spot_img

ಪತ್ನಿಯನ್ನು ಬಿಟ್ಟು ಅತ್ತೆಯೊಂದಿಗೆ ಪರಾರಿಯಾದ ಪತಿ

Date:

spot_img

ದಾವಣಗೆರೆ : ಇತ್ತೀಚೆಗೆ ದಾವಣಗೆರೆ ಜಿಲ್ಲೆಯಲ್ಲಿ ಸಾಮಾಜಿಕ ಮೌಲ್ಯಗಳನ್ನು ಗಂಭೀರವಾಗಿ ಪ್ರಶ್ನಿಸುವಂತಹ ಘಟನೆ ನಡೆದಿದೆ. ಕೇವಲ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ 25 ವರ್ಷದ ಯುವಕನೊಬ್ಬ, ತನ್ನ 55 ವರ್ಷದ ಅತ್ತೆಯೊಂದಿಗೆ ಓಡಿಹೋಗಿರುವ ಪ್ರಕರಣ ಪತ್ತೆಯಾಗಿದೆ.

ಗಣೇಶ್ ಎಂಬ ಯುವಕನು ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಅವರ ಮಗಳು ಹೇಮಾಳೊಂದಿಗೆ ಎರಡು ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ. ಆದರೆ ಇದೀಗ ತನ್ನ ಪತ್ನಿಯನ್ನು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಬಿಟ್ಟು ಆಕೆಯ ತಾಯಿಯಾದ ಶಾಂತಾ ಜೊತೆ ಪರಾರಿಯಾಗಿದ್ದಾನೆ.

ಶಾಂತಾ ನಾಗರಾಜ್ ರವರ ಎರಡನೇ ಪತ್ನಿಯಾಗಿದ್ದು, 13 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ನಾಗರಾಜ್ ಅವರ ಮೊದಲ ಪತ್ನಿಯಿಂದ ಹುಟ್ಟಿದ ಮಗಳು ಹೇಮಾಳನ್ನು ಗಣೇಶ್‌ನೊಂದಿಗೆ ಮದುವೆ ಮಾಡಲಾಗಿತ್ತು. ಮದುವೆಯ ನಂತರವೇ ಶಾಂತಾ ಮತ್ತು ಗಣೇಶ್ ನಡುವಿನ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ.

ಗಣೇಶ್ ಮೊಬೈಲ್‌ನಲ್ಲಿ ಶಾಂತಾಳೊಂದಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದನ್ನು ಹೇಮಾ ನೋಡಿ, ತನ್ನ ತಂದೆಗೆ ಫಾರ್ವರ್ಡ್ ಮಾಡಿದ್ದಾಳೆ. ಈ ಅಕ್ರಮ ಸಂಬಂಧ ಬೆಳಕಿಗೆ ಬಂದ ಬಳಿಕ ಶಾಂತಾ ಮನೆಗೆ ಸೇರಿದ ನಗದು ಹಾಗೂ ಆಭರಣಗಳನ್ನು ಕಳ್ಳತನ ಮಾಡಿದ್ದು, ಗಣೇಶ್ ಜೊತೆ ಪರಾರಿಯಾಗಿದ್ದಾಳೆ.

ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಸಂಬಂಧಿಕರು ಹಾಗೂ ಗ್ರಾಮಸ್ಥರಲ್ಲಿ ಆಕ್ರೋಶವನ್ನು ಉಂಟುಮಾಡಿದ್ದು, ಸಮಾಜದಲ್ಲಿ ಬೆರಗು ಮೂಡಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇಷ್ಟು ದಿನ ಮೌನವಾಗಿದ್ದ ಬಿಜೆಪಿಗರು ಈಗೇಕೆ ಧರ್ಮಸ್ಥಳ ಪರ ರ‍್ಯಾಲಿ?- ಡಿಕೆಶಿ ಪ್ರಶ್ನೆ

ಧರ್ಮಸ್ಥಳ ಪ್ರಕರಣ: ಬಿಜೆಪಿ ರ‍್ಯಾಲಿ ನ್ಯಾಯಕ್ಕಲ್ಲ, ರಾಜಕೀಯ ಲಾಭಕ್ಕೆ- ಡಿಕೆಶಿ ಆರೋಪ

ನಿಮ್ಮ ಪ್ರಾಂಪ್ಟ್‌ಗಳು ಮತ್ತು ಚಿತ್ರಗಳ ಆಧಾರದ ಮೇಲೆ Google Gemini ಈಗ ಕಥೆಪುಸ್ತಕಗಳನ್ನು ವಿವರಿಸುತ್ತದೆ.

ಚಿತ್ರ-ನಿರ್ದೇಶಿತ ಕಥೆಗಳು: ಗೂಗಲ್‌ನ ಜೆಮಿನಿ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಅಧ್ಯಾಯ

ದಿನನಿತ್ಯ ಬಿಸ್ಕತ್ತುಗಳ ಸೇವನೆ: ಆರೋಗ್ಯಕರ ಅಭ್ಯಾಸವಲ್ಲ, ಬದಲಿಗೆ ಹಾನಿಕರ

ಬಿಸ್ಕತ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕರವೇ? ಇಲ್ಲಿದೆ ವೈದ್ಯಕೀಯ ಮಾಹಿತಿ