
ಪುಣೆ: ಮದುವೆ ಇಷ್ಟವಿಲ್ಲದ ಕಾರಣದಿಂದಾಗಿ ವರನನ್ನು ಕೊಲ್ಲಲು ಯುವತಿಯೋರ್ವಳು ಸುಪಾರಿ ನೀಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆರೋಪಿ ಯುವತಿ ಇದೀಗ ತಲೆಮರೆಸಿಕೊಂಡಿದ್ದಾಳೆ.
ಅಹಲ್ಯಾನಗರದ ಮಯೂರಿ ಸುನಿಲ್ ದಾಂಗ್ಡೆ ಎಂಬವಳಿಗೆ ಜಲಗಾಂವ್ನ ಸಾಗರ್ ಜಯಸಿಂಗ್ ಕದಮ್ ಎಂಬವರೊಂದಿಗೆ ನಿಶ್ಚಿತಾರ್ಥವಾಗಿದೆ. ಫೋಟೋಶೂಟ್ ಮುಗಿದ ನಂತರ ಮದುವೆಗೆ ಹಿಂದೇಟು ಹಾಕಿದ ಮಯೂರಿ, ಸಾಗರ್ನನ್ನು ಕೊಲ್ಲಲು ತನ್ನ ಪರಿಚಿತ ಸಂದೀಪ್ ಗಾವ್ಡೆ ಮೂಲಕ ₹1.5 ಲಕ್ಷ ಸುಪಾರಿ ನೀಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಫೆಬ್ರವರಿ 27ರಂದು, ಜಲಗಾಂವ್ನ ಹೋಟೆಲ್ ಬಳಿ ಸಾಗರ್ ಮೇಲೆ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದು, ಕಾಲು ಮುರಿದಿದೆ ಮತ್ತು ತಲೆ-ಬೆನ್ನಿಗೆ ಗಾಯವಾಗಿದೆ. ಘಟನೆ ಸಂಬಂಧಿಸಿದಂತೆ ಯಾವತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀವ್ರ ತನಿಖೆಯ ನಂತರ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮಯೂರಿಯ ವಿರುದ್ಧ IPC ಸೆಕ್ಷನ್ 109, 61(2), 126(2) ಅಡಿಯಲ್ಲಿ ಆರೋಪ ದಾಖಲಾಗಿದೆ.