spot_img

ಐತಿಹಾಸಿಕ ಕೊಟ್ಟಿಯೂರು ದೇವಾಲಯಕ್ಕೆ ಭೇಟಿ ನೀಡಿದ ನಟ ದರ್ಶನ್ ಕುಟುಂಬ

Date:

ತಿರುವನಂತಪುರಂ : ಪ್ರಸಿದ್ಧ ನಟ ದರ್ಶನ್ ತಮ್ಮ ಕುಟುಂಬದೊಂದಿಗೆ ಕೇರಳದ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವವಿರುವ ಕೊಟ್ಟಿಯೂರು ಶಿವ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದ ನಂತರ ದರ್ಶನ್‌ ಕರ್ನಾಟಕದ ಹಲವು ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಅವರು ಈ ಹಿಂದೆ ಕೇರಳದ ದೇವಸ್ಥಾನವೊಂದಕ್ಕೆ ಕುಟುಂಬ ಸಮೇತ ತೆರಳಿ ಹೋಮ ಮಾಡಿಸಿ ಬಂದಿದ್ದರು. ಇದೀಗ ಅವರು ಮತ್ತೊಮ್ಮೆ ಕೇರಳ ಮತ್ತೊಂದು ಐತಿಹಾಸಿಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದರ್ಶನ್‌ ಅವರೊಂದಿಗೆ ಪತ್ನಿ ವಿಜಯಲಕ್ಷ್ಮಿ ಕೂಡ ಸುರಿವ ಮಳೆಯಲ್ಲೇ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.

ಕೊಟ್ಟಿಯೂರು ದೇವಾಲಯವು ಕೇರಳದ ಅತ್ಯಂತ ಹಳೆಯ ಶಿವ ದೇವಾಲಯಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಈ ದೇವಾಲಯವು ವೈಶಾಖ ಮಾಸದಲ್ಲಿ ನಡೆಯುವ ವೈಶಾಖಮಹೋತ್ಸವದ ಮೂಲಕ ಭಕ್ತರಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಈ ಉತ್ಸವಕ್ಕೆ ಲಕ್ಷಾಂತರ ಭಕ್ತರು ವರ್ಷವೂ ಆಗಮಿಸುತ್ತಾರೆ.

ದೇವಾಲಯದ ಪೌರಾಣಿಕ ಹಿನ್ನೆಲೆ:
ಈ ದೇವಾಲಯವು ದಕ್ಷ ಯಾಗಕ್ಕೆ ಹೆಸರುವಾಸಿಯಾಗಿದೆ. ಹಿಂದೂ ಪುರಾಣದ ಪ್ರಕಾರ ದಕ್ಷಪ್ರಜಾಪತಿ ತನ್ನ ಮಗಳು ಶಿವನೊಂದಿಗೆ ಮದುವೆಯಾದುದನ್ನು ನೋಡಿ ಸಂತೋಷ ಪಡದೆ, ತನ್ನ ಮಗಳು ಸತಿ ದೇವಿಗೆ ಮತ್ತು ಶಿವನಿಗೆ ತಿಳಿಸದೆ ಈ ಸ್ಥಳದಲ್ಲಿ ಯಾಗ ನಡೆಸಲು ನಿರ್ಧರಿಸಿದನು. ಸತಿ ದೇವಿಯು ತನ್ನ ಉದ್ದೇಶವನ್ನು ಅರಿಯದೆ ಯಾಗಭೂಮಿಗೆ ಭೇಟಿ ನೀಡಿದಳು. ಆದರೆ ಅವಳ ತಂದೆಯಿಂದ ಅವಮಾನಿಸಲ್ಪಟ್ಟಳು. ಗಾಯಗೊಂಡು ಅವಮಾನಿತಳಾದ ಅವಳು ತನ್ನ ಶಕ್ತಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಳು. ಈ ಕೃತ್ಯದಿಂದ ವಿಚಲಿತನಾದ ಶಿವನು ವೀರಭದ್ರನಾಗಿ ತಾಂಡವನೃತ್ಯ ಮಾಡಿ ದಕ್ಷನ ಶಿರಚ್ಛೇದ ಮಾಡಿದನು ಎಂದು ಹೇಳಲಾಗುತ್ತದೆ.

