spot_img

ಬಿಜೆಪಿ ನಾಯಕರೇ ನ್ಯಾಯದ ಪರವಾಗಿ ಇರುವ ಬುದ್ದಿವಂತ ನಾಗರಿಕರನ್ನು ಅವಮಾನಿಸಬೇಡಿ : ಅನಿತಾ ಡಿಸೋಜ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

Date:

ತಪ್ಪು ಮಾಡಿದ ವ್ಯಕ್ತಿಗಳ ಮೇಲೆ, ಹಿಂಸೆಯನ್ನು ಪ್ರಚೋದಿಸುವವರ ಮೇಲೆ, ಕೊಲೆ, ಹಲ್ಲೆ, ಅತ್ಯಾಚಾರ, ಅನಾಚಾರ, ರೌಡಿಸಮ್ ನಡೆಸುವವರ ಮೇಲೆ, ಹಾಗೂ ಅದನ್ನು ಬೆಂಬಲಿಸುವವರ ಮೇಲೆ ಕೇಸ್ ದಾಖಲಿಸುವುದನ್ನು ಪ್ರಬುದ್ಧ ನಾಗರಿಕ ಸಮಾಜ ಖಂಡಿತಕ್ಕೂ ಒಪ್ಪುತ್ತದೆ ಮತ್ತು ಗೌರವಿಸುತ್ತದೆ.ಹೀಗಿರುವಾಗ ತಪ್ಪು ಮಾಡಿದವರ ಮೇಲೆ ಕೇಸ್ ದಾಖಲಾದ ಕೂಡಲೇ ಅದು ಹಿಂದೂ ಸಮಾಜದ ಮೇಲೆ ದಾಳಿ, ಹಿಂದೂ ನಾಯಕರ ಮೇಲೆ ದಾಳಿ, ಹಿಂದುಗಳನ್ನು ಹೆದರಿಸುವ ಬೆದರಿಸುವ ತಂತ್ರ ಅಂತೆಲ್ಲ ಬಿಜೆಪಿಯ ನಾಯಕರು ಹೇಳೋದು ಖಂಡನೀಯ. ಮಾತ್ರವಲ್ಲ ಅದು ಕೂಡಾ ಧರ್ಮದ್ರೋಹ, ಸಮಾಜದ್ರೋಹ, ರಾಷ್ಟ್ರ ದ್ರೋಹವೇ ಆಗುತ್ತದೆ.ಇಂತಹ ಹೇಳಿಕೆ ಶಾಂತಿಯ, ಸೌಹಾರ್ದದ ಪರವಾಗಿರುವ ನಾಗರಿಕರಿಗೆ ಮಾಡುವ ಅವಮಾನವಾಗುತ್ತದೆ ಎಂಬುದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿಯ ನಾಯಕರುಗಳು ಅರ್ಥ ಮಾಡಿಕೊಳ್ಳಬೇಕು.

ನಮ್ಮ ಸಮಾಜದ ಶಾಂತಿ ಭಂಗವಾಗುವ ರೀತಿಯ ಉದ್ರೇಕಕಾರಿ ಭಾಷಣ, ವಿಷಕಾರುವ ಭಾಷಣ ಮಾಡಿದ ನಾಯಕರ ಮೇಲೆ ಕೇಸ್ ಆದರೆ ಅದು ಹಿಂದೂ ಸಮಾಜದ ಮೇಲೆ ದಾಳಿ ಎಂದು ಬಿಜೆಪಿಯ ನಾಯಕರುಗಳು ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ನಮ್ಮ ಸರಕಾರ ಅವಿಭಾಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಬಿಜೆಪಿಯವರು ಮಾಡುವುದು ಬಿಟ್ಟು ಹಿಂದುಗಳನ್ನೇ ಟಾರ್ಗೆಟ್ ಮಾಡುತ್ತಾ ಇದ್ದೀರಿ ಅಂತ ಸುಳ್ಳು ಆರೋಪ ಮಾಡುತ್ತಾ ಹಿಂದುಗಳನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ಧಾರೆ.
ಇಂತಹ ಗಿಮಿಕ್ ಗಳನ್ನು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಸಂಘಪರಿವಾರದ ಸಂಘಟನೆಗಳು ಹಿಂದೂ ಸಂಘಟನೆಗಳು ಅಲ್ಲಾ, ಅದರ ನಾಯಕರು ಸಮಸ್ತ ಹಿಂದೂ ಸಮಾಜದ ನಾಯಕರೂ ಅಲ್ಲಾ, ಅದರ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಲು ಹಿಂದುತ್ವದ ಹೆಸರಿನಲ್ಲಿ ಅಮಾಯಕ ಹಿಂದೂ ಯುವಕರ, ಹಿಂದೂ ಮುಸ್ಲಿಂ ಸಮಾಜದ ಜನರ ಜೀವನದ ಜೊತೆ ಅಟವಾಡುತ್ತಿದ್ದಾರೆ.

