
ಕೇರಳ – ಕೇರಳದ ಕರಾವಳಿಯಿಂದ ಕೆಲ ಕಿಲೋಮೀಟರ್ ದೂರ ಸಮುದ್ರದಲ್ಲಿ ಸಾಗುತ್ತಿದ್ದ ಸಿಂಗಾಪುರ ಧ್ವಜದ ಎಂವಿ ವಾನ್ ಹೈ 503 (MV Wan Hai 503) ಕಂಟೈನರ್ ಹಡಗಿನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ವ್ಯಾಪಿಸಿದೆ. ಇದರಿಂದ ಹಡಗು ಹೊತ್ತಿ ಉರಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಹಡಗಿನಲ್ಲಿ ಇದ್ದ 18 ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಅಧಿಕಾರಿಗಳು ಸಮಯಕ್ಕೆ ಸ್ಪಂದಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ ಎಂದು ರಕ್ಷಣಾ ಇಲಾಖೆ ಪ್ರೋಕ್ತ ಪಿ.ಆರ್.ಓ. ತಿಳಿಸಿದ್ದಾರೆ.
ಸ್ಫೋಟದ ಮಾಹಿತಿ ಮುಂಬೈನ ಕಡಲ ಕಾರ್ಯಾಚರಣೆ ಕೇಂದ್ರಕ್ಕೆ ಬೆಳಗ್ಗೆ 10:30ರ ಸುಮಾರಿಗೆ ಲಭಿಸಿತು. ಕೂಡಲೇ ಕೊಚ್ಚಿಯಲ್ಲಿ ತಯಾರಾಗಿ ನಿಂತಿದ್ದ ‘ಐಎನ್ಎಸ್ ಸೂರತ್’ ಹಡಗನ್ನು ರಕ್ಷಣಾ ಕಾರ್ಯಾಚರಣೆಗೆ ಕಳಿಸಲಾಗಿದ್ದು, ಹೆಚ್ಚಿನ ಅನಾಹುತವನ್ನು ತಡೆಯಲು ಸಾಧ್ಯವಾಯಿತು.
ಈ ಕಂಟೈನರ್ ಹಡಗು ಜೂನ್ 7ರಂದು ಶ್ರೀಲಂಕಾದ ಕೊಲಂಬೊದಿಂದ ಹೊರಟು ಜೂನ್ 10 ರಂದು ಮುಂಬೈ ತಲುಪಬೇಕಿತ್ತು. ಈ ನಡುವೆ ಈ ದುರಂತ ಸಂಭವಿಸಿದೆ. ರಕ್ಷಣಾ ಪಡೆಗಳು ಬೆಂಕಿ ನಿಯಂತ್ರಣ ಹಾಗೂ ಹಡಗನ್ನು ಸುರಕ್ಷಿತ ತಳಣೆಗೆ ತರುವ ಕಾರ್ಯದಲ್ಲಿವೆ.