spot_img

ಡಾ. ಎಂ. ಎನ್. ರಾಜೇಂದ್ರ ಕುಮಾರ್ ನಿರ್ಮಾಣದ ತುಳು ಸಿನಿಮಾ ʼಡಾಕ್ಟ್ರಾ ಭಟ್ರಾ?ʼಕ್ಕೆ ಮುಹೂರ್ತ

Date:

spot_img

ಮಂಗಳೂರು : ಡಾ. ಎಂ.ಎನ್.ಆರ್. ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ|| ಎಂ. ಎನ್. ರಾಜೇಂದ್ರ ಕುಮಾರ್ ಅವರು ನಿರ್ಮಿಸುತ್ತಿರುವ ಹಾಗೂ ವಿಜಯ್‌ ಕುಮಾರ್‌ ಕೊಡಿಯಾಲ್‌ ಬೈಲ್‌ ನಿರ್ದೇಶಿಸುತ್ತಿರುವ ಹಾಸ್ಯಮಯ ತುಳು ಚಲನಚಿತ್ರ ‘ಡಾಕ್ಟ್ರಾ ಭಟ್ರಾ?’ದ ಮುಹೂರ್ತ ಸಮಾರಂಭವು ಆದಿತ್ಯವಾರ ಆಗಸ್ಟ್ 24ರಂದು ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

ಚಿತ್ರದ ಕುರಿತು

ಇದು ಸಂಪೂರ್ಣ ಮನರಂಜನಾತ್ಮಕ ಹಾಸ್ಯ ಸಿನಿಮಾವಾಗಿದ್ದು, ವಿಜ್ಞಾನ ಮತ್ತು ಆಚಾರ-ವಿಚಾರಗಳ ನಡುವಿನ ಸಂಘರ್ಷವನ್ನು ವಿಭಿನ್ನ ಕಥಾಹಂದರದಲ್ಲಿ ಹೆಣೆಯಲಾಗಿದೆ. ಚಿತ್ರದಲ್ಲಿ ಜನಪ್ರಿಯ ತುಳು ಕಲಾವಿದರು ನಟಿಸಿದ್ದು, ನವೀನ್‌ ಡಿ. ಪಡೀಲ್‌ ಅವರು ‘ಭಟ್ರ್‌’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸಿನಿಮಾದ ಚಿತ್ರೀಕರಣ ಮಂಗಳೂರು ಹೊರವಲಯದ ನೀರ್‌ ಮಾರ್ಗದಲ್ಲಿ 30 ದಿನಗಳ ಕಾಲ ನಡೆಯಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ನಿರ್ಮಾಪಕರ ಮಾತು

ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, “ನಮ್ಮ ಸಂಸ್ಥೆ ಈ ಹಿಂದೆ ಜೋಗುಳ ಎಂಬ ಮೆಗಾ ಧಾರಾವಾಹಿ ಹಾಗೂ ಗಲಾಟೆ ಎಂಬ ಚಲನಚಿತ್ರ ನಿರ್ಮಿಸಿತ್ತು. ಈಗ ತುಳು ಭಾಷೆ ಮತ್ತು ಚಿತ್ರರಂಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತಮ ಹಾಸ್ಯಮಯ ಕಥೆಯೊಂದಿಗೆ ಈ ಸಿನಿಮಾವನ್ನು ನಿರ್ಮಿಸುತ್ತಿದ್ದೇನೆ” ಎಂದರು.

ಉಪಸ್ಥಿತರು

ಮುಹೂರ್ತ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌, ಎ.ಜೆ. ಶೆಟ್ಟಿ, ಪ್ರಕಾಶ್‌ ಪಾಂಡೇಶ್ವರ್‌, ಡಾ. ದೇವದಾಸ್‌ ಕಾಪಿಕಾಡ್‌, ಶರ್ಮಿಳಾ ಕಾಪಿಕಾಡ್, ಆರ್‌.ಧನರಾಜ್‌, ಶಶಿರಾಜ್ ಕಾವೂರು, ಕೆ.ಕೆ.ಪೇಜಾವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಫ್ರಿಡ್ಜ್‌ನಲ್ಲಿ ನಿಂಬೆಹಣ್ಣು ಇಡುವುದರ ರಹಸ್ಯ: ದುರ್ವಾಸನೆಗೆ ವಿದಾಯ, ಫ್ರೆಶ್‌ನೆಸ್‌ಗೆ ಸ್ವಾಗತ!

ನಿತ್ಯದ ಜೀವನದಲ್ಲಿ ನಾವು ಬಳಸುವ ನಿಂಬೆಹಣ್ಣು ಕೇವಲ ಅಡುಗೆಗೆ ಮಾತ್ರ ಸೀಮಿತವಲ್ಲ. ಅದರ ಬಹು ಉಪಯೋಗಗಳಲ್ಲಿ ಒಂದು, ಫ್ರಿಡ್ಜ್‌ನ ಆರೋಗ್ಯವನ್ನು ಕಾಪಾಡುವುದು.

ಕೈಗಾರಿಕಾ ತರಬೇತಿ ಕೇಂದ್ರಗಳು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವ ಕೇಂದ್ರಗಳಾಗಿವೆ : ಬಿ ಆರ್ ಪಾಟೀಲ್ ಆಳಂದ

ಕೈಗಾರಿಕಾ ತರಬೇತಿ ಕೇಂದ್ರಗಳು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವ ಸಂಜೀವಿನಿಗಳಾಗಿವೆ ಎಂದು ಕರ್ನಾಟಕ ಸರ್ಕಾರದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ ಆರ್ ಪಾಟೀಲ್ ಆಳಂದ ಹೇಳಿದರು.

“ಅವರು ಆರೆಸ್ಸೆಸ್ ಗೀತೆ ಹಾಡಬಹುದು, ಕುಂಭಮೇಳಕ್ಕೂ ಹೋಗಬಹುದು, ಅಂಬಾನಿ ಮಗನ ಮದುವೆಯಲ್ಲೂ ಭಾಗವಹಿಸಬಹುದು”: ಡಿಕೆಶಿ ವಿರುದ್ಧ ಕೆ.ಎನ್.ರಾಜಣ್ಣ ಕಿಡಿ

: ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ನಂಬರ್ ಒನ್ ಗೃಹ ಸಚಿವ ಯಾರೆಂದು ಚಾಟ್ ಜಿಪಿಟಿ ಕೇಳಿʼ: ಟ್ರೋಲ್‌ಗಳಿಗೆ ಪರಮೇಶ್ವರ್ ಖಡಕ್ ಉತ್ತರ

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು 'ಗೊತ್ತಿಲ್ಲ ಸಚಿವರು' ಎಂದು ಟ್ರೋಲ್ ಮಾಡುತ್ತಿರುವವರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಚ್ಚರಿಯ ಉತ್ತರ ನೀಡಿದ್ದಾರೆ. "ದೇಶದಲ್ಲಿ ನಂಬರ್ ಒನ್ ಗೃಹ ಸಚಿವರು ಯಾರು ಎಂದು ಕುತೂಹಲ ಇದ್ದವರು ಚಾಟ್ ಜಿಪಿಟಿಯನ್ನು ಕೇಳಿ" ಎಂದು ಅವರು ಸವಾಲೆಸೆದರು.