spot_img

ಕಲಾ ಕುತೂಹಲ: ಚಿತ್ರಸಿರಿಯಲ್ಲಿ ಮಕ್ಕಳ ಕಲಾ ಪ್ರದರ್ಶನ

Date:

spot_img

ಉಡುಪಿಯ ಚಿತ್ರಸಿರಿ ಆರ್ಟ್ ಸೆಂಟರ್ ಆಯೋಜಿಸಿರುವ ಮಕ್ಕಳ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಉಡುಪಿ ಸೌತ್ ಸ್ಕೂಲ್ ಎದುರುಗಡೆ ಇರುವ ದೈವಜ್ಞ ಕಲಾಮಂದಿರದಲ್ಲಿ ಜನವರಿ 25ರಂದು ಮಧ್ಯಾಹ್ನ 3:00 ಗಂಟೆಗೆ ನಡೆಯಿತು
ಉಡುಪಿಯ ಕಲಾವಿದ್ಯಾಲಯ ಜಂಗಮಠದಚಿತ್ರಕಲಾ ಮಂದಿರದ ನಿರ್ದೇಶಕರಾದ ಶ್ರೀಯುತ ನಿರಂಜನ್ ಯು .ಸಿ ಅವರು ದೀಪ ಬೆಳಗಿಸಿ ಮತ್ತು ಚಿತ್ರಕಲೆಯ ಅನಾವರಣ ಮಾಡುವ ಮೂಲಕ ಉದ್ಘಾಟನೆಯನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕರಾದ ಶ್ರೀಯುತ ಮೋಹನ್ ಕಡಬ ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ. ಶ್ರುತಿ ಬಲ್ಲಾಳ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಂಚನಬೆಟ್ಟು ಇಲ್ಲಿನ ಮುಖ್ಯೋಪಾಧ್ಯಾಯರಾಗಿರುವ ಶ್ರೀ ಪಾಂಡುರಂಗ ನಾಯ್ಕ್ ಶ್ರೀಮತಿ ಬಬಿತಾ ಸುವರ್ಣ ಶ್ರೀ ಪ್ರಕಾಶ್ ಬಂಗೇರ ಹಾಗೂ ಎಕ್ಸ್ಟ್ರೀಮ್ ಡ್ಯಾನ್ಸ್ ಅಕಾಡೆಮಿಯ ನಿರ್ದೇಶಕರಾದ ಮಂಜಿತ್ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿದ್ದರು
ಚಿತ್ರಸಿರಿ ಆರ್ಟ್ಸ್ ಸೆಂಟರ್ ನ ಸಾಧಕ ವಿದ್ಯಾರ್ಥಿಗಳನ್ನು ಮತ್ತು ಚಿತ್ರಸಿರಿಗೆ ಸದಾ ಬೆಂಬಲವನ್ನ ನೀಡುವ ಯುವಕರನ್ನು ಸನ್ಮಾನಿಸಲಾಯಿತು
ಹಿರಿಯ ಗುರುಗಳಾದ ಶ್ರೀ ಪಾಂಡುರಂಗ ನಾಯ್ಕ್ ಮತ್ತು ಎಕ್ಸ್ಟ್ರೀಮ್ ಡ್ಯಾನ್ಸ್ ಅಕಾಡೆಮಿಯ ಮಂಜಿತ್ ಶೆಟ್ಟಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು ಈ ಕಾರ್ಯಕ್ರಮದಲ್ಲಿ ಶ್ರೀಮತಿ ನಮ್ರತಾ ರಾಕೇಶ್ ಶೆಟ್ಟಿ ಇವರಿಗೂ ಅಭಿನಂದನೆ ನೀಡಿ ಸನ್ಮಾನಿಸಲಾಯಿತು
ಹೆತ್ತವರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು
ಕುಮಾರಿ ಪ್ರಿಯದರ್ಶಿನಿ ಪ್ರಾರ್ಥಿಸಿದರು ಚಿತ್ರಸಿರಿಯ ಶಿಕ್ಷಕಿ ನಿಕಿತಾ ಎಲ್ಲರನ್ನೂ ಸ್ವಾಗತಿಸಿದರು.

