ಬ್ರಹ್ಮಾವರದ ಚಿನ್ನದ ಸರ ದರೋಡೆ ಪ್ರಕರಣ : ಒಂದು ದಿನದಲ್ಲೇ ಮೂವರು ಆರೋಪಿಗಳ ಬಂಧನ

Date:

spot_img

ಯಲ್ಲಾಪುರ/ಬ್ರಹ್ಮಾವರ:ವಾರಂಬಳ್ಳಿ ಗ್ರಾಮದ ಆದರ್ಶನಗರದಲ್ಲಿ 70 ವರ್ಷದ ವೃದ್ಧೆಯೊಬ್ಬಳಿಂದ ಚಿನ್ನದ ಸರ ಎಳೆದೊಯ್ದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಕೇವಲ ಒಂದು ದಿನದಲ್ಲೇ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಗೋವಾದ ಗೌರೀಶ ರೋಹಿದಾಸ್ ಕೆರ್ಕರ್ (37), ಬಿಜಾಪುರದ ಮೈನುದ್ದೀನ್ ಬಾಗಲಕೋಟ್ (31) ಮತ್ತು ಮುಂಬೈನ ಸುರ್ಜಿತ್ ಗೌತಮ್ (27) ಎಂದು ಗುರುತಿಸಲಾಗಿದೆ. ಈ ಮೂವರು ಸಹಾ ಗೋವದಲ್ಲಿ ನೆಲೆಸಿದ್ದುದಾಗಿ ತನಿಖೆಯಿಂದ ತಿಳಿದುಬಂದಿದೆ.

ಘಟನೆ ಹಿನ್ನಲೆ:
ಶನಿವಾರ ಬೆಳಗ್ಗೆ ಆದರ್ಶನನಗರದ ಪದ್ಮಾ (70) ಮನೆಯ ಹೊರಭಾಗದ ರಸ್ತೆ ಪಕ್ಕ ಹೂವು ಕೊಯ್ಯುತ್ತಿದ್ದ ಸಂದರ್ಭ, ಬಿಳಿ ಬಣ್ಣದ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ತಲೆ, ಮುಖಕ್ಕೆ ಗುದ್ದಿದ ಬಳಿಕ ಅವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಎಳೆದೊಯ್ದ ನಂತರ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು.

ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು:
ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಿಂದ ಕಾರಿನ ನಂಬರ್ ಗುರುತಿಸಿ, ಉತ್ತರ ಕನ್ನಡದ ಯಲ್ಲಾಪುರದತ್ತ ಆರೋಪಿಗಳು ಓಡುತ್ತಿರುವ ಮಾಹಿತಿ ಪಡೆದರು. ಯಲ್ಲಾಪುರ ಪೊಲೀಸರು ಕೂಡಲೇ ಬ್ಲಾಕ್ ಹಾಕಿ ತಡೆಯಲು ಯತ್ನಿಸಿದರು. ಆರೋಪಿಗಳು ಕಾರನ್ನು ಕಾಡಿನ ದಿಕ್ಕಿಗೆ ಓಡಿಸಿ, ಕಾರನ್ನು ಬಿಟ್ಟು ಅಲ್ಲಿಂದ ಪರಾರಿಯಾದರು.
ಆದರೆ, ಮೊಬೈಲ್ ಲೊಕೇಶನ್ ಆಧರಿಸಿ ನಡೆಸಿದ ಶೋಧದಿಂದ ಮೂವರನ್ನೂ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾದರು.

ಆರೋಪಿಗಳ ಹಿಂದಿನ ಚರಿತ್ರೆ:
ಬಂಧಿತ ಗೌರೀಶ್ ವಿರುದ್ಧ ಈಗಾಗಲೇ ವಿವಿಧ ರಾಜ್ಯಗಳಲ್ಲಿ 16 ಕಳವು ಪ್ರಕರಣಗಳು ದಾಖಲಾಗಿವೆ. ಉಳಿದ ಇಬ್ಬರ ಹಿನ್ನೆಲೆಯೂ ತನಿಖೆಯಲ್ಲಿದೆ.
ಮೈನುದ್ದೀನ್ ಬಾಗಲಕೋಟ್ ತನ್ನ ಪತ್ನಿಯನ್ನು ಉಡುಪಿಯಲ್ಲಿ ಭೇಟಿಯಾಗಲು ಆಗಮಿಸಿದ್ದ ಸಂದರ್ಭದಲ್ಲಿ ಈ ದರೋಡೆ ನಡೆಸಿದ ಬಗ್ಗೆ ಮಾಹಿತಿ ಲಭಿಸಿದೆ. ಈ ದರೋಡೆ ಅವರು ಕರಾವಳಿಯಲ್ಲಿ ಮಾಡಿದ ಮೊದಲ ಅಪರಾಧವಾಗಿದೆ.

ಕಟ್ಟುನಿಟ್ಟಿನ ಪೊಲೀಸ್ ಕಾರ್ಯಾಚರಣೆ:
ಆರೋಪಿಗಳನ್ನು ಪತ್ತೆಹಚ್ಚಲು ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್., ಉಪನಿರೀಕ್ಷಕರಾದ ಸುದರ್ಶನ್ ದೊಡ್ಡಮನಿ, ಮಹಾಂತೇಶ ಜಾಬಗೌಡ, ಹಿರಿಯಡ್ಕ ಪಿಎಸ್‌ಐ ಪುನೀತ್ ಬಿ.ಇ. ಹಾಗೂ ಅಪರಾಧ ಪತ್ತೆ ತಂಡದ ಸದಸ್ಯರು ಸಂಯುಕ್ತ ಕಾರ್ಯಾಚರಣೆ ನಡೆಸಿದರು.
ಯಲ್ಲಾಪುರದಿಂದ ಸಿಪಿಐ ರಮೇಶ್ ಹಾನಾಪುರ ಹಾಗೂ ಪಿಎಸ್‌ಐ ಯಲ್ಲಾಲಿಂಗ ಕುನ್ನೂರ ಅವರ ಸಹಕಾರವೂ ಮಹತ್ವಪೂರ್ಣವಾಯಿತು.

ಪೊಲೀಸರು ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ ಕಾರು, ಮೊಬೈಲ್ ಫೋನ್‌ಗಳು ಮತ್ತು ದರೋಡೆಗೆ ಬಳಸಿದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಡಾ. ಶಿವಪ್ರಸಾದ್ ಶೆಟ್ಟಿಗೆ ಎನ್‌ಸಿಸಿ ತರಬೇತಿಯಲ್ಲಿ ಪ್ರಥಮ ಸ್ಥಾನ

ನಿಟ್ಟೆ ಸಂಸ್ಥೆಯ ಎನ್‌ಸಿಸಿ ಅಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಮಹಾರಾಷ್ಟ್ರದ ಕಾಮ್ಟೀ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿ ಪ್ರವಾಸೋದ್ಯಮ ಮ್ಯಾಸ್ಕಾಟ್ ಸ್ಪರ್ಧೆ: ನಿಟ್ಟೆಯಲ್ಲಿ ಜುಲೈ 25ಕ್ಕೆ ಆಯೋಜನೆ

ಉಡುಪಿ ಪ್ರವಾಸೋದ್ಯಮದ ಅಧಿಕೃತ ಮ್ಯಾಸ್ಕಾಟ್ ವಿನ್ಯಾಸ ಸ್ಪರ್ಧೆ ಜುಲೈ 25ರಂದು ನಿಟ್ಟೆಯಲ್ಲಿ ನಡೆಯಲಿದೆ. ಭಾಗವಹಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಳೆಗಾಲದ ಜ್ವರ, ಸಾಂಕ್ರಾಮಿಕ ರೋಗ ತಡೆಗೆ ರಾಜ್ಯ ಸರ್ಕಾರ ಸನ್ನದ್ಧ

ಮಳೆಗಾಲದಲ್ಲಿ ವೈರಲ್ ಜ್ವರ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಭಾರಿ ಸಿದ್ಧತೆ ನಡೆಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೀಟ್ ಅಕ್ರಮ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ನೀಟ್‌ ಪರೀಕ್ಷೆ ಅಕ್ರಮ ಖಂಡಿಸಿ ದೇಶಾದ್ಯಂತ ಪ್ರತಿಭಟನೆ. ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.