spot_img

ಶ್ರೀ ಪಲಿಮಾರು ಮಠದ ಸುವರ್ಣ ಮಂಟಪ ನಿರ್ಮಾಣಕ್ಕೆ ಸುವರ್ಣದ ಸೇವೆಯ ಅವಕಾಶ !

Date:

spot_img

|| ಶ್ರೀ ರಾಮ ಶ್ರೀ ||

ಉಡುಪಿ ಶ್ರೀಪಲಿಮಾರು ಮಠದಿಂದ ಭಕ್ತರಿಗೆ ಒಂದು ಮಹತ್ತ್ವದ ಆಹ್ವಾನ!

ಜಗದ್ಗುರು ಶ್ರೀಮದಾಚಾರ್ಯರ ಕರಾರ್ಚಿತವಾಗಿ ಶ್ರೀಪಲಿಮಾರುಮಠದ ಪರಂಪರೆಗೆ ದೊರೆತ ಶ್ರೀ ಸೀತಾ ಲಕ್ಷ್ಮಣಾಂಜನೇಯ ಸಮೇತ ಕೋದಂಡಪಾಣಿ ಶ್ರೀರಾಮಚಂದ್ರ ದೇವರಿಗಾಗಿ ಸುವರ್ಣ ಮಂಟಪ ನಿರ್ಮಾಣಕ್ಕೆ ಮಹತ್ವಾಕಾಂಕ್ಷಿ ಯೋಜನೆ ಕೈಗೊಳ್ಳಲಾಗಿದೆ.

ಈ ಪವಿತ್ರ ಸಂಕಲ್ಪದಡಿ ಸುಮಾರು 6 ಕೆಜಿ ಬಂಗಾರ, 25 ಕೆಜಿ ಬೆಳ್ಳಿ ಬಳಸಿ, ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಸುವರ್ಣ ಮಂಟಪ ನಿರ್ಮಿಸಲು ನಿರ್ಧರಿಸಲಾಗಿದೆ.

ಈ ಮಹತ್ಕಾರ್ಯದಲ್ಲಿ ಭಕ್ತಾದಿಗಳ ಸಹಭಾಗಿತ್ವ ಅತೀವ ಅಗತ್ಯವಾಗಿದ್ದು, ಭಗವಂತನ ಅನುಗ್ರಹವನ್ನು ಪಡೆಯುವ ಅಪೂರ್ವ ಅವಕಾಶ ಇದಾಗಿದೆ.

ಅಕ್ಷಯ ತೃತೀಯ ಎಂಬ ವಿಶೇಷ ಸಂದರ್ಭದಲ್ಲಿ ಸುವರ್ಣ ಖರೀದಿ ಮಾಡುವ ಪರಂಪರೆ ಇದ್ದು, ಈ ವರ್ಷ ಖರೀದಿಸುವ ಸುವರ್ಣವನ್ನು ಭಗವಂತನ ಮಂಟಪ ನಿರ್ಮಾಣಕ್ಕಾಗಿ ದಾನಮಾಡುವ ಮೂಲಕ ನಿಜಾರ್ಥದಲ್ಲಿ ಧರ್ಮಸೇವೆಯಲ್ಲಿ ಭಾಗಿಯಾಗುವ ಅನನ್ಯ ಅವಕಾಶ ಸಿಗಲಿದೆ.ನಿಮ್ಮ ಸುವರ್ಣ ದಾನದಿಂದ ಶ್ರೀರಾಮನ ಈ ಪವಿತ್ರ ಕಾರ್ಯ ಪುಷ್ಠಿಯಾಗುತ್ತದೆ. ನಿಮ್ಮಿಂದ ನಿಮ್ಮ ಕುಟುಂಬದ ಭವಿಷ್ಯ ಸುವರ್ಣಮಯವಾಗಬಹುದು.

ಈ ಸುಪ್ರೀತ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಎಂದು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ, ಶ್ರೀಪಲಿಮಾರು ಮಠ, ಉಡುಪಿ ಇದರ ವ್ಯವಸ್ಥಾಪಕರು ಮನವಿ ಮಾಡಿರುತ್ತಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರೋಟಾನ್‌ನಿಂದ ‘ಲುಮೋ’ AI ಚಾಟ್‌ಬಾಟ್ ಬಿಡುಗಡೆ

ಸುರಕ್ಷಿತ ಇಮೇಲ್ ಮತ್ತು ವಿಪಿಎನ್‌ ಸೇವೆಗಳಿಗೆ ಹೆಸರುವಾಸಿಯಾಗಿರುವ ಪ್ರೋಟಾನ್ ಕಂಪನಿಯು, ಹೊಸ ಎಐ ಚಾಟ್‌ಬಾಟ್ ಒಂದನ್ನು ಬಿಡುಗಡೆ ಮಾಡಿದೆ. ‘ಲುಮೋ’ (Lumo) ಎಂದು ಹೆಸರಿಸಲಾದ ಈ ಚಾಟ್‌ಬಾಟ್ ಅನ್ನು ಗೌಪ್ಯತೆಯನ್ನು ಪ್ರಥಮ ಆದ್ಯತೆಯಾಗಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಹುಲಿಕಲ್ ಘಾಟಿಯಲ್ಲಿ ಮತ್ತೊಮ್ಮೆ ಭಾರೀ ಕುಸಿತ; ಶೀಘ್ರವೇ ಬೃಹತ್ ವಾಹನಗಳ ಸಂಚಾರ ನಿಷೇಧ ಸಾಧ್ಯತೆ!

ರಾಜ್ಯದ ಪ್ರಮುಖ ಘಾಟ್‌ಗಳಲ್ಲಿ ಒಂದಾದ ಹುಲಿಕಲ್ ಘಾಟ್ (ಬಾಳೆಬರೆ) ರಸ್ತೆಯಲ್ಲಿ ಮತ್ತೆ ದೊಡ್ಡ ಪ್ರಮಾಣದ ಕುಸಿತ ಸಂಭವಿಸಿದ್ದು, ಇದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಧರ್ಮಸ್ಥಳ ಪ್ರಕರಣ: 11ನೇ ಸ್ಥಳದಲ್ಲಿ ಶೋಧ ವಿಫಲ; 6ನೇ ಸ್ಥಳದ ಅಸ್ಥಿಪಂಜರ ಕೇಸ್ SITಗೆ ವರ್ಗಾವಣೆ!

ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಧರ್ಮಸ್ಥಳ ಪ್ರಕರಣದ ತನಿಖೆ ಮುಂದುವರೆದಿದೆ. ಆದರೆ, ಆಗಸ್ಟ್ 5ರಂದು ನಡೆಸಿದ ಶೋಧಕಾರ್ಯದಲ್ಲಿ ದೂರುದಾರರು ಗುರುತು ಮಾಡಿದ್ದ 11ನೇ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.

ಕಾಂಗ್ರೆಸ್ ಸಿದ್ಧಾಂತ ಜನರಿಗೆ ತಲುಪಿಸಿ: ಯಶಸ್ಸು ತಾತ್ಕಾಲಿಕವಲ್ಲ ಎಂದ ಕಿಮ್ಮನೆ ರತ್ನಾಕರ್

ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವು ಮತ್ತು ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವಂತೆ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.