.ಐ. ಶಸ್ತ್ರ ಸಜ್ಜಿತ ಸ್ಮಾರ್ಟ್ ಕಾರುಗಳು – ದುಬೈಯಿಂದ ತಂತ್ರಜ್ಞಾನದ ಹೊಸ ದಾಪುಗಾಲು

ದುಬೈನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನವಾದ ಜಿಟೆಕ್ಸ್ ಗ್ಲೋಬಲ್ 2025 ಮತ್ತೊಮ್ಮೆ ವಿಶ್ವದ ಗಮನವನ್ನು ಸೆಳೆದಿದೆ

ಭಾರತದಲ್ಲಿ AI ಹಬ್‌: $15 ಬಿಲಿಯನ್ ಹೂಡಿಕೆಗೆ ಮುಂದಾದ ಗೂಗಲ್; ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಸುಂದರ್ ಪಿಚೈ

ಟೆಕ್ ದೈತ್ಯ ಗೂಗಲ್‌ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ಅವರು ಮಂಗಳವಾರ (ಅ. 14) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃತಕ ಬುದ್ಧಿಮತ್ತೆ (AI) ಕುರಿತು ಮಹತ್ವದ ಮಾತುಕತೆ ನಡೆಸಿದರು.