
ಕಾರ್ಕಳ ತಾಲ್ಲೂಕು ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಶ್ರೀ ಮಹಾವಿಷ್ಣುಮೂರ್ತಿ, ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 12-02-2025 ರಿಂದ 16.02.2025 ರವರೆಗೆ ನಡೆಯಲಿರುವ ಉತ್ಸವದ ಅಂಗವಾಗಿ ಪೂರ್ವ ಸಿದ್ಧತೆಯಾಗಿ ದಿನಾಂಕ 9-02-2025 ರಂದು ಸ್ವಚ್ಛತಾ ಕಾರ್ಯಕ್ರಮ ಜರಗಿತು .ಈ ಕಾರ್ಯಕ್ರಮದಲ್ಲಿ ಶ್ರೀ ಸರ್ವೋತ್ತಮ ಕಡಂಬ , ಶ್ರೀ ತಾರನಾಥ ಶೆಟ್ಟಿ, ಸುಧೀಶ್ ರಾವ್,ಸಂಜೀವ ಪೂಜಾರಿ ,ದಿನೇಶ ಪೂಜಾರಿ ,ಉದಯ ಪೂಜಾರಿ, ಕೃಷ್ಣ ನಾಯಕ್, ವಾಸು ಶೆಟ್ಟಿ, ಪ್ರತಿಮಾ ನಾಯಕ್ (ಸೇವಾಪ್ರತಿನಿಧಿ) , ಶ್ರೀಮತಿ ರೂಪ (ಸೇವಾ ದೀಕ್ಷಿತಿ) ಇನ್ನಿತರ ಎಲ್ಲಾ ಮುಖಂಡರ ನೇತೃತ್ವದಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಿರ್ಗಾನ ಒಕ್ಕೂಟ ಹಾಗೂ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಚಿಕ್ಕಲ್ ಬೆಟ್ಟು, ಭಜನಾ ಮಂಡಳಿ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದರು.