ಜಾತಿ ಗಣತಿ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ!

Date:

spot_img

ಬೆಂಗಳೂರಿನ ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರ ಉಸ್ತುವಾರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಶನಿವಾರ ನಡೆದ ಸರ್ಕಾರದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಸಂದರ್ಭದಲ್ಲಿ ಕೆಲಕಾಲ ಗೊಂದಲ ಮತ್ತು ಅಸಮಾಧಾನದ ವಾತಾವರಣ ಸೃಷ್ಟಿಯಾಗಿತ್ತು. ಸಮೀಕ್ಷಾ ಸಿಬ್ಬಂದಿಯ ಪ್ರಶ್ನೆಗಳ ಪಟ್ಟಿಯ ವಿಸ್ತಾರದಿಂದ ಡಿಸಿಎಂ ಸಿಡಿಮಿಡಿಗೊಂಡು, ಇಷ್ಟು ದೀರ್ಘ ಮತ್ತು ವೈಯಕ್ತಿಕ ಪ್ರಶ್ನೆಗಳಿಗೆ ಸಾರ್ವಜನಿಕರು ಮಾಹಿತಿ ನೀಡಲು ಸಾಧ್ಯವೇ ಎಂದು ತಮ್ಮದೇ ಸರ್ಕಾರದ ಸಮೀಕ್ಷಾ ವಿಧಾನದ ಬಗ್ಗೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಶ್ನೆಗಳ ಸುರಿಮಳೆಗೆ ಬೇಸರ: ‘ಇಷ್ಟು ತಾಳ್ಮೆ ಜನರಿಗಿದೆಯೇ?’

ಸರ್ಕಾರದ ಸಮೀಕ್ಷಾ ಸಿಬ್ಬಂದಿ ಉಪಮುಖ್ಯಮಂತ್ರಿ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರಿಗೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದಾಗ, ಡಿಕೆಶಿ ಅವರು ಪ್ರಶ್ನೆಗಳ ದೊಡ್ಡ ಪಟ್ಟಿಯನ್ನು ಕಂಡು ಬೇಸರಗೊಂಡರು. “ಚಿನ್ನಾಭರಣ, ಕುರಿ, ಕೋಳಿ, ಟ್ರ್ಯಾಕ್ಟರ್, ಆಸ್ತಿ, ಕೇಸ್‌ಗಳು, ಕಾಯಿಲೆಗಳ ಬಗ್ಗೆಯೂ ಕೇಳುತ್ತೀರಾ? ಜ್ಯುವೆಲರಿ ಇದೆಯಾ? ಎಂಬ ಪ್ರಶ್ನೆ ಕೇಳಿದಾಗ ಡಿಸಿಎಂ ಅವರು ಗರಂ ಆದರು. “ಇವೆಲ್ಲವೂ ತೀರಾ ವೈಯಕ್ತಿಕ ವಿವರಗಳು. ಇಷ್ಟೆಲ್ಲಾ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಅವಶ್ಯಕತೆ ಇಲ್ಲ, ಸಮೀಕ್ಷೆ ಸರಳವಾಗಿರಬೇಕು,” ಎಂದು ಖಾರವಾಗಿ ನುಡಿದರು.

“ನಮಗೇ (ಡಿಸಿಎಂ) ಒಂದು ಗಂಟೆ ಸಮಯ ಬೇಕಾಯಿತು. ದಿನಕ್ಕೆ ಕೇವಲ 20 ಮನೆಗಳನ್ನು ಸಮೀಕ್ಷೆ ಮಾಡಲು ಸಿಬ್ಬಂದಿಗೆ ಹೇಳಿದ್ದೀರಾ. ಇಷ್ಟು ದೊಡ್ಡ ಪ್ರಶ್ನಾವಳಿಗೆ ಜನರಿಗೆ ಉತ್ತರಿಸಲು ತಾಳ್ಮೆ ಇರುತ್ತದೆಯೇ? ಇವುಗಳಿಗೆ ಉತ್ತರ ನೀಡುವ ಬದಲು ಜನರು ‘ನಡೀರಪ್ಪ’ ಎಂದು ಹೇಳಿ ಸಿಬ್ಬಂದಿಯನ್ನು ಕಳುಹಿಸುತ್ತಾರೆ,” ಎಂದು ತಮ್ಮ ಅಳಲು ತೋಡಿಕೊಂಡರು. ಈ ವೇಳೆ ಹಾಜರಿದ್ದ ಬೆಂಗಳೂರು ನಗರ ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಜೋಳನ್ ಅವರು ದಿನಕ್ಕೆ 20 ಮನೆಗಳ ಗುರಿ ಇರುವುದಾಗಿ ಸ್ಪಷ್ಟಪಡಿಸಿದರು.

