spot_img

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ: ಸಿಎಂ ರಾಜೀನಾಮೆ ನೀಡಬೇಕೆಂದು ಹೇಳಲು ಬಿಜೆಪಿಗೆ ನೈತಿಕ ಹಕ್ಕಿಲ್ಲ: ಬಿಪಿನ್ ಚಂದ್ರಪಾಲ್ ನಕ್ರೆ

Date:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನಿರೀಕ್ಷಿತ ಕಾಲ್ತುಳಿತದಿಂದ ಉಂಟಾದ ಅನಪೇಕ್ಷಿತ ಸಾವುಗಳು ಮನುಕುಲದ ಮನಕರಗುವ ವಿಷಾದನೀಯ ಘಟನೆ. ಆದಾಗ್ಯೂ ಪ್ರತಿಪಕ್ಷ ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಸಿಎಂ, ಡಿಸಿಎಂ ಮತ್ತು ಗೃಹಸಚಿವರ ರಾಜೀನಾಮೆ ಕೇಳುವ ಮೂಲಕ “ಸಾವಿನ ಶೋಕಾಂಗಣದಲ್ಲಿ ಮತ ಹೆಕ್ಕುವ” ರಾಜಕೀಯ ಮಾಡುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

2024 ಜುಲೈಯಲ್ಲಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಬೋಲೇಬಾಬಾ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿದಲ್ಲಿ 121ಜನರು ಹಾಗೂ ಈ ಭಾರಿಯ ಕುಂಭಮೇಳ ಪ್ರಯಾಗ್ ರಾಜ್ ನಲ್ಲಿ ಒಂದು ಲೆಕ್ಕಾಚಾರದ ಪ್ರಕಾರ 180 ಕ್ಕೂ ಹೆಚ್ಚು ಯಾತ್ರಿಕರು ಮಡಿದಾಗ ಅಲ್ಲಿನ ಮುಖ್ಯಮಂತ್ರಿ ಯೋಗೀ ಆದಿತ್ಯನಾಥ್, 2025 ಮೇ ತಿಂಗಳಲ್ಲಿ ಗೋವಾದ ಶಿರಬಾಗ್ ದೇಗುಲದಲ್ಲಾದ ಕಾಲ್ತುಳಿತದಲ್ಲಿ 8ಕ್ಕೂ ಹೆಚ್ಚು ಭಕ್ತರ ಸಾವು ಸಂಭವಿಸಿದಾಗ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್, 2025 ಜನವರಿಯಲ್ಲಿ ತಿರುಪತಿಯಲ್ಲಿ ನಡೆದ ಕಾಲ್ತುಳಿತದಲ್ಲಿ 6ಕ್ಕೂ ಹೆಚ್ಚು ಭಕ್ತರು ಅಸುನೀಗಿದಾಗ ಅಲ್ಲಿನ ಮುಖ್ಯಮಂತ್ರಿ, ಕೇಂದ್ರದಲ್ಲಿ ಇವರ ಪಾಲುದಾರ ಚಂದ್ರಬಾಬು ನಾಯ್ಡು, 2022 ನವಂಬರ್ ನಲ್ಲಿ ಗುಜರಾತಿನ ಮೋರ್ಭಿಯಲ್ಲಿ ತೂಗು ಸೇತುವೆ ಮುರಿದು 130ಕ್ಕೂ ಹೆಚ್ಚು ಜನರು ಸತ್ತಾಗ ಅಲ್ಲಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಆದಿಯಾಗಿ ಅವರದ್ದೇ ಪಕ್ಷದ ಆಡಳಿತದ ರಾಜ್ಯಗಳಲ್ಲಿ ನಡೆದ ಈ ಮಹಾ ದುರಂತಗಳಿಗೆ ಸರಕಾರಗಳನ್ನು ಹೊಣೆಯಾಗಿಸಿ ಅಲ್ಲಿನ ಮುಖ್ಯಮಂತ್ರಿಗಳ ರಾಜೀನಾಮೆ ಕೇಳದ ಬಿಜೆಪಿ ನಾಯಕರಿಗೆ ರಾಜ್ಯ ಸರಕಾರದ ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಪುಲ್ವಾಮಾದಲ್ಲಿ ಆಳುವ ಕೇಂದ್ರ ಸರಕಾರದ ಗುಪ್ತಚರ ಮಾಹಿತಿ ವೈಪಲ್ಯದಿಂದಾದ ಉಗ್ರಗಾಮಿಗಳ ಆಕ್ರಮಣದಿಂದ ದೇಶ ಕಾಯುವ 40 ಸೈನಿಕರ ಹತ್ಯೆ ಹಾಗೂ ಅದೇ ಸರಕಾರದ ಭದ್ರತಾ ವೈಪಲ್ಯದಿಂದ ಫಹಲ್ಗಾಮ್ ನಲ್ಲಿ 26ಹೆಣ್ಣು ಮಕ್ಕಳ ಗಂಡಂದಿರ ದಾರುಣ ಹತ್ಯೆಯಾಗಿ ಅವರ ಹಣೆಯ ಸಿಂಧೂರ ಅಳಿಸಿ ಹೋದಾಗ ಹೊಣೆ ಹೊತ್ತ ದೇಶದ ಪ್ರಧಾನಿಯ ರಾಜೀನಾಮೆ ಕೇಳಬೇಕಿತ್ತು. ಅಂದು ಬೇಡವಾದ ರಾಜೀನಾಮೆಯ ನಾಟಕ ಇಂದು ಕರ್ನಾಟಕದ ಪರಿಸ್ಥಿತಿಗೆ ಬೇಕಾದದ್ದು ಬಿಜೆಪಿಯ ಸ್ವಹಿತಾಸಕ್ತಿಯ ರಾಜಕೀಯ ಷಡ್ಯಂತ್ರಕ್ಕೆ ಸಾಕ್ಷಿಯಾಗಿದೆ. ಇದರ ಹಿಂದೆ ಆಂತರಿಕ ಕಚ್ಚಾಟದಿಂದ ಬೆಂದು ಹೋಗಿರುವ ರಾಜ್ಯ ಬಿಜೆಪಿಯ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ.

