spot_img

ತ್ಯಾಜ್ಯ ಎಸೆಯುತ್ತೀರಾ? ಹಾಗಾದರೆ ಎಚ್ಚರ!ಬೀಳಲಿದೆ ದಂಡ

Date:

ಕಾರ್ಕಳ : ಕಾರ್ಕಳ ತಾಲೂಕು ಬೈಲೂರು -ಕೌಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಗನಪಲ್ಕೆ – ನಕ್ರೆ – ಕಾರ್ಕಳ ಪಿ ಡಬ್ಲ್ಯೂಡಿ ರಸ್ತೆಯ ಅಬ್ಬೆಟ್ಟು ಎಂಬ ಸಾರ್ವಜನಿಕ ಪರಿಸರದಲ್ಲಿ ಹಲವು ಸಮಯದಿಂದ ದುರ್ನಾಥ ಬೀರುವ ಹಸಿ /ಒಣ ತ್ಯಾಜ್ಯ ಕೋಳಿ, ಹಂದಿಯ ತ್ಯಾಜ್ಯ,ಡೈಪರ್ ಬಿಯರ್ ಬಾಟಲಿ,ಇತ್ಯಾದಿಯನ್ನು ಎಸೆಯುತ್ತಿದ್ದು ಗಮನಕ್ಕೆ ಬಂದಿದ್ದು ಗ್ರಾಮಸ್ಥರಿಂದ ದೂರುಗಳು ಬಂದಿದ್ದವು. ಹಲವು ಬಾರಿ ಗ್ರಾಮ ಪಂಚಾಯತ್ ನಿಂದ ಪರಿಸರವನ್ನು ಸ್ವಚ್ಛಗೊಳಿಸಲಾಗಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಗ್ರಾಮ ಪಂಚಾಯತ್ ಅಧಿಕಾರಿ ಸಿಬ್ಬಂದಿ ವರ್ಗ ಹಾಗೂ ವಾರ್ಡ್ ಸದಸ್ಯರಾದ ವಿಶ್ವೇಶ್ ರವರ ವಿಶೇಷ ಮುತುವರ್ಜಿಯಿಂದ ಸದರಿ ಪ್ರದೇಶದಲ್ಲಿ ಕಸ ಎಸೆಯುವವರ ಮೇಲೆ ಕಣ್ಗಾವಲು ಇಡುವ ಸಲುವಾಗಿ 360 ಡಿಗ್ರಿ ಚಲಿಸುವ ಸೋಲಾರ್ ಸಿ ಸಿ ಕ್ಯಾಮೆರಾ ಅಳವಡಿಸಲಾಗಿತ್ತು.ನಂತರವೂ ಇದರ ಹಾವಳಿ ಜಾಸ್ತಿ ಯಾಗುತ್ತಿದ್ದು ತ್ಯಾಜ್ಯ ಎಸೆಯುತಿದ್ದವರನ್ನು ಸಿಸಿ ಕ್ಯಾಮೆರಾದ ಸಹಾಯದಿಂದ ಪತ್ತೆಹಚ್ಚಿ ತ್ಯಾಜ್ಯ ಎಸೆದವರನ್ನು ಸದರಿ ಸ್ಥಳಕ್ಕೆ ಬರಮಾಡಿಕೊಂಡು ಸದರಿ ಪರಿಸರವನ್ನು ತ್ಯಾಜ್ಯ ಎಸೆದವರ ಸ್ವಂತ ಖರ್ಚಿನಲ್ಲಿ ಸ್ವಚ್ಛಗೊಳಿಸಲು ತಿಳಿಸಲಾಗಿದೆ.

ಆ ಗ್ರಾಮದ ಪಂಚಾಯತ್ ಸದಸ್ಯರಾದ ವಿಶ್ವೇಶ್ ಕೌಡೂರುರವರು ತಮ್ಮ ವಾರ್ಡ್ ನ ಪ್ರತಿಯೊಂದು ಸಮಸ್ಯೆಗಳನ್ನು ಅರಿತು ಸೂಕ್ತ ಕ್ರಮಗಳನ್ನು ಕೈಗೊಂಡು ಉತ್ತಮ ಕಾರ್ಯ ವೈಖರಿಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗೂ ಈ ಸಮಸ್ಯೆಯನ್ನು ಬಗೆ ಹರಿಸಿ ತಮ್ಮ ವಾರ್ಡ್ ಶುಚಿಯಾಗಿಡುವುದರ ಜೊತೆಗೆ ಅಕ್ಕ ಪಕ್ಕ ವಾಸಿಸುವ ಜನರಿಗೆ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಮುಂದಿನ ದಿನದಲ್ಲಿ ಈ ರೀತಿ ಘಟನೆ ಕಂಡುಬಂದಲ್ಲಿ ತ್ಯಾಜ್ಯ ಎಸೆದ ಪ್ರದೇಶ ಸ್ವಚ್ಛಗೊಳುಸುವುದರ ಜೊತೆಗೆ ಪಂಚಾಯತ್ ನ ವತಿಯಿಂದ 5000 ದಂಡ ವಿಧಿಸಲಾಗುವುದೆಂದು ಎಚ್ಚರಿಕೆಯನ್ನು ನೀಡಲಾಗಿದೆ.ಈ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ವಿಚಿತ್ರ ವಿನಂತಿ: “ಪಾಸ್ ಮಾಡಿ ಸರ್, ನನ್ನ LOVE ನಿಮ್ಮ ಕೈಯಲ್ಲಿ!”

ಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಒಂದು ವಿಚಿತ್ರ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.