spot_img

ವಿದ್ಯೆಗೆ ಜಾತಿಮತ ಬೇಧವಿಲ್ಲ : ಶ್ರೀ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿ, ಕೇಮಾರು ಕ್ಷೇತ್ರ

Date:

ಕಾರ್ಕಳ : ವಿದ್ಯಾರ್ಥಿಗಳ ಮನಸ್ಸು ಶಿಸ್ತಿನಿಂದ ಗುರಿಯತ್ತ ಸಾಗಿದರೆ ಜೀವನದಲ್ಲಿ ಎಷ್ಟು ಎತ್ತರಕ್ಕೂ ಏರಬಹುದು – ಇದಕ್ಕೆ ಸಾಕ್ಷಿ ಡಾ ಎ.ಪಿ.ಜೆ ಅಬ್ದುಲ್ ಕಲಾಂ, ನಮ್ಮ ದೇಶದ ಹಿಂದಿನ ರಾಷ್ಟ್ರಪತಿಗಳು ಎಂದು ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ದಿನಾಂಕ:18/06/2025 ರಂದು ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ, ಪೋಷಕ-ಶಿಕ್ಷಕ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಶಿಕ್ಷಣ ಸಂಸ್ಥೆಯು 42 ವರ್ಷಗಳ ಇತಿಹಾಸವಿರುವ ಸಂಸ್ಥೆ. ಇಲ್ಲಿ ವಿದ್ಯಾರ್ಥಿಗಳು ಬಡಕುಟುಂಬಗಳಿಂದ ಬಂದರೂ, ವಿದ್ಯಾಭ್ಯಾಸದಲ್ಲಿ ಮುಂದೆ ಇರುತ್ತಾರೆ. ವ್ಯವಹಾರ ಜ್ಞಾನವನ್ನು ಹೊಂದಿರುತ್ತಾರೆ. IAS ಆಫೀಸರ್, ಡಾಕ್ಟರ್, ಇಂಜಿನಿಯರ್‌ಗಳನ್ನು ಕೊಟ್ಟ ಈ ಸಂಸ್ಥೆಯ ಭವಿಷ್ಯ ಇನ್ನೂ ಉತ್ತಮವಾಗಲಿ, ಶಿಕ್ಷಣವು ಅಕ್ಷರ ಕಲಿಕೆಯ ಜೊತೆಗೆ ವ್ಯಕ್ತಿತ್ವ ನಿರ್ಮಾಣದ ಧೈಯ ಹೊಂದಿರಬೇಕು, ಈ ವಿದ್ಯಾಸಂಸ್ಥೆಯು ಅತ್ಯಂತ ಶಿಸ್ತು ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದರು.

ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ.ಎಸ್. ಇಮ್ಮಿಯಾಜ್ ಅಹಮ್ಮದ್ ರವರು ಮಾತನಾಡಿ “ ವಿದ್ಯಾರ್ಥಿಗಳು ಶಿಸ್ತಿನ ಕಡೆಗೆ ಗಮನಕೊಡಬೇಕು, ಮಾದಕ ವಸ್ತು, ಸಿಗರೇಟು, ಕುಡಿತ ಮೊದಲಾದ ದುಶ್ಚಟಗಳಿಗೆ ಬಲಿಯಾದರೆ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯವಿಲ್ಲ, ಕಾಲೇಜಿನ ಸ್ವತ್ತನ್ನು ಕಾಪಾಡಿಕೊಂಡು ಬರಬೇಕು” ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣರವರು ಮಾತನಾಡಿ ಈ ವಿದ್ಯಾಸಂಸ್ಥೆ 42 ವರ್ಷಗಳನ್ನು ಪೂರೈಸಿದ ಇತಿಹಾಸವನ್ನು ಹೊಂದಿದೆ. ಕಾಲೇಜು ಎಲ್ಲಾ ಅನುಕೂಲತೆಗಳನ್ನು ಹೊಂದಿದೆ. NCC, NSS ಗಳನ್ನು ಪ್ರಾರಂಬಿಸುವ ಯೋಜನೆಯನ್ನು ಹೊಂದಿದೆ. ಸಿ.ಇ.ಟಿ, ನೀಟ್, ಜೆಇಇ ಮೈನ್ ತರಬೇತಿಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಉತ್ತಮ ಪ್ರಯೋಗಶಾಲೆ, ಗ್ರಂಥಾಲಯ, ಆಟದಮೈದಾನ ಇರುವುದರಿಂದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕು ಎಂದರು. ನಾವು 12 ವಿದ್ಯಾರ್ಥಿಗಳನ್ನು ಒಂದು ಗುಂಪು ಮಾಡಿ, ಪ್ರತಿಯೊಂದು ಗುಂಪಿಗೆ ಒಬ್ಬರು ಉಪನ್ಯಾಸಕರು ಅಥವಾ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಉನ್ನತೀಕರಿಸಿ ಮೌಲ್ಯಯುತವಾದ ಶಿಕ್ಷಣ ನೀಡುತ್ತಿದ್ದೇವೆ” ಎಂದರು.

ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಹಾಗೂ ಉಪನ್ಯಾಸಕಿ ಶ್ರೀಮತಿ ಪಾಟ್ಕರ್ ಪ್ರಾಸ್ತವಿಕ ಭಾಷಣ ಮಾಡುತ್ತಾ “ನಾವಿಂದು ಬದಲಾವಣೆಯ ವರ್ಷದಲ್ಲಿದ್ದೇವೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗಳನ್ನು ನಡೆಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಗಮನ ಕೊಡುತ್ತಿದ್ದೇವೆ” ಎಂದರು.

ಕನ್ನಡ ಶಿಕ್ಷಕಿ ಶ್ರೀಮತಿ ಸಂಗೀತಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ಲೊಲಿಟಾ ಡಿಸಿಲ್ವಾರವರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು ಮತ್ತು ವಿದ್ಯಾರ್ಥಿಗಳು ಇಡೀ ವರ್ಷದಲ್ಲಿ ನಡೆಸಬೇಕಾದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಯೋಜಕರಾದ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸುಮನ್, ಕನ್ನಡ ಉಪನ್ಯಾಸಕಿ ಶ್ರೀಮತಿ ಸರಸ್ವತಿ ಕಾರ್ಯಕ್ರಮ ನಡೆಸಿಕೊಡಲು ಸಹಕರಿಸಿದರು. ಉಪನ್ಯಾಸಕಿ ಶ್ರೀಮತಿ ದೀಕ್ಷಾರವರು ಕಾರ್ಯಕ್ರಮ ನಿರ್ವಹಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ರೆಫ್ಯೂಜಿ ದಿನ

ವಿಶ್ವದಾದ್ಯಾಂತ ಲಕ್ಷಾಂತರ ಜನರು ಯುದ್ಧ, ಹಿಂಸಾಚಾರ, ಧಾರ್ಮಿಕ ಅಥವಾ ರಾಜಕೀಯ ಗಲಭೆ, ಹಾಗೂ ಪ್ರಕೃತಿಕಾಪತ್ತಿಗಳ ಕಾರಣ ತಮ್ಮ ಮನೆ ತೊರೆದು ಬೇರೆ ದೇಶಗಳಲ್ಲಿ ರೆಫ್ಯೂಜಿಯಾಗಿ ಬದುಕು ನಡಿಸುತ್ತಿದ್ದಾರೆ.

ಬೆಳಗಿನ ಜಾವದ ದೇಹದ ನೋವು: ಕಾರಣವೇನು? ಪರಿಹಾರವೇನು?

ಬೆಳಿಗ್ಗೆ ಎದ್ದು ಚಟುವಟಿಕೆ ಪ್ರಾರಂಭಿಸುವಾಗಲೇ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅನೇಕರು ಅನುಭವಿಸುವ ಸಾಮಾನ್ಯ ಸಮಸ್ಯೆ.

‘ಕೇಸರಿ-2’ ವಿವಾದ: ಬಂಗಾಳ ಕ್ರಾಂತಿಕಾರಿಗಳನ್ನು ಅವಮಾನ ಮಾಡಿದ ಆರೋಪ, ನಿರ್ಮಾಪಕರ ವಿರುದ್ಧ FIR

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ ಚಾಪ್ಟರ್-2' (Kesari Chapter 2) ಚಿತ್ರ ಇದೀಗ ಬೃಹತ್ ವಿವಾದಕ್ಕೆ ಗುರಿಯಾಗಿದೆ.

ಥಗ್ ಲೈಫ್ ಬಿಡುಗಡೆಗೆ ಸುಪ್ರೀಂ ಹಸಿರು ನಿಶಾನೆ: ಭದ್ರತೆಯ ಭರವಸೆ ನೀಡಿದ ರಾಜ್ಯ ಸರ್ಕಾರ

ಕಮಲ್ ಹಾಸನ್ ಅಭಿನಯದ ವಿವಾದಾತ್ಮಕ "ಥಗ್ ಲೈಫ್" (Thug Life) ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ಎಚ್ಚರಿಸಿ, ಚಿತ್ರದ ಬಿಡುಗಡೆಗೆ ಅವಕಾಶ ನೀಡಬೇಕೆಂದು ಸೂಚನೆ ನೀಡಿತ್ತು.