spot_img

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇವಲ ಒಂದು ಸಂಸ್ಥೆಯಲ್ಲ, ದೇಶ ಕಾಯುವ ಒಂದು ಶಕ್ತಿ – ಕೊಂಡಜ್ಜಿಬ ಷಣ್ಮುಖಪ್ಪ

Date:

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ತಾಲೂಕಿನ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್, ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದ್ದ ರಾಜ್ಯ ಮಟ್ಟದ ಆಯುಕ್ತರುಗಳ ತರಬೇತಿ ಶಿಬಿರ, ಅಗ್ರಗ್ರಾಮಿತ್ವ,ಅಂದಾಜು ಮತ್ತು ತರಬೇತಿ ಸಲಹೆಗಾರರ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದೊಡ್ಡಬಳ್ಳಾಪುರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಿಂದ ಶ್ರೀಮತಿ ರಮಿತಾ ಶೈಲೇಂದ್ರ ಹಾಗೂ ಸನ್ಮಥ್ ಮುಂದುವರೆದ ಆಯುಕ್ತರ ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.

ಈ ಸಮಾರೋಪ ಸಮಾರಂಭದಲ್ಲಿ , ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ವೈಖರಿಯನ್ನು ಮತ್ತಷ್ಟು ಉತ್ತಮಗೊಳಿಸಲು ಈ ತರಬೇತಿಯು ಸಹಕಾರಿಯಾಗಲಿದೆ, ತರಬೇತಿಯಲ್ಲಿ ಕಲಿತ ವಿಚಾರಗಳನ್ನು ತಮಗೆ ಕಲ್ಪಿಸಿದ ಕ್ಷೇತ್ರಗಳಲ್ಲಿ ಬಳಕೆ ಮಾಡುವ ಮೂಲಕ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ಕೊಂಡಜ್ಜಿಬ ಷಣ್ಮುಖಪ್ಪ ಭಾಗವಹಿಸಿ ಮಾತನಾಡಿದರು.

1951ರಲ್ಲಿ ನನ್ನ ತಂದೆ ಸ್ಕೌಟ್ ಆಗಿ ಸೇವೆ ಸಲ್ಲಿಸಿದ್ದರು ಹಾಗಾಗಿ ನಾನು ಹುಟ್ಟುತಲೇ ಸ್ಕೌಟ್ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದರು. ನಾನು ತರಬೇತಿ ಪಡೆದು 50 ವರ್ಷಗಳಾಗಿವೆ ನಿರಂತರ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಇಂದಿನ ಸ್ಕೌಟ್ಸ್ ಮತ್ತು ಗೈಡ್ಸ್ ಕೇವಲ ಒಬ್ಬರ ಶ್ರಮವಲ್ಲ ಇದು ಶಿಬಿರದಲ್ಲಿ ತರಬೇತಿ ಪಡೆದು ಶ್ರಮಿಸಿದ ಪ್ರತಿಯೊಬ್ಬರ ಸೇವೆಯ ಫಲ ಇದನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕರೆದೊಯ್ಯಲು ನಿಮ್ಮಿಂದ ಮಾತ್ರಾ ಸಾಧ್ಯ ಹಾಗಾಗಿ ನಿರಂತರ ