spot_img

ಬೆವರಿಲ್ಲದೇ ಲಕ್ಷಾಂತರ ರೂಪಾಯಿ ಗಳಿಕೆ: ಮುಂಬೈನ ಆಟೋ ಚಾಲಕನ ಸ್ಮಾರ್ಟ್ ಐಡಿಯಾ

Date:

spot_img

ಮುಂಬೈ : ಹೆಚ್ಚುವರಿ ಶ್ರಮವಿಲ್ಲದೇ ದುಡ್ಡು ಗಳಿಸುವವರ ಕಥೆಗಳು ಅಪರೂಪ, ಆದರೆ ಮುಂಬೈನ ಆಟೋ ಚಾಲಕನೊಬ್ಬ ತನ್ನ ಚತುರತನದಿಂದ ದಿನಕ್ಕೆ ಸಾವಿರಾರು ರೂ. ಗಳಿಸುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಥೆ ಹೀಗಿದೆ : ಲೆನ್ಸಾರ್ಟ್‌ನ ಪ್ರೊಡಕ್ಟ್ ಲೀಡರ್ ರಾಹುಲ್ ರೂಪಾನಿ, ವೀಸಾಗಾಗಿ ಮುಂಬೈನ ಯುಎಸ್ ಕಾನ್ಸುಲೇಟ್‌ಗೆ ಹೋಗಿದ್ದಾಗ, ಆಫೀಸ್ ಒಳಗೆ ಬ್ಯಾಗ್ ತೆಗೆದುಕೊಂಡು ಹೋಗುವ ಅವಕಾಶ ಇರಲಿಲ್ಲ. ಅಷ್ಟರಲ್ಲಿ ಅಲ್ಲೇ ನಿಂತಿದ್ದ ಆಟೋ ಚಾಲಕನೊಬ್ಬ “ಸರ್, ನಿಮ್ಮ ಬ್ಯಾಗ್ ನನಗೆ ಕೊಡಿ, ನಾನು ಸುರಕ್ಷಿತವಾಗಿ ಇಟ್ಟುಕೊಳ್ಳುತ್ತೇನೆ. 1000 ರೂ. ಆಗುತ್ತೆ” ಎಂದು ವಿನಂತಿಸಿದ್ದ.

ರೂಪಾನಿಗೆ ಬೇರೆ ಆಯ್ಕೆ ಇರದ ಕಾರಣ, ಆಟೋ ಚಾಲಕನಿಗೆ ಬ್ಯಾಗ್ ನೀಡಿ ತನ್ನ ಕಾರ್ಯ ಮುಗಿಸಿ ಮರಳಿ ಬಂದು ಬ್ಯಾಗ್ ಪಡೆದರು. ಆಸಕ್ತಿದಾಯಕ ವಿಷಯವೆಂದರೆ, ಈ ಸೇವೆಯ ಮೂಲಕ ಆಟೋ ಚಾಲಕ ಪ್ರತಿದಿನ 20-30 ಜನರ ಬ್ಯಾಗ್‌ಗಳನ್ನು ‘ಸೇಫ್ ಕೀಪಿಂಗ್’ ಮಾಡುತ್ತಿದ್ದು, ದಿನಕ್ಕೆ 20,000-30,000 ರೂ. ಗಳಿಸುತ್ತಿದ್ದಾನೆ. ತಿಂಗಳಿಗೆ 5-8 ಲಕ್ಷ ರೂ. ಗಳಿಕೆ ಎಂದರೇನು!

ಈತನ ತಂತ್ರ ಬಹಳ ಸರಳ. ಯುಎಸ್ ಕಾನ್ಸುಲೇಟ್ ಬಳಿ ನಿಂತು ಗ್ರಾಹಕರ ನಂಬಿಕೆಗೆ ಪಾತ್ರನಾಗಿ, ಬ್ಯಾಗ್‌ಗಳನ್ನು ತನ್ನ ಆಟೋದಲ್ಲೇ ಅಥವಾ ಹತ್ತಿರದ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡುತ್ತಾರೆ. ಸ್ಥಳೀಯ ಪೊಲೀಸ್‌ಗಳ ಸಹಕಾರವೂ ಇರುವುದರಿಂದ, ಈ ಸೇವೆಯ ಮೇಲೆ ಹೆಚ್ಚಿನವರು ನಂಬಿಕೆಯಿಂದ ಅವಲಂಬಿತರಾಗಿದ್ದಾರೆ.

ರೂಪಾನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಹಂಚಿಕೊಂಡಿದ್ದು, ಅವರ ಪೋಸ್ಟ್‌ಗೆ ಶ್ಲಾಘನೆಯ ಜೊತೆಗೆ ಪ್ರಶ್ನೆಗಳ ಮಳೆಯೂ ಸುರಿದಿದೆ. ಕೆಲವರು ಚಾಲಕನ ಬಿಸಿನೆಸ್ ಐಡಿಯಾ ಮೆಚ್ಚಿಕೊಂಡರೆ, ಇತರರು ಸೇವೆಯ ಬೆಲೆಯನ್ನು ಹೆಚ್ಚು ಎನ್ನುತ್ತಿದ್ದಾರೆ.

ಈ ಘಟನೆಯು ಅಕ್ಷರಶಃ “ಸಾಧಾರಣ ಸಂದರ್ಭದಿಂದ ಹೊಸ ಅವಕಾಶ ಸೃಷ್ಟಿಸುವುದೇ ಉದ್ಯಮಶೀಲತೆ” ಎಂಬುದಕ್ಕೆ ನಿದರ್ಶನವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆರೋಗ್ಯಕ್ಕೆ ಮಾರಕವಾಗಬಲ್ಲ ದಿನನಿತ್ಯದ ಸೊಪ್ಪು: ಕಿಡ್ನಿ ಕಲ್ಲುಗಳ ಸೃಷ್ಟಿಗೆ ಪ್ರಮುಖ ಕಾರಣ!

ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾದ ಮೂತ್ರಪಿಂಡಗಳು, ರಕ್ತವನ್ನು ಶುದ್ಧೀಕರಿಸಿ ವಿಷಕಾರಿ ಅಂಶಗಳನ್ನು ಹೊರಹಾಕುವ ಕಾರ್ಯವನ್ನು ನಿರಂತರವಾಗಿ ಮಾಡುತ್ತವೆ.

“ಸು ಫ್ರಮ್‌ ಸೋ” ಅಬ್ಬರ: ಸಣ್ಣ ಬಜೆಟ್, ದೊಡ್ಡ ಕಲೆಕ್ಷನ್ – ಇದು ಕಂಟೆಂಟ್ ತಾಕತ್ತು!

ಇತ್ತೀಚೆಗೆ ತೆರೆ ಬಿದ್ದಿದ್ದು, ಜೆ.ಪಿ. ತುಮಿನಾಡ್ ನಿರ್ದೇಶನದ "ಸು ಫ್ರಮ್‌ ಸೋ" ಚಿತ್ರವು ಅದ್ಭುತ ಗೆಲುವು ಸಾಧಿಸಿದೆ. ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರವು, ಕಥಾವಸ್ತು ಮತ್ತು ನಿರೂಪಣೆಯ ಶಕ್ತಿಗೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಉಡುಪಿಯಲ್ಲಿ ವರುಣನ ಆರ್ಭಟ: ಆಸ್ತಿಪಾಸ್ತಿಗೆ ಹಾನಿ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ 24 ಗಂಟೆಗಳಿಂದ ಬಿಡದೇ ಸುರಿಯುತ್ತಿರುವ ಭಾರೀ ಗಾಳಿ ಮತ್ತು ಮಳೆಯು ವ್ಯಾಪಕ ಅವಾಂತರಗಳನ್ನು ಸೃಷ್ಟಿಸಿದ್ದು, ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ

ಹರಿದ್ವಾರದಲ್ಲಿ ದುರಂತ: ಮಾನಸಾ ದೇವಿ ದೇವಾಲಯದಲ್ಲಿ ಕಾಲ್ತುಳಿತ, 7 ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಪುಣ್ಯಕ್ಷೇತ್ರ ಹರಿದ್ವಾರದಲ್ಲಿರುವ ಪ್ರಸಿದ್ಧ ಮಾನಸಾ ದೇವಿ ದೇವಾಲಯದಲ್ಲಿ ಭಾನುವಾರ (ಜುಲೈ 27) ಸಂಭವಿಸಿದ ದುರದೃಷ್ಟಕರ ಕಾಲ್ತುಳಿತದಲ್ಲಿ ಏಳು ಭಕ್ತರು ಪ್ರಾಣ ಕಳೆದುಕೊಂಡಿದ್ದು, 28ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