spot_img

ಅಯೋಧ್ಯೆಯಲ್ಲಿ ರಾಮನವಮಿಯ ದಿವ್ಯ ಕ್ಷಣ: ಬಾಲರಾಮನ ಹಣೆಗೆ ‘ಸೂರ್ಯತಿಲಕ’

Date:

spot_img

ಅಯೋಧ್ಯಾ: ಶ್ರೀರಾಮನವಮಿಯಂದು ದೇಶದಾದ್ಯಾಂತ ಭಕ್ತಿಭಾವದ ಉತ್ಸವ ನಡೆದಿದ್ದು , ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಲಕ್ಷಾಂತರ ಭಕ್ತರು ಸೇರಿ ಆಧ್ಯಾತ್ಮಿಕ ಶ್ರದ್ಧೆಯಿಂದ ಹಬ್ಬವನ್ನು ಆಚರಿಸಿದ್ದಾರೆ. ವಿಶೇಷವಾಗಿ ಮಧ್ಯಾಹ್ನ 12 ಗಂಟೆಗೆ ರಾಮ ಲಲ್ಲಾ ಮೂರ್ತಿಯ ಮೇಲೆ ಸೂರ್ಯ ಕಿರಣಗಳು ನೇರವಾಗಿ ಬಿದ್ದು ಮೂಡಿದ “ಸೂರ್ಯ ತಿಲಕ”ದ ದಿವ್ಯ ಕ್ಷಣ, ಭಕ್ತರ ಆನಂದವನ್ನು ದ್ವಿಗುಣಗೊಳಿಸಿದೆ.

ರಾಮ ಮಂದಿರದ ಗರ್ಭಗುಡಿಯಲ್ಲಿರುವ ಬಾಲ ರಾಮನ ಮೂರ್ತಿಗೆ ಪ್ರತಿವರ್ಷ ರಾಮನವಮಿಯ ದಿನ ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ನೇರವಾಗಿ ಹಣೆಗೆ ತಲುಪುವಂತೆ ವೈಜ್ಞಾನಿಕ ಆಧಾರಿತ ವಾಸ್ತುಶಿಲ್ಪದ ಮೂಲಕ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. “ತಿಲಕ್ ಆಫ್ ಸೂರ್ಯ ರೇಸ್” ಎಂದು ಕರೆಯಲಾಗುವ ಈ ವ್ಯವಸ್ಥೆಯು ಕನ್ನಡಿಗಳು, ಮಸೂರ ಕಂಚು ಮತ್ತು ಹಿತ್ತಾಳೆಯ ಸಹಾಯದಿಂದ ರೂಪಗೊಂಡಿದ್ದು, ಈ ದಿನದ ದಿವ್ಯ ಕ್ಷಣವನ್ನು ನಿರಂತರವಾಗಿ ಸ್ಮರಣೀಯವಾಗಿಸುತ್ತಿದೆ.

ರಾಮನವಮಿಯಂದು ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಈ ದೃಶ್ಯವನ್ನು ಕಣ್ಣಾರೆ ಕಾಣಲು ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನ 12 ಗಂಟೆಗೆ, ನಿರೀಕ್ಷಿತ ಕ್ಷಣದಲ್ಲಿ ಸೂರ್ಯನ ಕಿರಣಗಳು ಬಾಲ ರಾಮನ ಮೂರ್ತಿಯ ಹಣೆಗೆ ತಲುಪಿದಾಗ, ಮಂದಿರದ ಆವರಣದಲ್ಲಿ ಭಕ್ತರ ನಾರಾದ, ಶಾಂತಿಯ ಸಡಗರ ಮೆರೆಯಿತು.

“ರಾಮ ಮಂದಿರ ನಿರ್ಮಾಣದ ಸಮಯದಲ್ಲೇ ಈ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಆಧ್ಯಾತ್ಮಿಕ ಭಾವನೆ ಮತ್ತು ವೈಜ್ಞಾನಿಕ ಜ್ಞಾನದ ಸಮನ್ವಯವಾಗಿದೆ.”ಎಂದು ಮಂದಿರ ಟ್ರಸ್ಟ್‌ನ ಸದಸ್ಯರು ಈ ಬಗ್ಗೆ ಹೇಳಿದರು.

ಇದೇ ಮೊದಲ ಬಾರಿಗೆ ಮಂದಿರದ ಪೂರ್ಣ ಉದ್ಘಾಟನೆಯ ಬಳಿಕ ನಡೆಯುತ್ತಿರುವ ರಾಮನವಮಿಯಲ್ಲಿ ಇಷ್ಟೊಂದು ಭಕ್ತರು ಪಾಲ್ಗೊಂಡಿರುವುದು ಗಮನಾರ್ಹ. ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು , ದೇವಾಲಯದ ಸುತ್ತಮುತ್ತ ಭಕ್ತರ ನಿಯಂತ್ರಿತ ಪ್ರವೇಶದ ವ್ಯವಸ್ಥೆ ಮಾಡಲಾಗಿತ್ತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೊಲಂಬಿಯಾ ವಿಶ್ವವಿದ್ಯಾಲಯದ ಕೃತಕ ಮರಗಳ ತಂತ್ರಜ್ಞಾನ: ಹವಾಮಾನ ಬದಲಾವಣೆ ವಿರುದ್ಧದ ಹೊಸ ಅಸ್ತ್ರ?

ಜಾಗತಿಕ ತಾಪಮಾನ ಏರಿಕೆ ವಿರುದ್ಧ ಹೋರಾಡಲು, ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿ ಕ್ಲಾಸ್ ಲ್ಯಾಕ್ನರ್ ಅವರು "ಕೃತಕ ಮರ" ಎಂಬ ಕಲ್ಪನೆಯನ್ನು ರೂಪಿಸಿದರು.

ಕೂದಲಿನ ಆರೋಗ್ಯಕ್ಕೆ ಕರಿಬೇವು ಮತ್ತು ಕೊಬ್ಬರಿ ಎಣ್ಣೆಯ ಮ್ಯಾಜಿಕ್: ಪರಿಣಾಮಕಾರಿ ಮನೆಮದ್ದು ಇಲ್ಲಿದೆ

ಕೊಬ್ಬರಿ ಎಣ್ಣೆಗೆ ಕರಿಬೇವನ್ನು ಬೆರೆಸಿ ಬಳಸುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ ಮತ್ತು ಕೂದಲು ದಟ್ಟವಾಗಿ, ಕಪ್ಪಾಗಿ, ವೇಗವಾಗಿ ಬೆಳೆಯುತ್ತದೆ.

ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಮೂವರು ಆರೋಪಿಗಳ ಬಂಧನ

ಸ್ಯಾಂಡಲ್‌ವುಡ್ ನಟಿ ರಮ್ಯಾ (ದಿವ್ಯ ಸ್ಪಂದನಾ) ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸೌಜನ್ಯಾ ಸಹಿತ ಧರ್ಮಸ್ಥಳ ಪ್ರಕರಣಗಳ ನ್ಯಾಯಕ್ಕಾಗಿ ಆಗ್ರಹ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಐಡಿಎಸ್‌ಒ ಪ್ರತಿಭಟನೆ

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿರುವ ಅಪರಾಧ ಪ್ರಕರಣಗಳ ಸಮರ್ಪಕ ತನಿಖೆ ಮತ್ತು ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಧರಣಿ ಹಮ್ಮಿಕೊಂಡಿತ್ತು.