spot_img

ದಕ್ಷಿಣ ಕನ್ನಡದಲ್ಲಿ 5,000 ಶಾಲಾ ಮಕ್ಕಳ ದೃಷ್ಟಿ ದೋಷ ಪತ್ತೆ!

Date:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಮಕ್ಕಳ ದೃಷ್ಟಿ ಸಮಸ್ಯೆ ಗಂಭೀರವಾಗಿದ್ದು, 5,000 ಮಕ್ಕಳಲ್ಲಿ ದೃಷ್ಟಿ ದೋಷ ಪತ್ತೆಯಾಗಿದೆ. ಈ ಪೈಕಿ 4,000ಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡಕ ಧರಿಸುವುದು ಅಗತ್ಯವಾಗಿದೆ. ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲದೆ ಖಾಸಗಿ ಶಾಲೆಗಳ ಮಕ್ಕಳಿಗೂ ಈ ಸಮಸ್ಯೆ ವ್ಯಾಪಕವಾಗಿದೆ.

6 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ದೃಷ್ಟಿ ದೋಷದ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆ. ಕೆಲವರಿಗೆ ಸೌಮ್ಯ ಸಮಸ್ಯೆಯಾದರೆ, ಹಲವರಿಗೆ ತಕ್ಷಣ ಚಿಕಿತ್ಸೆಯ ಅಗತ್ಯವಿದೆ. ದೂರದರ್ಶನ ವೀಕ್ಷಣೆ, ಮೊಬೈಲ್ ಫೋನ್ ಬಳಕೆ ಹೆಚ್ಚಿದಂತೆ ಮಕ್ಕಳ ದೃಷ್ಟಿ ಶಕ್ತಿ ಕುಗ್ಗುತ್ತಿದೆ. ಆಟವಾಡುವ ಮಕ್ಕಳಿಗೂ ಈಗ ಕನ್ನಡಕ ಅನಿವಾರ್ಯವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ಭಾರಿ ತಪಾಸಣೆ:
ಜಿಲ್ಲಾದ್ಯಂತ 1,376 ಶಾಲೆಗಳಲ್ಲಿ ಆರೋಗ್ಯ ಇಲಾಖೆಯು ಕಣ್ಣಿನ ತಪಾಸಣೆ ನಡೆಸಿದ್ದು, 1,45,951 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದೆ.

1,106 ಸರ್ಕಾರಿ ಶಾಲೆಗಳ 1,01,592 ವಿದ್ಯಾರ್ಥಿಗಳು
270 ಅನುದಾನಿತ ಶಾಲೆಗಳ 44,359 ವಿದ್ಯಾರ್ಥಿಗಳು

ಈ ಪರೀಕ್ಷೆಯಲ್ಲಿ 3,738 ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮತ್ತು 660 ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ದೃಷ್ಟಿ ದೋಷ ಪತ್ತೆಯಾಗಿದೆ. ಅವರಲ್ಲಿ ಹೆಚ್ಚಿನವರಿಗೆ ಈಗಾಗಲೇ ಕನ್ನಡಕ ವಿತರಿಸಲಾಗಿದೆ. ಆದರೆ ಖಾಸಗಿ ಶಾಲೆಗಳ ಡೇಟಾ ಇಲ್ಲದೆ, ಅಲ್ಲಿಯ ಮಕ್ಕಳ ಸ್ಥಿತಿ ಇನ್ನೂ ಅಜ್ಞಾತವಾಗಿದೆ.

ಮಕ್ಕಳ ದೃಷ್ಟಿ ರಕ್ಷಣೆಗೆ ಏನು ಮಾಡಬೇಕು?

  • ಮೊಬೈಲ್, ಟಿವಿ ವೀಕ್ಷಣೆಯನ್ನು ನಿಯಂತ್ರಿಸಲು ಪೋಷಕರ ಜವಾಬ್ದಾರಿ
    ಹೆಚ್ಚಾಗಿದೆ.
  • ಮಕ್ಕಳನ್ನು ಬಹುಪಾಲು ಬಾಯಲಿಗೆ ಕಳಿಸಿ ನೈಸರ್ಗಿಕ ಬೆಳಕಿನಲ್ಲಿ ಹೆಚ್ಚು
    ಸಮಯ ಕಳೆಯಲು ಉತ್ತೇಜಿಸಬೇಕು.
  • ಶಾಲೆಗಳಲ್ಲಿ ದೃಷ್ಟಿ ತಪಾಸಣೆ ನಿಯಮಿತವಾಗಿ ನಡೆಯಬೇಕು.

ಇದು ಆರೋಗ್ಯಕರ ಸಮಾಜಕ್ಕೆ ಕಳವಳಕಾರಿ ಬೆಳವಣಿಗೆ. ಸಮಗ್ರ ತಪಾಸಣೆ ಮತ್ತು ಪ್ರತಿರೋಧಕ ಕ್ರಮಗಳ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ: ಮಂಗಳೂರು ಉರ್ವ ಠಾಣೆಯಲ್ಲಿ ಎಫ್‌ಐಆರ್!

ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಪುನೀತ್ ಕೆರೆಹಳ್ಳಿಯವರ ವಿರುದ್ಧ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಂತಿಯುತ ಬಕ್ರೀದ್‌ಗೆ ಮುನ್ನೆಚ್ಚರಿಕೆ ಕ್ರಮ: ಅನಧಿಕೃತ ಜಾನುವಾರು ವಧೆ ಹಾಗೂ ಸಾಗಾಣಿಕೆಗೆ ಕಡಿವಾಣ – ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ

ಬರುವ ಬಕ್ರೀದ್ ಹಬ್ಬದ ಆಚರಣೆಯ ವೇಳೆ ಜಾನುವಾರುಗಳ ಅನಧಿಕೃತ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಐಪಿಎಲ್ ಗೆಲುವಿಗೆ ದೇವರ ಆಶೀರ್ವಾದ? ವಿರಾಟ್-ಅನುಷ್ಕಾ ಭಕ್ತಿಯ ಹಿನ್ನಲೆ ಇದೀಗ ಚರ್ಚೆಗೆ ಕಾರಣ

ಐಪಿಎಲ್ ಟ್ರೋಫಿ ಗೆದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಭಾವುಕರಾದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಜೋಡಿ ಪಂದ್ಯಕ್ಕೂ ಮುನ್ನ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದ್ದ ವಿಚಾರವೂ ಇದೀಗ ಮತ್ತೆ ಬೆಳಕಿಗೆ ಬಂದಿದೆ.

ಆರ್‌ಸಿಬಿ ಅಭಿಮಾನಿ ಮೂಲ್ಕಿ ಮೂಲದ ಅಕ್ಷತಾ ಕಾಲ್ತುಳಿತದಿಂದ ಸಾವು: ಟೀಶರ್ಟ್‌ನಿಂದ ಗುರುತು ಹಚ್ಚಿದ ಪತಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಿದ್ದಾಪುರದ ಅಕ್ಷತಾ (27) ಮೃತಪಟ್ಟಿದ್ದಾರೆ. ಆರ್‌ಸಿಬಿ ಟೀಶರ್ಟ್‌ನಿಂದ ಪತ್ನಿಯ ಗುರುತನ್ನು ಗಂಡ ಆಶಯ್ ಪತ್ತೆ ಹಚ್ಚಿದರು.