spot_img

ಭಟ್ಕಳ: ಜಾಲಿ ಕೋಡಿ ತೀರದಲ್ಲಿ ಬೃಹತ್ ಕಂಟೈನರ್ ಬೋಟ್ ಪತ್ತೆ – ಶಿಪ್‌ನಿಂದ ಬೇರ್ಪಟ್ಟ ಶಂಕೆ

Date:

spot_img

ಭಟ್ಕಳ : ಭಟ್ಕಳ ತಾಲೂಕಿನ ಜಾಲಿ ಕೋಡಿ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಕಂಟೈನರ್ ಬೋಟ್ ಒಂದು ತೇಲಿ ಬಂದು ಸಿಲುಕಿ ಹಾಕಿಕೊಂಡ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ. ಸುಮಾರು 30 ಮೀಟರ್ ಉದ್ದ ಹಾಗೂ 8 ಮೀಟರ್ ಅಗಲದ ಈ ಕಂಟೈನರ್, ಶಿಥಿಲಗೊಳ್ಳದ ಸ್ಥಿತಿಯಲ್ಲಿ ಸಮುದ್ರದಿಂದ ತೇಲಿ ಬಂದು ಜಾಲಿ ಕೋಡಿ ದಡದ ಬಂಡೆಗಲ್ಲು ಪ್ರದೇಶದಲ್ಲಿ ನಿಂತಿದೆ.

ಸ್ಥಳೀಯರ ಪ್ರಕಾರ, ಈ ಕಂಟೈನರ್ ಬೆಳಗ್ಗೆ ಸುಮಾರು 2 ಗಂಟೆಗೆ ಸಮುದ್ರದಲ್ಲಿ ತೇಲುತ್ತಾ ಬಂದು ಬಂಡೆಗಳ ಮಧ್ಯೆ ಸಿಲುಕಿ ಮುಂದೆ ಸಾಗಲಾರದ ಸ್ಥಿತಿಯಲ್ಲಿದೆ. ಕಂಟೈನರ್‌ನ ಮೇಲೆ “Cochin Shipyard” ಎಂಬ ನಾಮಫಲಕವಿದ್ದು, ಇದು ಕೇರಳದಿಂದ ಹೊರನಾಡಿಗೆ ಸಾಗಾಟವಾಗುತ್ತಿದ್ದಾಗ ಸಮುದ್ರದಲ್ಲಿ ಶಿಪ್‌ನಿಂದ ಬೇರ್ಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಕಂಟೈನರ್ ನಿಂತಿರುವ ರೀತಿಯಿಂದ ಅದು ಲಂಗರು ಹಾಕಿದಂತಿರುವುದರಿಂದ ಯಾವುದೇ ತಕ್ಷಣದ ಅಪಾಯ ಅಥವಾ ಹಾನಿಯ ಲಕ್ಷಣಗಳು ಇಲ್ಲ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಘಟನೆಯ ಕುರಿತು ನಿಖರ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.

ಈ ಅನಾಹುತವನ್ನು ನೋಡಲು ನೂರಾರು ಮಂದಿ ಸ್ಥಳಕ್ಕೆ ಬಂದಿದ್ದು, ಜಾಲಿ ಕೋಡಿ ತೀರದಲ್ಲಿ ಈ ಘಟನೆ ಕುತೂಹಲ ಹಾಗೂ ಆತಂಕ ಮೂಡಿಸಿದೆ. ಕರಾವಳಿ ಕಾವಲು ಪಡೆ ಸೇರಿದಂತೆ ಭಟ್ಕಳ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಸ್ಥಳೀಯ ಮೀನುಗಾರರ ಪ್ರಕಾರ, ಸಮುದ್ರದ ಅಂತರದಲ್ಲಿ ಮತ್ತೊಂದು ದೊಡ್ಡ ಹಡಗು ನಿಂತಿರುವುದು ಕಂಡುಬಂದಿದ್ದು, ಈ ಕಂಟೈನರ್‌ನ್ನು ಅದೇ ಹಡಗಿನಿಂದ ಸಾಗಿಸುತ್ತಿದ್ದ ವೇಳೆ ಅದು ಬೇರ್ಪಟ್ಟಿರಬಹುದೆಂಬ ಶಂಕೆ ಹೆಚ್ಚಿದೆ. ಆ ಹಡಗು ಕೂಡಾ ಸರಿಸುಮಾರು ಸಮಯದಿಂದ ಅಲ್ಲಿಯೇ ನಿಂತಿರುವುದರಿಂದ ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಅಗತ್ಯವಾಗಿದೆ.

ಸ್ಥಳೀಯ ಆಡಳಿತ, ಕರಾವಳಿ ಭದ್ರತಾ ದಳ ಮತ್ತು ಮೀನುಗಾರಿಕಾ ಇಲಾಖೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪಡಕುತ್ಯಾರು ಚಾತುರ್ಮಾಸ್ಯ ನಿರತ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್

ಶ್ರೀ ಮದ್ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಪಡಕುತ್ಯಾರು ಇಲ್ಲಿ ಚಾತುರ್ಮಾಸ್ಯ ವೃತಾಚರಣೆ ನಿರತ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳನ್ನು ಶಾಸಕ ವಿ. ಸುನಿಲ್ ಕುಮಾರ್ ಶನಿವಾರ ಭೇಟಿಯಾಗಿ ಆಶಿರ್ವಾದ ಪಡೆದರು.

ಪರಮಪೂಜ್ಯ ಲಿಂಗೈಕ್ಯ ಡಾ ಶರಣಬಸಪ್ಪ ಅಪ್ಪವರಿಗೆ ಕೇಂದ್ರ ಸರ್ಕಾರ ಈ ಬಾರಿ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಲಿ : ಶಶೀಲ್ ಜಿ ನಮೋಶಿ

ಶಶೀಲ್ ಜಿ ನಮೋಶಿ ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ನಡೆದ ಅಗಸ್ಟ್ 14 ರಂದು ಲಿಂಗೈಕ್ಯರಾದ ಪರಮ ಪೂಜ್ಯ ಶ್ರೀ ಶರಣಬಸಪ್ಪ ಅಪ್ಪ ಅವರಿಗೆ ಸಂಸ್ಥೆಯ ವತಿಯಿಂದ ನಡೆದ ಶೃದ್ಧಾಂಜಲಿಯ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಲೂರ್ಡ್ಸ್ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ಆಗಸ್ಟ್ 3ರಂದು ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಲೂರ್ಡ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಜ್ಞಾನಸುಧಾ : ಮೌಲ್ಯಸುಧಾ-39ರಲ್ಲಿ ‘ಸ್ವದೇಶ ಮಂತ್ರ’ ; ಮೌಲ್ಯ ಶಿಕ್ಷಣವೇ ಸಮಾಜದ ಎಲ್ಲಾ ಕೆಡುಕುಗಳಿಗೆ ರಾಮಬಾಣ : ನಿತ್ಯಾನಂದ ಎಸ್‌.ಬಿ.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-39ರಲ್ಲಿ 'ಸ್ವದೇಶಿ ಚಿಂತನೆ-ಯುವಕರಲ್ಲಿ ರಾಷ್ಟ್ರ ಭಕ್ತಿಯ ಬೆಳವಣಿಗೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ನಿತ್ಯಾನಂದ ಎಸ್‌.ಬಿ. ಮಾತನಾಡಿದರು.