ಶ್ರೀಮತಿ ಲತಾ ಶೇಟ್ ಧನ್ಯವಾದ
ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ನಮೃತ ರಾಕೇಶ್ ಶೆಟ್ಟಿ ನಡೆಸಿಕೊಟ್ಟರು. ಚಿತ್ರ ಸಿರಿಯ ಕಲಾ ನಿರ್ದೇಶಕರಾದ ಶ್ರೀ ದಿವಾಕರ್ ಸಾಣೆಕಲ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಜನವರಿ 26ರಂದು ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು ಮಕ್ಕಳ ಚಿತ್ರಕಲಾ ಪ್ರದರ್ಶನವು ಮುಂದುವರೆಯಲಿದೆ ಮಕ್ಕಳ ಚಿತ್ರಕಲಾ ಪ್ರದರ್ಶನದ ಜೊತೆಗೆ ಅದರ ಖರೀದಿಗೂ ಮುಕ್ತ ಅವಕಾಶವಿದೆ.

ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಆದರಪೂರ್ವಕವಾಗಿ ಸ್ವಾಗತಿಸುವವರು ಚಿತ್ರಸಿರಿ ಆರ್ಟ್ಸ್ ಸೆಂಟರ್ನ ಕಲಾ ವಿದ್ಯಾರ್ಥಿಗಳು ಮತ್ತು ಪೋಷಕರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಶಹೀದ್ ಉಧಮ್ ಸಿಂಗ್ ಅವರ ಬಲಿದಾನ ದಿನ

ಇದು ಕೇವಲ ಒಂದು ದಿನಾಚರಣೆಯಲ್ಲ, ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಒಬ್ಬ ವೀರನ ಸ್ಮರಣೆ.

ಮಂಗಳೂರು ಉದ್ಯಮಿ ನಿತಿನ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮಂಗಳೂರು ಮೂಲದ ಹೊಟೇಲ್ ಉದ್ಯಮಿ, ಮರೋಳಿ ನಿವಾಸಿ ನಿತಿನ್ ಪೂಜಾರಿ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

‘ಸು ಫ್ರಂ ಸೋ’ ಸೀಕ್ವೆಲ್ ಸದ್ಯಕ್ಕಿಲ್ಲ: ರಾಜ್ ಬಿ. ಶೆಟ್ಟಿಯಿಂದ ಅಚ್ಚರಿ ನಿರ್ಧಾರ!

ಕನ್ನಡ ಚಿತ್ರರಂಗದಲ್ಲಿ ಭಾರೀ ಯಶಸ್ಸು ಗಳಿಸಿ, ಸಂಚಲನ ಮೂಡಿಸಿರುವ ಕರಾವಳಿಯ ಕಲಾವಿದರ ಬಹುನಿರೀಕ್ಷಿತ ಚಿತ್ರ 'ಸು ಫ್ರಂ ಸೋ' ಈಗ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ.

ಆಗಸ್ಟ್‌ 1ರಿಂದ ಹೊಸ ನಿಯಮಗಳು ಜಾರಿ: ಎಲ್‌ಪಿಜಿ, ಯುಪಿಐ, ಕ್ರೆಡಿಟ್ ಕಾರ್ಡ್ ಸೇರಿ ಹಲವು ಬದಲಾವಣೆಗಳು!

2025ರ ಆಗಸ್ಟ್‌ ತಿಂಗಳ ಆರಂಭದಿಂದಲೇ ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಹಲವು ಆರ್ಥಿಕ, ಬ್ಯಾಂಕಿಂಗ್ ಮತ್ತು ಪಾವತಿ ವ್ಯವಸ್ಥೆಗಳ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಯಾಗಲಿವೆ.