
ಬ್ರಹ್ಮಾವರ : ರುಡ್ ಸೆಟ್ ಬ್ರಹ್ಮಾವರ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್(ರಿ) ಹೈಕಾಡಿ ಸಂಸ್ಥೆಯ ಸಹಭಾಗಿತ್ಚದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು.ಆವರ್ಸೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಶ್ರೀಮತಿ ದಿವ್ಯಾ ಎಸ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ತರಬೇತಿ ಪಡೆದು ಈ ಗ್ರಾಮದಲ್ಲಿ ಒಂದು ಸ್ವಾವಲಂಭಿ ಮೇಣದಬತ್ತಿ ತಯಾರಿಕಾ ಘಟಕ ಮಾಡುವ ಭರವಸೆ ನೀಡಿ ಶಿಬಿರಾರ್ಥಿಗಳಿಗೆ ಗ್ರಾಮ ಪಂಚಾಯತ್ ಪರವಾಗಿ ಸ್ವ ಉದ್ಯೋಗ ಮಾಡುವವರಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಮಾರ್ಟ್ ಕ್ರೀಯೇಶನ್ಸ್ ನ ಕಾರ್ಯದರ್ಶಿ ಶ್ರೀ ಮಹೇಶ್ ಹೈಕಾಡಿಯವರು ಪ್ರಾಸ್ತಾವಿಕ ಮಾತನಾಡಿ ಸ್ಮಾರ್ಟ್ ಕ್ರೀಯೇಶನ್ಸ್ ಸಂಸ್ಥೆಯ ಕಾರ್ಯಕ್ರಮದ ವಿಶೇಷತೆಯನ್ನು ಮತ್ತು ಸಂಸ್ಥೆಯ ಸ್ವ ಉದ್ಯೋಗಿಗಳಿಗೆ ಯಾವಾಗಲು ಸಹಾಯಕ್ಕೆ ಇರುವ ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಡಾ. ಬೊಮ್ಮಯ್ಯ ಎಂ, ನಿರ್ದೆಶಕರು, ರುಡ್ ಸೆಟ್ ಬ್ರಹ್ಮಾವರ ಇವರು ಮಾತನಾಡಿ, ರುಡ್ ಸೆಟ್ ಸಂಸ್ಥೆಯ ತರಬೇತಿ ಮತ್ತು ಸಮಾಜಿಕ ಬದಲಾವಣೆಯಲ್ಲಿ ಸ್ವ ಉದ್ಯೋಗದ ಪಾತ್ರವನ್ನು ಶಿಬಿರಾರ್ಥಿಗಳಿಗೆ ತಿಳಿಸಿ ಹೇಳಿದರು. ಕಾರ್ಯಕ್ರಮದಲ್ಲಿ ಆವರ್ಸೆ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಶ್ರೀಮತಿ ಶಮೀನಾ ಬಾನು, ಪಂಚಾಯತ್ ಸದಸ್ಯರಾದ ಶ್ರೀ ಸಂತೋಷ್ ಕೊಣ್ಣಿಮಕ್ಕಿ, ಸ .ಹಿ.ಪ್ರಾ ಶಾಲೆ ಹೈಕಾಡಿಯ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ್ ಶೆಟ್ಟಿ, ಎಸ್ ಡಿ.ಎಂಸಿ ಅಧ್ಯಕ್ಷಾರದ ಶ್ರೀ ರಾಘವೇಂದ್ರ ಮಡಿವಾಳ ಗೋರಾಜೆ, ಶಾಲಾ ಹ.ವಿ.ಸಂ ಅದ್ಯಕ್ಷರಾದ ಶ್ರೀ ಆಸಿಫ್ ಹೈಕಾಡಿ, ಶ್ರೀ ಸೂರ್ಯ ಪ್ರಕಾಶ್ ದಾಮ್ಲೆ, ರುಡ್ ಸೆಟ್ ಸಂಸ್ಥೆ ಸಿಬ್ಬಂದಿಯವರಾದ ಶ್ರೀ ರವಿ ಸರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕಿಯಾಗಿರುವ ಶ್ರೀಮತಿ ಚೈತ್ರಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕೃಷ್ಣಮೂರ್ತಿ ಹೈಕಾಡಿಯವರು ಸರ್ವರನ್ನು ಸ್ವಾಗತಿಸಿದರು. ಟ್ರಸ್ಟ್ ನ ಸದಸ್ಯರಾದ ಶ್ರೀಮತಿ ಅನಿತಾ ಶಂಕರ್ , ಶ್ರೀಮತಿ ಕೌಸಲ್ಯ, ಶ್ರೀಮತಿ ನಾಗರತ್ನ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರು ಆವರ್ಸೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರಿ ಸುಮಾರು 30ಕ್ಕೂ ಹೆಚ್ಚು ಗ್ರಾಮದ ಮಹಿಳೆಯರು ಈ ತರಬೇತಿಗೆ ಸೇರ್ಪಡೆಗೊಂಡಿದ್ದಾರೆ.




































