spot_img

ಧರ್ಮಸ್ಥಳ : ಮೊದಲು ಗುರುತಿಸಿದ ಸ್ಥಳದಲ್ಲಿ ಮಿನಿ ಹಿಟಾಚಿ ಬಳಕೆಯಾದರೂ ಸಿಗದ ಕಳೇಬರ

Date:

spot_img

ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ,ಮೊದಲು ಗುರುತಿಸಿದ ಸ್ಥಳದಲ್ಲಿ ಮಿನಿ ಹಿಟಾಚಿ ಯಂತ್ರವನ್ನು ಬಳಸಿದರೂ ಇದುವರೆಗೆ ಕಳೇಬರ ಪತ್ತೆಯಾಗಿಲ್ಲ.

ಇಂದು (ಜುಲೈ 29) ಬೆಳಗ್ಗೆ 12:30ಕ್ಕೆ ಆರಂಭವಾದ ಅಗೆಯುವ ಕೆಲಸವು, 12 ಮಂದಿ ಪೌರಕಾರ್ಮಿಕರ ಸಹಾಯದಿಂದ ಪಿಕ್ಕಾಸು ಮತ್ತು ಹಾರೆಯನ್ನು ಬಳಸಿ ಮಧ್ಯಾಹ್ನ 2:30ರವರೆಗೆ ನಡೆಯಿತು. ಆದಾಗ್ಯೂ, ಮೃತದೇಹದ ಸುಳಿವು ಸಿಗಲಿಲ್ಲ. ಕಳೇಬರ ಅಲ್ಲೆಲ್ಲೂ ಸಿಗದಿದ್ದಾಗ, ದೂರುದಾರರು ಮತ್ತಷ್ಟು ಅಗೆಯುವಂತೆ ಒತ್ತಾಯಿಸಿದರು.

ಮಿನಿ ಹಿಟಾಚಿ ಬಳಕೆ, ಮಳೆಯಿಂದ ತೊಡಕು

ತನಿಖಾಧಿಕಾರಿ ಅನುಚೇತ್ ಅವರ ಸೂಚನೆಯಂತೆ ಮಿನಿ ಹಿಟಾಚಿಯನ್ನು ಕರೆಸಲಾಯಿತು. ಮಧ್ಯಾಹ್ನ 3:30ರಿಂದ ಆರಂಭವಾದ ಹಿಟಾಚಿ ಕಾರ್ಯಾಚರಣೆ ಇದುವರೆಗೂ ನಿಂತಿಲ್ಲ. ನಿರಂತರ ಕಾರ್ಯಾಚರಣೆಯಿಂದ ಆ ಪ್ರದೇಶವು ದೊಡ್ಡ ಹೊಂಡದ ರೂಪವನ್ನು ಪಡೆದುಕೊಂಡಿದೆ.

ಅನಾಮಿಕ ವ್ಯಕ್ತಿಯು ಗುರುತಿಸಿದ ಮೊದಲ ಸ್ಥಳದಲ್ಲೇ ಕಳೇಬರ ಸಿಗದಿರುವುದು, ಹಾಗೂ ಮಳೆಯಿಂದಾಗಿ ಹೊಂಡದಲ್ಲಿ ಒರತೆ ನೀರು ತುಂಬುತ್ತಿರುವುದರಿಂದ ಕಾರ್ಯಾಚರಣೆಗೆ ತೀವ್ರ ತೊಡಕಾಗಿದೆ. ಸತತ ಒಂದು ತಾಸಿಗೂ ಹೆಚ್ಚು ಕಾಲ ಹಿಟಾಚಿ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗದಿರುವುದು ಪ್ರಕರಣವನ್ನು ಮತ್ತಷ್ಟು ಕುತೂಹಲಕಾರಿಯನ್ನಾಗಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದಲ್ಲಿ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಮಾಹಿತಿ ಶಿಬಿರ

ಈ ಮಾಹಿತಿ ಶಿಬಿರದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಭಾಗವಹಿಸಲಿದ್ದು, ಉದ್ಯೋಗ ಮೇಳದ ಸಮಗ್ರ ವಿವರಗಳನ್ನು ನೀಡಲಿದ್ದಾರೆ.

ಮಂಗಳೂರು: ಔಷಧಿಯೆಂದು ಇಲಿಪಾಷಾಣ ಸೇವಿಸಿದ್ದ ಹೆಡ್ ಕಾನ್ಸ್‌ಟೇಬಲ್ ದುರ್ಮರಣ!

ಔಷಧಿಯೆಂದು ತಪ್ಪಾಗಿ ಭಾವಿಸಿ ಇಲಿಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮರವಂತೆಯಲ್ಲಿ ಮಳೆಗಾಲದಲ್ಲೂ ಅಪಾಯಕಾರಿ ಬೋಟಿಂಗ್: ಪ್ರವಾಸಿಗರ ಪ್ರಾಣದೊಂದಿಗೆ ಚೆಲ್ಲಾಟ!

ಬೈಂದೂರು ತಾಲೂಕಿನ ಮರವಂತೆ ಗ್ರಾಮದಲ್ಲಿ ಮಳೆಗಾಲದ ನಡುವೆಯೂ ಸೌಪರ್ಣಿಕಾ ನದಿಯಲ್ಲಿ ಅಪಾಯಕಾರಿ ಬೋಟಿಂಗ್ ನಡೆಸಲಾಗುತ್ತಿದ್ದು, ಇದು ಪ್ರವಾಸಿಗರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ಜಾಲಕ್ಕೆ ಬಲಿಯಾಗಬೇಡಿ: ವಿದ್ಯಾರ್ಥಿಗಳಿಗೆ ಮಂಗಳೂರು ಇನ್ಸ್‌ಪೆಕ್ಟರ್ ಅಜ್ಮತ್ ಅಲಿ ಎಚ್ಚರಿಕೆ!

"ಮಾದಕ ದ್ರವ್ಯ ಪೆಡ್ಲರ್‌ಗಳು ವಿದ್ಯಾರ್ಥಿಗಳನ್ನು ಪ್ರಮುಖವಾಗಿ ತಮ್ಮ ಜಾಲಕ್ಕೆ ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ ನೀವು ಅದಕ್ಕೆ ಬಲಿಯಾಗದೆ, ನಿಮ್ಮ ಭವಿಷ್ಯ ನಿರ್ಮಾಣದ ಕಡೆಗೆ ಪ್ರಯತ್ನಶೀಲರಾಗಬೇಕು" ಎಂದು ಬಂದರು ಉತ್ತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಜ್ಮತ್ ಅಲಿ ಹೇಳಿದರು.