
ಸ್ವತಂತ್ರ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಕಾಶಮಟ್ಟದ ಸಾಧನೆಗಳನ್ನು ಕಂಡಿದೆ : ಪದ್ಮಶ್ರೀ ಎ.ಎಸ್ ಕಿರಣ್ ಕುಮಾರ್.
ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ 79ನೇ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್ ಕಿರಣ್ ಕುಮಾರ್ ರವರು ಧ್ವಜಾರೋಹಣವನ್ನು ನೆರವೇರಿಸಿ , ಸ್ವಾತಂತ್ರ್ಯ ಎಂಬುದು ಇಂದು ವಿಜ್ಞಾನದ ಮಾರ್ಗದಲ್ಲಿ ಸ್ವಾಯತ್ತತೆ, ಪ್ರಗತಿ ಮತ್ತು ಜನಕೇಂದ್ರಿತ ಸೇವೆಯ ಸಂಕೇತವಾಗಿದೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಮೂಲಕ ಹೊಸ ಸಾಮರಸ್ಯವನ್ನು ರೂಪಿಸುತ್ತಿದ್ದೇವೆ. ಅಂತರಿಕ್ಷ ಕ್ಷೇತ್ರ, ಅಣುಶಕ್ತಿ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಕೃಷಿ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಹೀಗೆ ಸ್ವತಂತ್ರ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಕಾಶ ಮಟ್ಟದ ಸಾಧನೆಗಳನ್ನು ಕಾಣುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನಲ್ಲಿ ಹೊಸದಾಗಿ ಆರಂಭಗೊಂಡ 6/8 ನೌಕಾ ಉಪವಿಭಾಗ – ಎನ್.ಸಿ.ಸಿ ಉಡುಪಿ ಘಟಕ ಇದರ ಪ್ರಾಯೋಜಕರಾದ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಹಾಗೂ CTO ಮಹೇಶ್ ಆರ್. ಶೆಣೈ. ಕೆ. ಇವರ ನೇತೃತ್ವದಲ್ಲಿ ಎನ್. ಸಿ.ಸಿ ಕೆಡೆಟ್ ಗಳಿಂದ ಕವಾಯತು ನಡೆಯಿತು. ನೌಕಾಪಡೆ ವಿಭಾಗವನ್ನು ಕೆಡೆಟ್ ಕ್ಯಾಪ್ಟನ್ ಗುಂಡಾಲ ಶ್ರೀಗವಿ ಯವರು ನಿರ್ವಹಿಸಿಕೊಟ್ಟರು.
ಸಿ.ಇ.ಎಫ್ ಇನ್ಸ್ಪೈರೋ ಕಾರ್ಯಕ್ರಮ
ವಿಜ್ಞಾನ ಮತ್ತು ಯುವಜನತೆ ಇವೆರಡೂ ರಾಷ್ಟ್ರ ನಿರ್ಮಾಣದ ಇಂಜಿನ್ ಗಳು : ಪದ್ಮಶ್ರೀ ಎ.ಎಸ್ ಕಿರಣ್ ಕುಮಾರ್
ಪೂರ್ವಾಹ್ನ 11.00 ಗಂಟೆಯಿಂದ ” From Class Room to Cosmos : Science, Youth and Nation Building ” ಎಂಬ ಶೀರ್ಷಿಕೆಯಲ್ಲಿ CEF inspiro ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿ ಭಾಷಣದಲ್ಲಿ ಎ.ಎಸ್ ಕಿರಣ್ ಕುಮಾರ್ ರವರು ” ವಿಜ್ಞಾನದ ಪಯಣವು ಬಾಹ್ಯಾಕಾಶ ಕೇಂದ್ರದಲ್ಲಿ ಅಲ್ಲ, ತರಗತಿ ಕೊಠಡಿಯಲ್ಲಿ ಆರಂಭವಾಗುತ್ತದೆ. ತರಗತಿಯಲ್ಲಿ ಕಲಿಯುವ ಪ್ರತಿಯೊಂದು ಪಾಠ, ಪ್ರಯೋಗಾಲಯದಲ್ಲಿ ಮಾಡುವ ಪ್ರತಿಯೊಂದು ಪ್ರಯೋಗ, ಕುತೂಹಲದಿಂದ ಕೇಳುವ ಪ್ರತಿಯೊಂದು ಪ್ರಶ್ನೆ – ಇವುಗಳೇ ರಾಷ್ಟ್ರ ನಿರ್ಮಾಣದ ಬೀಜಗಳು. ಈ ಕುತೂಹಲವೇ ಯುವಜನರನ್ನು ಕಾಸ್ಮೋಸ್ ತಲುಪಿಸುವ ಶಕ್ತಿಯಾಗಿ ಪರಿಣಮಿಸುತ್ತದೆ. ವಿಜ್ಞಾನ ಮತ್ತು ಯುವಜನತೆ ರಾಷ್ಟ್ರ ನಿರ್ಮಾಣದ ಇಂಜಿನ್ ಗಳು ಇದ್ದಂತೆ ” ಎಂದು ಹೇಳಿದರು. ಸಮಾರಂಭದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.
ಕ್ರಿಯೇಟಿವ್ ಸವಿಗಾನ