spot_img

ಶ್ರೀ ಪಲಿಮಾರು ಮಠದ ಸುವರ್ಣ ಮಂಟಪ ನಿರ್ಮಾಣಕ್ಕೆ ಸುವರ್ಣದ ಸೇವೆಯ ಅವಕಾಶ !

Date:

|| ಶ್ರೀ ರಾಮ ಶ್ರೀ ||

ಉಡುಪಿ ಶ್ರೀಪಲಿಮಾರು ಮಠದಿಂದ ಭಕ್ತರಿಗೆ ಒಂದು ಮಹತ್ತ್ವದ ಆಹ್ವಾನ!

ಜಗದ್ಗುರು ಶ್ರೀಮದಾಚಾರ್ಯರ ಕರಾರ್ಚಿತವಾಗಿ ಶ್ರೀಪಲಿಮಾರುಮಠದ ಪರಂಪರೆಗೆ ದೊರೆತ ಶ್ರೀ ಸೀತಾ ಲಕ್ಷ್ಮಣಾಂಜನೇಯ ಸಮೇತ ಕೋದಂಡಪಾಣಿ ಶ್ರೀರಾಮಚಂದ್ರ ದೇವರಿಗಾಗಿ ಸುವರ್ಣ ಮಂಟಪ ನಿರ್ಮಾಣಕ್ಕೆ ಮಹತ್ವಾಕಾಂಕ್ಷಿ ಯೋಜನೆ ಕೈಗೊಳ್ಳಲಾಗಿದೆ.

ಈ ಪವಿತ್ರ ಸಂಕಲ್ಪದಡಿ ಸುಮಾರು 6 ಕೆಜಿ ಬಂಗಾರ, 25 ಕೆಜಿ ಬೆಳ್ಳಿ ಬಳಸಿ, ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಸುವರ್ಣ ಮಂಟಪ ನಿರ್ಮಿಸಲು ನಿರ್ಧರಿಸಲಾಗಿದೆ.

ಈ ಮಹತ್ಕಾರ್ಯದಲ್ಲಿ ಭಕ್ತಾದಿಗಳ ಸಹಭಾಗಿತ್ವ ಅತೀವ ಅಗತ್ಯವಾಗಿದ್ದು, ಭಗವಂತನ ಅನುಗ್ರಹವನ್ನು ಪಡೆಯುವ ಅಪೂರ್ವ ಅವಕಾಶ ಇದಾಗಿದೆ.

ಅಕ್ಷಯ ತೃತೀಯ ಎಂಬ ವಿಶೇಷ ಸಂದರ್ಭದಲ್ಲಿ ಸುವರ್ಣ ಖರೀದಿ ಮಾಡುವ ಪರಂಪರೆ ಇದ್ದು, ಈ ವರ್ಷ ಖರೀದಿಸುವ ಸುವರ್ಣವನ್ನು ಭಗವಂತನ ಮಂಟಪ ನಿರ್ಮಾಣಕ್ಕಾಗಿ ದಾನಮಾಡುವ ಮೂಲಕ ನಿಜಾರ್ಥದಲ್ಲಿ ಧರ್ಮಸೇವೆಯಲ್ಲಿ ಭಾಗಿಯಾಗುವ ಅನನ್ಯ ಅವಕಾಶ ಸಿಗಲಿದೆ.ನಿಮ್ಮ ಸುವರ್ಣ ದಾನದಿಂದ ಶ್ರೀರಾಮನ ಈ ಪವಿತ್ರ ಕಾರ್ಯ ಪುಷ್ಠಿಯಾಗುತ್ತದೆ. ನಿಮ್ಮಿಂದ ನಿಮ್ಮ ಕುಟುಂಬದ ಭವಿಷ್ಯ ಸುವರ್ಣಮಯವಾಗಬಹುದು.

ಈ ಸುಪ್ರೀತ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಎಂದು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ, ಶ್ರೀಪಲಿಮಾರು ಮಠ, ಉಡುಪಿ ಇದರ ವ್ಯವಸ್ಥಾಪಕರು ಮನವಿ ಮಾಡಿರುತ್ತಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಣ ಸಂಸ್ಥೆಗೆ ಉತ್ತಮ ಫಲಿತಾಂಶ

2024-25ನೇ ಶೈಕ್ಷಣಿಕ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು , ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ 176 ವಿದ್ಯಾರ್ಥಿಗಳಲ್ಲಿ 153 ವಿದ್ಯಾರ್ಥಿಗಳು ತೇರ್ಗಡೆಯಾಗಿ ಸಂಸ್ಥೆಗೆ 87 % ಫಲಿತಾಂಶ ಬಂದಿರುತ್ತದೆ .

ಹುರುಳಿಕಾಳು: ಆರೋಗ್ಯದ ಕನಸನ್ನು ನನಸು ಮಾಡುವ ಪೌಷ್ಟಿಕ ಧಾನ್ಯ!

ನಮ್ಮ ಅಡುಗೆಮನೆಯಲ್ಲೇ ಇರುವ ಸಾಮಾನ್ಯ ಧಾನ್ಯವಾದ ಹುರುಳಿಕಾಳು ದೇಹಕ್ಕೆ ಪೋಷಣೆಯ ಒಳ್ಳೆಯ ಬಂಡವಾಳವನ್ನು ಒದಗಿಸುವ ಆಹಾರವಾಗಿದೆ.

ವೈಶಾಖ ಮಾಸದ ಪವಿತ್ರ ಸಂದರ್ಭದಲ್ಲಿ ಆರಂಭವಾದ ಚಾರ್‌ಧಾಮ್ ಯಾತ್ರೆ; ಕೇದಾರನಾಥದಲ್ಲಿ ಭಕ್ತರಿಗೆ ದೇವರ ದರ್ಶನ, ಭದ್ರತೆಗೆ ತೀವ್ರ ಕ್ರಮ

ವೈಶಾಖ ಮಾಸದ ಪವಿತ್ರ ಸಂದರ್ಭದಲ್ಲಿ ಪ್ರಪಂಚದ ಅತ್ಯಂತ ಪವಿತ್ರ ಯಾತ್ರೆಗಳಲ್ಲೊಂದು ಎಂದು ಪರಿಗಣಿಸಲಾದ ಚಾರ್‌ಧಾಮ್ ಯಾತ್ರೆಗೆ ಇಂದು ಭಕ್ತಿಭರಿತ ಚಾಲನೆ ದೊರಕಿದೆ.

ಅನೈತಿಕ ಸಂಬಂಧ ಶಂಕೆ: ಪತ್ನಿ ಹಾಗೂ ಪ್ರೇಮಿಯನ್ನು ಕೊಂದ ಪತಿ !

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಪತ್ನಿಯ ಅನೈತಿಕ ಸಂಬಂಧದ ಶಂಕೆಯಿಂದ ಕೋಪಗೊಂಡ ಪತಿಯೊಬ್ಬನು, ಪತ್ನಿ ಹಾಗೂ ಆಕೆಯ ಪ್ರೇಮಿಯನ್ನು ಭೀಕರವಾಗಿ ಕೊಲೆ ಮಾಡಿ, ನಂತರ ತಾನೇ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ.