
ದೆಹಲಿ: ಥಾಯ್ಲೆಂಡ್ನ ಫುಕೆಟ್ ದ್ವೀಪದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಾರಾಟದ ವೇಳೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನ AI 379 ಇಂದು (ಜೂನ್ 13) ಬೆಳಿಗ್ಗೆ 9:30ಕ್ಕೆ ಫುಕೆಟ್ನಿಂದ ಭಾರತದ ರಾಜಧಾನಿ ದೆಹಲಿಗೆ ಹೊರಟಿತ್ತು.
ವಿಮಾನವು ಹಾರಾಟದಲ್ಲಿದ್ದಾಗಲೇ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣದ ಭದ್ರತಾ ಕ್ರಮವಾಗಿ ಪೈಲಟ್ ಫುಕೆಟ್ ವಿಮಾನ ನಿಲ್ದಾಣಕ್ಕೆ ತುರ್ತು ಇಳಿಕೆಗಾಗಿ ಅನುಮತಿ ಕೋರಿದರು. ಅನಂತರ ವಿಮಾನವು ಅಂಡಮಾನ್ ಸಮುದ್ರದ ಮೇಲ್ಭಾಗದಲ್ಲಿ ಬೃಹತ್ ವೃತ್ತಾಕಾರದ ಮಾರ್ಗದಲ್ಲಿ ಹಾರಾಟ ನಡೆಸಿ, ಮತ್ತೆ ಫುಕೆಟ್ ದ್ವೀಪದಲ್ಲಿ ಲ್ಯಾಂಡ್ ಆಯಿತು.
ವಿಮಾನದಲ್ಲಿ ಒಟ್ಟು 156 ಪ್ರಯಾಣಿಕರು ಇದ್ದು, ಎಲ್ಲರೂ ಸುರಕ್ಷಿತವಾಗಿ ದ್ದಾರೆಂದು ಮಾಹಿತಿ ದೊರೆತಿದೆ. ಸ್ಥಳೀಯ ಭದ್ರತಾ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡಲೇ ವಿಮಾನವನ್ನು ತನ್ನ ವಶಕ್ಕೆ ತೆಗೆದುಕೊಂಡು ವಿಸ್ತೃತ ತಪಾಸಣೆ ಕೈಗೊಂಡಿದ್ದಾರೆ ಹಾಗೂ ತನಿಖೆ ಮುಂದುವರೆದಿದೆ.
ಈ ಘಟನೆ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಮತ್ತು ಭಾರತ–ಥಾಯ್ಲೆಂಡ್ ವಿಮಾನಯಾನ ಅಧಿಕಾರಿಗಳು ಎಚ್ಚರಿಕೆಯ ಕ್ರಮಗಳನ್ನು ಜಾರಿಗೊಳಿಸಿದ್ದಾರೆ.