spot_img

ಪಬ್ ಮುಂದೆ ಕುಡಿದ ಮತ್ತಿನಲ್ಲಿ ಯುವತಿಯರ ಮಾರಾಮಾರಿ

Date:

spot_img

ಇಂದೋರ್ (ಮ.ಪ್ರ.): ಮಧ್ಯಪ್ರದೇಶದ ಇಂದೋರ್‌ನ ವಿಜಯನಗರ ಪ್ರದೇಶದಲ್ಲಿ ಪಬ್‌ನಿಂದ ಹೊರಬಂದ ನಂತರ ಕುಡಿದ ಮತ್ತಿನಲ್ಲಿ ಯುವತಿಯರು ಹೊಡೆದಾಡಿದ ಪ್ರಕರಣವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಮೇ 18ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನೇಹಾ ಮತ್ತು ಬುಲ್ಬುಲ್ ಎಂಬ ಇಬ್ಬರು ಯುವತಿಯರು ರಾತ್ರಿ 12:15ರ ಸುಮಾರಿಗೆ ಪಾರ್ಟಿಯಿಂದ ಕ್ಲಬ್‌ನಿಂದ ಹೊರಬರುತ್ತಿದ್ದ ವೇಳೆ, ಮೂವರು ಯುವಕರು ಮತ್ತು ಒಬ್ಬ ಯುವತಿ ಇದ್ದ ಗುಂಪು ಅವರ ಹಿಂದೆ ಹೋಗುತ್ತಿತ್ತು. ಈ ವೇಳೆ, ಗುಂಪಿನಲ್ಲಿ ಇದ್ದ ಯುವಕನೊಬ್ಬ ನೇಹಾಳ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದರೆಂದು ಆರೋಪಿಸಲಾಗಿದೆ.ಆ ಕಾಮೆಂಟ್‌ಗೆ ಪ್ರತಿಯಾಗಿ ನೇಹಾ ಆ ಯುವಕನನ್ನು ಎಚ್ಚರಿಸಿದ್ದರು. ಆದರೆ ಪಬ್‌ನ ಸೈಡ್ ಗೇಟ್‌ಗೆ ತಲುಪುವಷ್ಟರಲ್ಲಿ ಆ ಗುಂಪು ಅವರ ಮೇಲೆ ಮತ್ತೆ ಅಸಭ್ಯ ಶಬ್ದಗಳಿಂದ ನಿಂದನೆ ನಡೆಸಿತು. ಇದರೊಂದಿಗೆ ದೈಹಿಕವಾಗಿ ದಾಳಿ ನಡೆಸಿ, ಪಂಚ್ ಮತ್ತು ಕಪಾಳಮೋಕ್ಷ ಮಾಡಿದಿದ್ದಾರೆ. ನೇಹಾ ಮತ್ತು ಬುಲ್ಬುಲ್ ಕೂಡ ಆಕ್ರೋಶದಿಂದ ಪ್ರತಿರೋಧ ತೋರಿದಾಗ, ಯುವತಿಯರ ಗುಂಪು ಕೂಡ ಹಸ್ತಕ್ಷೇಪಿಸಿ, ತೀವ್ರ ಗಲಾಟೆ ನಡೆದಿದೆ. ಜಗಳದ ದೃಶ್ಯಗಳು ಅಲ್ಲಿದ್ದ ಕೆಲವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ದಾಳಿ ನಡೆಸಿದವರನ್ನು ಗುರುತಿಸಲು ಹಾಗೂ ಹೆಚ್ಚಿನ ತನಿಖೆ ನಡೆಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಅಂತರಾಷ್ಟ್ರೀಯ ಹುಲಿ ದಿನ

ಭೂಮಿಯ ಮೇಲಿನ ಅತ್ಯಂತ ಭವ್ಯ ಮತ್ತು ಶಕ್ತಿಶಾಲಿ ಜೀವಿಗಳಲ್ಲಿ ಒಂದಾದ ಹುಲಿಯ ಸಂರಕ್ಷಣೆ ಮತ್ತು ಅದರ ಅಳಿವಿನಂಚಿನಲ್ಲಿರುವ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವುದು

“ರಾಹುಲ್ ಗಾಂಧಿಯವರ ತ್ಯಾಗ ದೇಶದ ಯುವಕರಿಗೆ ಮಾದರಿಯಾಗಬೇಕು”: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಲೋಕಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಷ್ಟ ಮತ್ತು ತ್ಯಾಗ ದೇಶದ ಯುವಕರಿಗೆ ಮಾದರಿಯಾಗಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಇತಿಹಾಸ ನಿರ್ಮಿಸಿದ ದಿವ್ಯಾ ದೇಶಮುಖ್: ಮಹಿಳಾ ಚೆಸ್ ವಿಶ್ವಕಪ್ ಗೆದ್ದು ಗ್ರಾಂಡ್‌ಮಾಸ್ಟರ್ ಪಟ್ಟಕ್ಕೆ!

ಜಾರ್ಜಿಯಾದ ಬಟುಮಿಯಲ್ಲಿ ಇಂದು (ಜುಲೈ 28, 2025) ನಡೆದ FIDE ಮಹಿಳಾ ವಿಶ್ವಕಪ್ 2025 ರಲ್ಲಿ, ನಾಗಪುರದ 19 ವರ್ಷದ ಪ್ರತಿಭಾವಂತ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.

ಆ್ಯಸಿಡಿಟಿ, ಮಲಬದ್ಧತೆ, ಅಲ್ಸರ್‌ಗೆ ರಾಮಬಾಣ ‘ಓಂಕಾಳು’: ಇಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು!

ಓಂಕಾಳು ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಯಾಗಿದ್ದರೂ, ಇದರ ಸೇವನೆಯಿಂದ ಹತ್ತು ಹಲವು ಆರೋಗ್ಯ ಪ್ರಯೋಜನಗಳಿವೆ.