spot_img

ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಗೆಳತಿಯನ್ನು ಹತ್ಯೆಗೈದು 2 ದಿನ ಶವದೊಂದಿಗೆ ಮಲಗಿದ 2 ಮಕ್ಕಳ ತಂದೆ

Date:

spot_img

ಭೋಪಾಲ್ : ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯೊಬ್ಬಳನ್ನು ಕೊಂದು, ಆಕೆಯ ಶವದ ಪಕ್ಕದಲ್ಲೇ ಎರಡು ದಿನ ಮಲಗಿದ್ದ ಅಮಾನುಷ ಘಟನೆ ಭೋಪಾಲ್‌ನ ಗಾಯತ್ರಿ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ವಿವರ:
ಹತ್ಯೆಗೆ ಒಳಗಾದ ಮಹಿಳೆಯನ್ನು ರಿತಿಕಾ ಸೇನ್ (29) ಎಂದು ಗುರುತಿಸಲಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆರೋಪಿ ಸಚಿನ್ ರಜಪೂತ್ (32) ವಿದಿಶಾದ ಸಿರೋಂಜ್ ಮೂಲದವನಾಗಿದ್ದು, ಈತನಿಗೆ ಈಗಾಗಲೇ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಆದರೆ, ಕಳೆದ ಮೂರು ವರ್ಷಗಳಿಂದ ರಿತಿಕಾ ಮತ್ತು ಸಚಿನ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಕಳೆದ 9 ತಿಂಗಳಿಂದ ಭೋಪಾಲ್‌ನ ಗಾಯತ್ರಿ ನಗರದ ಮನೆ ಒಂದರಲ್ಲಿ ಅವರು ವಾಸವಾಗಿದ್ದರು.

ಹತ್ಯೆಗೆ ಕಾರಣ:
ಜೂನ್ 27ರಂದು ರಾತ್ರಿ, ರಿತಿಕಾ ಮತ್ತು ಸಚಿನ್ ನಡುವೆ ಜಗಳ ಉಂಟಾಗಿದೆ. ಸಚಿನ್ ತನ್ನ ಗೆಳತಿಯು ಕಂಪನಿಯ ಬಾಸ್‌ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದಾನೆ. ವಾದ-ವಿವಾದ ತೀವ್ರಗೊಂಡಿದ್ದು, ಕೋಪದ ಭರದಲ್ಲಿ ಸಚಿನ್, ರಿತಿಕಾಳ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ.

ಘಟನೆಯ ನಂತರ:
ಹತ್ಯೆಯ ಬಳಿಕ ಸಚಿನ್, ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಅದರ ಪಕ್ಕದಲ್ಲೇ ಎರಡು ದಿನ ಮಲಗಿದ್ದಾನೆ. ಈ ಅವಧಿಯಲ್ಲಿ ಆತ ಕುಡಿದು ನಶೆಯಲ್ಲಿರುವಾಗ, ತನ್ನ ಸ್ನೇಹಿತ ಅನೂಜ್‌ಗೆ ಕರೆ ಮಾಡಿ ನಡೆದಿದ್ದನ್ನು ವಿವರಿಸಿದ್ದಾನೆ . ಆದರೆ, ಸ್ನೇಹಿತ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಮೂರನೇ ದಿನದಂದು ಮತ್ತೆ ಅಂತಹದ್ದೇ ಮಾತು ಹೇಳಿದಾಗ, ಅನೂಜ್ ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ರಿತಿಕಾಳ ಮೃತದೇಹ ಪತ್ತೆಯಾಗಿದೆ. ಆರೋಪಿ ಸಚಿನ್ ಇದೀಗ ಪೊಲೀಸ್ ವಶದಲ್ಲಿದ್ದು, ಪ್ರಕರಣದ ತನಿಖೆ ಮುಂದುವರೆಯುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ UFO ದಿನ

ವಿಶ್ವ ಯುಎಫ್ಒ ದಿನವು (World UFO Day) ಅನಾಹತ ಉಡ್ಡಯನ ವಸ್ತುಗಳು (Unidentified Flying Objects - UFOs) ಮತ್ತು ಬ್ರಹ್ಮಾಂಡದ ಇತರ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ದಿನ.

ಕಳೆದ ಪರ್ಯಾಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದ್ದ 10 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಯತ್ನಿಸಿ ಪ್ರಸಾದ್ ಕಾಂಚನ್ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಲಿ : ದಿನೇಶ್ ಅಮೀನ್

ಕಾಂಗ್ರೆಸ್‌ಗೆ ಶ್ರೀಕೃಷ್ಣನ ಕೃಪೆ ಇದೆ ಎನ್ನುವ ಬಾಲಿಶ ಹೇಳಿಕೆ ಬಿಟ್ಟು, ಉಡುಪಿ ಪರ್ಯಾಯಕ್ಕೆ ಘೋಷಿಸಿದ ₹10 ಕೋಟಿಯ ಅನುದಾನ ಬಿಡುಗಡೆ ಮಾಡಿ ಕೃಪೆಗೆ ಪಾತ್ರರಾಗಲಿ ಎಂದು ಬಿಜೆಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಪ್ರಸಾದ್ ಕಾಂಚನ್ ಗೆ ಟಾಂಗ್ ನೀಡಿದ್ದಾರೆ.

ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಸಭೆ

ನಿಂಜೂರು ಗ್ರಾಮದ ಬೂತ್ ಸಂಖ್ಯೆ -63 ಬೂತ್ ಸಮಿತಿಯ ಸಭೆಯು ದಿನಾಂಕ-30/06/2025 ಸೋಮವಾರ ಸಂಜೆ ಘಂಟೆ 5.30ಕ್ಕೆ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಾನ್ಯ ಶ್ರೀ ವಿಲ್ಸನ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಬೂತ್ ಸಂಖ್ಯೆ-63 ಸಮಿತಿಯ ಸೇವಾದಳದ ಅಧ್ಯಕ್ಷರಾದ ನಿಂಜೂರು ಪಾತಾವು ಶ್ರೀ ರೋನಾಲ್ಡ್ (ರೋನಿ) ಡಿಸೋಜ ಅವರ ಹಾಲ್ ನಲ್ಲಿ ನಡೆಯಿತು.

ಕ್ಯಾಲ್ಸಿಯಂ ಕೊರತೆಗೆ ಕಾರಣವಾಗುವ ಆಹಾರಗಳು ಬಹುಮಟ್ಟಿಗೆ ಮೂಳೆಗಳ ಆರೋಗ್ಯವನ್ನು ಹಾನಿಗೊಳಿಸುತ್ತವೆ!

ಕ್ಯಾಲ್ಸಿಯಂ ದೇಹಕ್ಕೆ ಅತ್ಯಂತ ಅಗತ್ಯವಾದ ಖನಿಜ. ಇದು ಮೂಳೆಗಳು ಮತ್ತು ಹಲ್ಲುಗಳ ಬಲದ ಮೂಲವಾಗಿದೆ.