ಈ ಸತ್ಯವನ್ನು ಅವಿಭಾಜಿತ ದಕ್ಷಿಣಕನ್ನಡ ಜಿಲ್ಲೆಯ ಬುದ್ದಿವಂತ ನಾಗರಿಕರು ಅರಿಯಬೇಕಿದೆ. ಹಾಗೂ ಎಲ್ಲಾ ನಾಗರಿಕರು ಸತ್ಯದ ಪರನಿಂತು ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ ಗೊಳ್ಳುವ ಪೊಲೀಸ್ ಇಲಾಖೆಯ ಪರನಿಂತು ಅವರಿಗೆ ಧೈರ್ಯ ತುಂಬಿ ಸಹಕಾರ ನೀಡುವ ಅಗತ್ಯವಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಅನಿತಾ ಡಿಸೋಜರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೆಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ಸೀಮಂತ್ ಕುಮಾರ್ ಸಿಂಗ್ ನೇಮಕ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ಘಟನೆ ನಂತರ ರಾಜ್ಯ ಸರ್ಕಾರ ತಕ್ಷಣದ ಕ್ರಮ ಕೈಗೊಂಡಿದ್ದು, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರನ್ನು ಅಮಾನತು ಮಾಡಿ, ಹಿರಿಯ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೂತನ ಕಮಿಷನರ್ ಆಗಿ ನೇಮಕ ಮಾಡಿದೆ.

ಜೋಳಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಸುತ್ತಿಕೊಂಡು ಶಿಶು ಸಾವನ್ನಪ್ಪಿದ ದಾರುಣ ಘಟನೆ

ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ಜೋಳಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಸುತ್ತಿಕೊಂಡು ಒಂದು ವರ್ಷದ ಹೆಣ್ಣು ಮಗು ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ.

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ!”ನಾನು ಎಂದಿಗೂ ರೋಡ್ ಶೋಗಳ ಬೆಂಬಲಿಗನಲ್ಲ”:ಗೌತಮ್ ಗಂಭೀರ್

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿ ಬಿ ವಿಜಯೋತ್ಸವದಲ್ಲಿ ಅಪಾರ ಅಭಿಮಾನಿಗಳು ಭಾಗವಹಿಸಿದ ಪರಿಣಾಮ ಭೀಕರ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದ್ದು, 11 ಮಂದಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ದೇಶದಾದ್ಯಂತ ಆಘಾತ ಉಂಟುಮಾಡಿದ್ದು, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಕುರಿತು ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ದಿನ ವಿಶೇಷ – ವಿಶ್ವ ಕೀಟ ಸಚೇತನ ದಿನ

2017ರಲ್ಲಿ ಚೀನಾದ ಬೀಜಿಂಗ್ನಲ್ಲಿ ನಡೆದ ಸಮ್ಮೇಳನದಲ್ಲಿ ಈ ದಿನವನ್ನು ಪ್ರಾರಂಭಿಸಲಾಯಿತು.