ದೇಶದಲ್ಲಿ ಇಂತಹ ದುರಂತಗಳು ಹೊಸತೇನಲ್ಲ. ಇದನ್ನು ಆಳುವ ಸರಕಾರಗಳ ಆಡಳಿತಾತ್ಮಕ ವೈಫಲ್ಯ ಎಂದು ವ್ಯಾಖ್ಯನಿಸಲಾಗದು. ಸರಕಾರಗಳ ಮುಖ್ಯಸ್ಥರ ರಾಜೀನಾಮೆ ಇದಕ್ಕೆ ಪರಿಹಾರವೂ ಅಲ್ಲ. ಆದರೆ ದುರಂತಗಳಿಗೆ ಕಾರಣವಾದ ಅಂಶವನ್ನು ಅನ್ವೇಶಿಸಿ ತಪ್ಪಿದಸ್ಥರನ್ನು ಶಿಕ್ಷಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ಸರಕಾರಗಳ ಕರ್ತವ್ಯ. ಮುಖ್ಯವಾಗಿ ಜನರ ಅಂಧ ಅಭಿಮಾನದ ಭಾವನಾತ್ಮಕ ಉನ್ಮಾದಕತೆ ಮತ್ತು ಕಾರ್ಯಕ್ರಮ ಆಯೋಜಕರ ನಿರ್ವಹಣಾ ವೈಪಲ್ಯ ಇಂತಹ ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗುತ್ತದೆ. ಇಂತಹ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಖಂಡನೀಯ. ಅದೇನಿದ್ದರೂ ಇಂತಹ ದುರ್ಘಟನೆ ರಾಜ್ಯದಲ್ಲಿ ಮರುಕಳಿಸದಿರಲಿ ಎನ್ನುವುದೇ ಕಾಂಗ್ರೆಸ್ ಆಶಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪೂಜಾ ಹೆಗ್ಡೆ ಟಾಲಿವುಡ್‌ಗೆ ಕಂಬ್ಯಾಕ್‌: ದುಲ್ಕರ್ ಸಲ್ಮಾನ್ ಜೊತೆ ಹೊಸ ಸಿನಿಮಾ

ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು ಮಾಲಿವುಡ್ ನಟ ದುಲ್ಕರ್ ಸಲ್ಮಾನ್ ಜೊತೆ ಹೊಸ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಣಜಾರು : ಬೇಟೆಯ ವೇಳೆ ಗುಂಡು ಹಾರಿಸಿದ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

ಬೇಟೆಯ ವೇಳೆ ಗುಂಡು ಹಾರಿಸಿ ಅದು ಕಾರು ಮತ್ತು ಮನೆಯ ಬಾಗಿಲಿಗೆ ತಗುಲಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯ ಮತ್ತು ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ಗಳಲ್ಲಿ 6 ಪದಕಗಳನ್ನು ಗೆದ್ದ ಹಿರಿಯಡ್ಕದ ಗ್ರೀನ್ ಪಾರ್ಕ್ ಶಾಲಾ ವಿದ್ಯಾರ್ಥಿಗಳು

ಕರಾಟೆ ಕ್ರೀಡೆಯಲ್ಲಿ ಹಿರಿಯಡ್ಕದ ಗ್ರೀನ್ ಪಾರ್ಕ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ನಿಟ್ಟೆ ಕಾಲೇಜಿನಲ್ಲಿ ‘ಪ್ರತ್ಯಾಹಾರ್’ ಬೀದಿ ನಾಟಕ

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಂಗವಾಗಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ತಾಲೀಮ್ ತಂಡ ಹಾಗೂ ಸಿಒಪಿಇ-ಆದಿತ್ಯ ಬಿರ್ಲಾ ಗ್ರೂಪ್ ನ ಎಂಪವರ್ ಜಂಟಿಯಾಗಿ 'ಪ್ರತ್ಯಾಹಾರ್' ಎಂಬ 15 ನಿಮಿಷಗಳ ಕಾಲದ ಆತ್ಮಹತ್ಯೆ ತಡೆಗಟ್ಟುವಿಕೆಯ ಬಗೆಗಿನ ಬೀದಿ ನಾಟಕವನ್ನು ಸೆ.10 ರಂದು ಕಾಲೇಜಿನ ಆವರಣದಲ್ಲಿ ಏರ್ಪಡಿಸಿತು.