
ಗಂಗೊಳ್ಳಿ : ಉತ್ತರ ಕನ್ನಡ ಜಿಲ್ಲೆಯ ಗಂಗೊಳ್ಳಿ ತಾಲೂಕಿನ ಪುರ್ಸು ಕಾರ್ವಿ ಕಡು ಬಳಿ ಹರಿಯುವ ಪಂಚಗಂಗಾವಳಿ ನದಿಯಲ್ಲಿ ವೃದ್ಧರೊಬ್ಬರ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿಯ ನಿವಾಸಿಯಾದ ಸರ್ವೋತ್ತಮ ಹೆಗ್ಡೆ (78) ಎಂದು ಗುರುತಿಸಲಾಗಿದೆ.
ಮೃತರ ತಂದೆ ಹೆಸರು ಜಗನ್ನಾಥ್ ಹೆಗ್ಡೆ , ಹಾಗೂ ವಿಳಾಸ ಹೊಸ ಕಟ್ಟೆಮನೆ ಮನೆ, ಕುಕ್ಕೆಹಳ್ಳಿ, ಉಡುಪಿ ಎಂದು ತಿಳಿದುಬಂದಿದೆ. ಶವದ ಸ್ಥಿತಿ ಗಮನಿಸಿ, ಸ್ಥಳೀಯರು ಕೂಡಲೇ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಮುಂದಿನ ತನಿಖೆ ಪ್ರಗತಿಯಲ್ಲಿದೆ.