spot_img

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಎಸಿಪಿಗೆ ಭಡ್ತಿ!

Date:

ಮುಂಬೈ: ಭೂಗತ ಜಗತ್ತಿಗೆ ಸಿಂಹಸ್ವಪ್ನವಾಗಿದ್ದ ಮುಂಬೈನ ಕ್ರೈಂ ಬ್ರಾಂಚ್‌ ಅಧಿಕಾರಿ ದಯಾ ನಾಯಕ್‌ ಅವರಿಗೆ ಎಸಿಸಿಪಿ (ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್) ಹುದ್ದೆಗೆ ಭಡ್ತಿ ಲಭಿಸಿದೆ.

ಎನ್‌ಕೌಂಟರ್ ಸ್ಪೆಷಲಿಸ್ಟ್‌ ಎಂಬ ಹೆಸರಿನಲ್ಲಿ ಪ್ರಸಿದ್ಧರಾಗಿರುವ ದಯಾ ನಾಯಕ್‌ ಅವರು ಬಾಂದ್ರಾ ಕ್ರೈಂ ಬ್ರಾಂಚ್‌ನಲ್ಲಿ ಅಧಿಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಮಾದಕ ವಸ್ತುಗಳ ಜಾಲವನ್ನು ತಡೆಗಟ್ಟುವಲ್ಲಿ ಅವರು ದೊಡ್ಡ ಯಶಸ್ಸು ಸಾಧಿಸಿದ್ದರು. ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿದ ಮಹತ್ವದ ಸಾಧನೆ ಅವರದ್ದಾಗಿದೆ.

ಎನ್‌ಕೌಂಟರ್ ಕಾರ್ಯಾಚರಣೆಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ಅವರು, ಭೂಗತ ಜಗತ್ತಿನ ಭಯೋತ್ಪಾದಕ ಶಕ್ತಿಗಳ ವಿರುದ್ಧ ನಿರ್ಭೀತಿಯಾಗಿ ಕಾರ್ಯನಿರ್ವಹಿಸಿದ್ದು, ಮುಂಬೈನಲ್ಲಿ ಭೂಗತ ಲೋಕದ ಪಾತಕಿಗಳ ಹುಟ್ಟಡಗಿಸಲು ಪಕ್ಕಾ ಕಾರ್ಯತಂತ್ರ ಬಳಸಿ ಹಲವಾರು ಅಪರಾಧಿಗಳನ್ನು ವಶಕ್ಕೆ ತೆಗೆದುಕೊಂಡ ಖ್ಯಾತಿ ದಯಾ ನಾಯಕ್‌ ಅವರದ್ದು. ಅವರ ಸೇವೆಯನ್ನು ಪರಿಗಣಿಸಿ ಸರ್ಕಾರವು ಎಸಿಪಿ ಹುದ್ದೆಗೆ ಭಡ್ತಿ ನೀಡಿರುವುದು, ಪೊಲೀಸ್ ಇಲಾಖೆಯಲ್ಲಿ ಹರ್ಷದ ವಾತಾವರಣ ನಿರ್ಮಾಣ ಮಾಡಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದ ನೀರೆ ಗ್ರಾಮದಲ್ಲಿ ಚಿನ್ನಾಭರಣ ಕಳ್ಳತನ: 30 ಗ್ರಾಂ ಚಿನ್ನ ಸೇರಿದಂತೆ ಬೆಳ್ಳಿ ಮಿಸ್ಸಿಂಗ್

ಕಾರ್ಕಳ ತಾಲೂಕಿನ ನೀರೆ ಗ್ರಾಮದ ಒಂದು ನಿವಾಸದಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳ ಕಳ್ಳತನದ ಘಟನೆ ನಡೆದಿದೆ

ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ನೀಡಿದ ಉಚಿತ ಪಠ್ಯಪುಸ್ತಕ ಮತ್ತು ವಿದ್ಯಾರ್ಥಿ ನಿಧಿ ವಿತರಣೆ

ಮಂಗಳೂರು: "ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ (ರಿ), ಮಂಗಳೂರು" ಮತ್ತು "ಸನ್ನಿಧಿ...

ಶಾಂತಿ ಮತ್ತು ಅಭಿವೃದ್ಧಿಗೆ ಹೊಸ ದಾರಿ: ಛತ್ತೀಸ್ಗಢದ 2 ಜಿಲ್ಲೆಗಳು ಈಗ ‘ನಕ್ಸಲ್-ಮುಕ್ತ’!

ಬಸ್ತಾರ್ ಮತ್ತು ಕೊಂಡಾಗಾವ್ ಜಿಲ್ಲೆಗಳು ಕೇಂದ್ರ ಸರ್ಕಾರದ ನಕ್ಸಲ್ ಪೀಡಿತ ಜಿಲ್ಲೆಗಳ ಪಟ್ಟಿಯಿಂದ ಹೊರಗೆ ಬಂದಿವೆ.

ಬೆಳಗಾವಿ: ಪತ್ನಿಯ ಕಾಟ ತಾಳಲಾಗದೆ ಯುವಕ ಆತ್ಮಹತ್ಯೆ

ಪತ್ನಿಯ ಕಾಟವನ್ನು ತಾಳಲಾರದೆ ಒಬ್ಬ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುಃಖದ ಘಟನೆ