ವೈಶಾಖಮಹೋತ್ಸವ ವೈಶಿಷ್ಟ್ಯತೆ:
ಈ ಮಹೋತ್ಸವ ‘ನೆಯ್ಯಟ್ಟಂ’ ಎಂಬ ತುಪ್ಪದ ಅಭಿಷೇಕದಿಂದ ಆರಂಭವಾಗುತ್ತದೆ. ಉತ್ಸವದ ಕೊನೆಗೆ ಎಳನೀರು ಹಾಗೂ ಶಾಸ್ತ್ರೀಯ ವಿಧಾನದಂತೆ ವಿಶೇಷ ಅಭಿಷೇಕ ನಡೆಯುತ್ತದೆ. ಈ ಉತ್ಸವಕ್ಕೆ ಆದಿ ಶಂಕರಾಚಾರ್ಯರು ತಮ್ಮ ಕಾಲದಲ್ಲಿ ರೂಪಿಸಿದ ನಿಯಮಗಳು ಇಂದು ಕೂಡ ಪಾಲನೆಯಲ್ಲಿವೆ.

ನಟ ದರ್ಶನ್ ಅವರ ಭೇಟಿ ಈ ಧಾರ್ಮಿಕ ಸನ್ನಿವೇಶಕ್ಕೆ ವಿಶೇಷ ಮಹತ್ವ ನೀಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ ಡಿಸ್ಟಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ (ರಿ.) ಅಧ್ಯಕ್ಷರಾಗಿ ಆಯ್ಕೆ

ಉಡುಪಿ ಡಿಸ್ಟಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ (ರಿ.) ಉಡುಪಿ ಇದರ ನೂತನ ಅಧ್ಯಕ್ಷರಾಗಿ ಶ್ರೀಯುತ ಸಂತೋಷ್ ಕುಮಾರ್ ಮೂಡಬಿದ್ರಿಯವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಆಪಲ್ ಲೋಕಕ್ಕೆ ಹೊಸ ಫೋನ್‌ ಕ್ರಾಂತಿ: ಪುಸ್ತಕದಂತೆ ಮಡಚುವ ವಿನ್ಯಾಸದೊಂದಿಗೆ ಬರಲಿದೆ ಫೋಲ್ಡಬಲ್ ಐಫೋನ್ V68

ಮಡಚುವ ಫೋನ್‌ಗಳ ಮಾರುಕಟ್ಟೆಯಲ್ಲಿ ತನ್ನ ಮೊದಲ ಹೆಜ್ಜೆಯನ್ನಿಡಲು ಮುಂದಾಗಿರುವ ಆಪಲ್

ಮಂಗಳೂರಿನ ಅಮೆಝಾನ್ ಸುಗಂಧ ದ್ರವ್ಯ ಘಟಕದಲ್ಲಿ ಅಗ್ನಿ ಅವಘಡ: ಅಪಾರ ನಷ್ಟ

ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಅಮೆಝಾನ್ ಸುಗಂಧ ದ್ರವ್ಯ ತಯಾರಿಕಾ ಕಂಪನಿಯಲ್ಲಿ ಬುಧವಾರ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ.

“ಬದುಕಿನಲ್ಲಿ ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ” : ಶ್ರೀ ದಾಮೋದರ ಶರ್ಮ ಬಾರ್ಕೂರು.

ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್), ಹಿರಿಯಡ್ಕದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶ್ರೀ ದಾಮೋದರ ಶರ್ಮ ಬಾರ್ಕೂರುರವರು ಉಪನ್ಯಾಸ ನೀಡಿದರು.