spot_img

ಭಟ್ಕಳ: ಜಾಲಿ ಕೋಡಿ ತೀರದಲ್ಲಿ ಬೃಹತ್ ಕಂಟೈನರ್ ಬೋಟ್ ಪತ್ತೆ – ಶಿಪ್‌ನಿಂದ ಬೇರ್ಪಟ್ಟ ಶಂಕೆ

Date:

ಭಟ್ಕಳ : ಭಟ್ಕಳ ತಾಲೂಕಿನ ಜಾಲಿ ಕೋಡಿ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಕಂಟೈನರ್ ಬೋಟ್ ಒಂದು ತೇಲಿ ಬಂದು ಸಿಲುಕಿ ಹಾಕಿಕೊಂಡ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ. ಸುಮಾರು 30 ಮೀಟರ್ ಉದ್ದ ಹಾಗೂ 8 ಮೀಟರ್ ಅಗಲದ ಈ ಕಂಟೈನರ್, ಶಿಥಿಲಗೊಳ್ಳದ ಸ್ಥಿತಿಯಲ್ಲಿ ಸಮುದ್ರದಿಂದ ತೇಲಿ ಬಂದು ಜಾಲಿ ಕೋಡಿ ದಡದ ಬಂಡೆಗಲ್ಲು ಪ್ರದೇಶದಲ್ಲಿ ನಿಂತಿದೆ.

ಸ್ಥಳೀಯರ ಪ್ರಕಾರ, ಈ ಕಂಟೈನರ್ ಬೆಳಗ್ಗೆ ಸುಮಾರು 2 ಗಂಟೆಗೆ ಸಮುದ್ರದಲ್ಲಿ ತೇಲುತ್ತಾ ಬಂದು ಬಂಡೆಗಳ ಮಧ್ಯೆ ಸಿಲುಕಿ ಮುಂದೆ ಸಾಗಲಾರದ ಸ್ಥಿತಿಯಲ್ಲಿದೆ. ಕಂಟೈನರ್‌ನ ಮೇಲೆ “Cochin Shipyard” ಎಂಬ ನಾಮಫಲಕವಿದ್ದು, ಇದು ಕೇರಳದಿಂದ ಹೊರನಾಡಿಗೆ ಸಾಗಾಟವಾಗುತ್ತಿದ್ದಾಗ ಸಮುದ್ರದಲ್ಲಿ ಶಿಪ್‌ನಿಂದ ಬೇರ್ಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಕಂಟೈನರ್ ನಿಂತಿರುವ ರೀತಿಯಿಂದ ಅದು ಲಂಗರು ಹಾಕಿದಂತಿರುವುದರಿಂದ ಯಾವುದೇ ತಕ್ಷಣದ ಅಪಾಯ ಅಥವಾ ಹಾನಿಯ ಲಕ್ಷಣಗಳು ಇಲ್ಲ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಘಟನೆಯ ಕುರಿತು ನಿಖರ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.

ಈ ಅನಾಹುತವನ್ನು ನೋಡಲು ನೂರಾರು ಮಂದಿ ಸ್ಥಳಕ್ಕೆ ಬಂದಿದ್ದು, ಜಾಲಿ ಕೋಡಿ ತೀರದಲ್ಲಿ ಈ ಘಟನೆ ಕುತೂಹಲ ಹಾಗೂ ಆತಂಕ ಮೂಡಿಸಿದೆ. ಕರಾವಳಿ ಕಾವಲು ಪಡೆ ಸೇರಿದಂತೆ ಭಟ್ಕಳ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಸ್ಥಳೀಯ ಮೀನುಗಾರರ ಪ್ರಕಾರ, ಸಮುದ್ರದ ಅಂತರದಲ್ಲಿ ಮತ್ತೊಂದು ದೊಡ್ಡ ಹಡಗು ನಿಂತಿರುವುದು ಕಂಡುಬಂದಿದ್ದು, ಈ ಕಂಟೈನರ್‌ನ್ನು ಅದೇ ಹಡಗಿನಿಂದ ಸಾಗಿಸುತ್ತಿದ್ದ ವೇಳೆ ಅದು ಬೇರ್ಪಟ್ಟಿರಬಹುದೆಂಬ ಶಂಕೆ ಹೆಚ್ಚಿದೆ. ಆ ಹಡಗು ಕೂಡಾ ಸರಿಸುಮಾರು ಸಮಯದಿಂದ ಅಲ್ಲಿಯೇ ನಿಂತಿರುವುದರಿಂದ ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಅಗತ್ಯವಾಗಿದೆ.

ಸ್ಥಳೀಯ ಆಡಳಿತ, ಕರಾವಳಿ ಭದ್ರತಾ ದಳ ಮತ್ತು ಮೀನುಗಾರಿಕಾ ಇಲಾಖೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮೋದಿ ವಿರುದ್ಧ ಮಾನಹಾನಿಕರ ಪೋಸ್ಟ್: ಹಾದಿಮನಿ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಫೇಸ್ಬುಕ್ನಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ್ದಕ್ಕೆ ಸಂಬಂಧಿಸಿ ಟಿ.ಎಫ್. ಹಾದಿಮನಿ ಎಂಬ ವ್ಯಕ್ತಿಯ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ

ಚಿನ್ನದ ವಂಚನೆ ಪ್ರಕರಣ: ಇಡಿ ವಿಚಾರಣೆಗೆ ಡಿಕೆ ಸುರೇಶ್‌ನ ತಾತ್ಕಾಲಿಕ ನಿರಾಕರಣೆ

ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ತನಗೆ ನೀಡಿದ ಸಮನ್ಸ್‌ಗೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದ್ದಾರೆ.

50 ಸಾವಿರ ರೂ. ನೆರವು ನೀಡದ ಗ್ರಾಮಪಂಚಾಯಿತಿ : ಕಚೇರಿಯಲ್ಲೇ ಎಮ್ಮೆ ಕಟ್ಟಿ ಪ್ರತಿಭಟನೆ ಮಾಡಿದ ರೈತ

ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮಪಂಚಾಯಿತಿ ಕಚೇರಿಯಲ್ಲಿ ನಡೆದ ಒಂದು ವಿಚಿತ್ರ ಘಟನೆ ಚರ್ಚೆಯಾಗುತ್ತಿದೆ.

28ಕ್ಕೆ ವಿಧಾನಸೌಧದಲ್ಲಿ ಪ್ರಮಾಣವಚನ ನಾವೇ ಸ್ವೀಕರಿಸುತ್ತೇವೆ – ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ನಾಯಕ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು "28ಕ್ಕೆ ಏನೇ ಆದರೂ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇವೆ" ಎಂದು ಹೇಳಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದಾರೆ.