spot_img

‘ಆಪರೇಷನ್ ಸಿಂಧೂರ’ ದಿನ ಜನಿಸಿದ ಮಗುವಿಗೆ ‘ಸಿಂಧೂರ ‘ ಎಂದು ಹೆಸರಿಟ್ಟು ತಂದೆಯಿಂದ ಭಾರತೀಯ ಸೇನೆಗೆ ಗೌರವ

Date:

spot_img

ಪಾಟ್ನಾ: ಪಹಲ್ಗಾಂ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಪ್ರಾರಂಭಿಸಿದ ‘ಆಪರೇಷನ್ ಸಿಂಧೂರ’ ಭದ್ರತಾ ಕಾರ್ಯಾಚರಣೆ ದೇಶಾದ್ಯಂತ ರಾಷ್ಟ್ರ ಭಕ್ತಿಯ ತೀವ್ರ ಜ್ವಾಲೆ ಉರಿಯಿಸುತ್ತಿದ್ದಂತೆಯೇ, ಬಿಹಾರದ ಕತಿಹಾರ್‌ನಲ್ಲಿ ಜನಿಸಿದ ಪುಟ್ಟ ಹೆಣ್ಣುಮಗುವಿಗೆ ‘ಸಿಂಧೂರ’ ಎಂಬ ಹೆಸರಿಡಲಾಗಿದೆ.

ಕತಿಹಾರ್‌ನಲ್ಲಿರುವ ಖಾಸಗಿ ನರ್ಸಿಂಗ್ ಹೋಂನಲ್ಲಿ ಸೇನೆಯ ಆಪರೇಷನ್ ನಡೆದ ದಿನವೇ ಮಗು ಜನಿಸಿತು. ಇದರಿಂದ ಪ್ರೇರಿತರಾದ ಮಗುವಿನ ತಂದೆ, “ಭಾರತೀಯ ಸೇನೆಯ ಧೈರ್ಯ ಮತ್ತು ಬದ್ಧತೆಯ ಸ್ಮರಣಾರ್ಥ ನಾನು ನನ್ನ ಮಗುವಿಗೆ ‘ಸಿಂಧೂರ’ ಎಂಬ ಹೆಸರಿಟ್ಟಿದ್ದೇನೆ. ಇದು ನನ್ನ ದೇಶದ ಪ್ರೇಮದ ಚಿಕ್ಕ ಸಂಕೇತ,” ಎಂದು ಭಾವುಕರಾಗಿ ತಿಳಿಸಿದ್ದಾರೆ.

ಸೇನೆಯ ಕಾರ್ಯಾಚರಣೆಗೆ ಜನಮನದಿಂದ ಕೃತಜ್ಞತೆ

‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಭಾರತದ ಸೇನೆ ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಪ್ರಮುಖ ನೆಲೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರೇ ಈ ಆಪರೇಷನ್‌ಗೆ ‘ಸಿಂಧೂರ’ ಎಂಬ ಹೆಸರನ್ನು ನೀಡಿದ್ದರು. ಈ ಹೆಸರೇ ಇದೀಗ ನವಜಾತ ಶಿಶುವಿಗೆ ನಾಮಧೇಯವಾಗಿ ಬದಲಾಗಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ವಾಟ್ಸಾಪ್‌ನಲ್ಲಿ ಹೊಸ ಅಲೆ: ಜಾಹೀರಾತುಗಳು ಮತ್ತು ಪ್ರಚಾರದ ಚಾನೆಲ್‌ಗಳು ಶೀಘ್ರದಲ್ಲೇ ಲಭ್ಯ!

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್, ತನ್ನ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಹತ್ವದ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ಧರ್ಮಸ್ಥಳ ಪ್ರಕರಣ: “ಹೂತ ಶವಗಳ ಹೊರತೆಗೆಯುವಿಕೆ ಮೊದಲು, ನಂತರವೇ ಮಂಪರು ಪರೀಕ್ಷೆ” – ವಕೀಲ ಕೆ.ವಿ. ಧನಂಜಯ್ ಆಕ್ರೋಶ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶವಗಳನ್ನು ಹೂತಿರುವ ಬಗ್ಗೆ ಮಾಹಿತಿ ನೀಡಲು ಮುಂದೆ ಬಂದಿರುವ ವ್ಯಕ್ತಿಯ ಹೇಳಿಕೆಯ ಕುರಿತು ಪೊಲೀಸರ ನಡೆಗೆ ಹಿರಿಯ ವಕೀಲ ಕೆ.ವಿ. ಧನಂಜಯ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಡಿದ ಅಮಲಿನಲ್ಲಿ ಸ್ನೇಹಿತನ ಬರ್ಬರ ಹತ್ಯೆ: ಬೆಂಗಳೂರಿನಲ್ಲಿ ನಡೆದ ಭೀಕರ ಘಟನೆ

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಕೊಲೆ ಪ್ರಕರಣ ವರದಿಯಾಗಿದೆ. ಕುಡಿದ ಅಮಲಿನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ

ಏಕಾಗ್ರತೆ: ಶೈಕ್ಷಣಿಕ ಪ್ರಗತಿಗೆ ಬ್ರಹ್ಮಾಸ್ತ್ರ – ಬಿ.ಕೆ. ವಿಜಯಲಕ್ಷ್ಮಿ

ವಿದ್ಯಾರ್ಥಿಗಳಲ್ಲಿ ಅಧ್ಯಯನ ಸಾಮರ್ಥ್ಯವನ್ನು ಜಾಸ್ತಿ ಮಾಡುತ್ತದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಮುನ್ನುಡಿಯನ್ನು ಬರೆಯಬಲ್ಲದು. ಏಕಾಗ್ರತೆಯಿಂದ ಮಾಡಿದ ಯಾವುದೇ ಕೆಲಸವು ಅತ್ಯುತ್ತಮ ಫಲಿತಾಂಶವನ್ನು ಕೊಡುತ್ತದೆ