ಪಿಎನಾ?: ಅಧಿಕಾರಿಗಳಿಗೆ ಡಿಕೆಶಿ ಪ್ರಶ್ನೆ

ಸಮೀಕ್ಷೆ ನಡೆಸುತ್ತಿದ್ದ ಸಿಬ್ಬಂದಿಯೊಬ್ಬರು ಕೆಲವು ಪ್ರಶ್ನೆಗಳಿಗೆ ಹಿರಿಯ ಅಧಿಕಾರಿಯನ್ನು ಕೇಳುತ್ತಿದ್ದಾಗ, ಡಿ.ಕೆ. ಶಿವಕುಮಾರ್ ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು. “ಯಾಕೆ ಹಿರಿಯ ಅಧಿಕಾರಿಯನ್ನು ಕೇಳ್ತೀಯಾ? ಅವರೇನು ನಿನ್ನ ಪಿಎನಾ? ನೀನೇ ನೇರವಾಗಿ ಪ್ರಶ್ನೆ ಕೇಳು,” ಎಂದು ಹೇಳುವ ಮೂಲಕ, ಸಮೀಕ್ಷಾ ಸಿಬ್ಬಂದಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಅವಶ್ಯಕತೆಯನ್ನು ಒತ್ತಿ ಹೇಳಿದರು.

ಟೀಕೆಗೆ ಕಾರಣವಾದ ಪ್ರಶ್ನೆಗಳು:

  • ಫ್ಯಾಕ್ಸ್‌ ಇದೆಯಾ?: “ಈಗ ಯಾರ ಬಳಿ ಫ್ಯಾಕ್ಸ್ ಇರುತ್ತದೆ? ಇಂತಹ ಪ್ರಶ್ನೆಗಳನ್ನು ಏಕೆ ಸೇರಿಸಿದ್ದೀರಿ?” ಎಂದು ಡಿಸಿಎಂ ಆಶ್ಚರ್ಯ ವ್ಯಕ್ತಪಡಿಸಿದರು.
  • ಜ್ಯುವೆಲರಿ (ಚಿನ್ನಾಭರಣ) ಇದೆಯೇ?: “ಪರ್ಸನಲ್ ಡೀಟೆಲ್ಸ್‌ಗೆ ಹೋಗಬಾರದು, ಇದು ಅತಿಯಾದ ವೈಯಕ್ತಿಕ ವಿವರ,” ಎಂದು ಗರಂ ಆದರು.
  • ಆದಾಯ/ಸಾಲ: ಆದಾಯಕ್ಕೆ ‘ದೊಡ್ಡ ಸ್ಲಾಬ್ ಹಾಕಿ’ ಮತ್ತು ‘ವ್ಯವಹಾರಕ್ಕಾಗಿ ಸಾಲವಿದೆ (ಬ್ಯಾಂಕ್‌ನಲ್ಲಿ)’ ಎಂದು ಉತ್ತರಿಸಿದರು.

ಈ ಘಟನೆಯು ಸರ್ಕಾರವು ನಡೆಸುತ್ತಿರುವ ಜಾತಿ ಗಣತಿಯ ವಿಸ್ತೃತ ಪ್ರಶ್ನಾವಳಿ ಮತ್ತು ಅದರ ಪ್ರಾಯೋಗಿಕ ಅನುಷ್ಠಾನದಲ್ಲಿನ ಸವಾಲುಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ. ಡಿಸಿಎಂ ಅವರ ಸಿಡಿಮಿಡಿ ಮತ್ತು ಆಕ್ಷೇಪಣೆಯು, ಸಮೀಕ್ಷಾ ಪಟ್ಟಿಯನ್ನು ಸರಳೀಕೃತಗೊಳಿಸಬೇಕು ಎಂಬ ಸಾಮಾನ್ಯ ಅಭಿಪ್ರಾಯಕ್ಕೆ ದನಿಗೂಡಿಸಿದಂತಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಳೆಗಾಲದ ಜ್ವರ, ಸಾಂಕ್ರಾಮಿಕ ರೋಗ ತಡೆಗೆ ರಾಜ್ಯ ಸರ್ಕಾರ ಸನ್ನದ್ಧ

ಮಳೆಗಾಲದಲ್ಲಿ ವೈರಲ್ ಜ್ವರ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಭಾರಿ ಸಿದ್ಧತೆ ನಡೆಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೀಟ್ ಅಕ್ರಮ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ನೀಟ್‌ ಪರೀಕ್ಷೆ ಅಕ್ರಮ ಖಂಡಿಸಿ ದೇಶಾದ್ಯಂತ ಪ್ರತಿಭಟನೆ. ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಖರ್ಗೆ ವಾಗ್ದಾಳಿ: ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ತೀವ್ರ ಆಕ್ರೋಶ

ನೀಟ್ ಅಕ್ರಮ ಹಾಗೂ ಮಂದಿರದ ಟ್ರಸ್ಟ್ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ: ಸಿಎಂ ಡಿ.ಕೆ. ಶಿವಕುಮಾರ್

ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ಕೆಪಿಸಿಎಲ್ ಸಂಸ್ಥಾಪನಾ ದಿನದ ಪೂರ್ಣ ಮಾಹಿತಿ ಇಲ್ಲಿದೆ ಓದಿ.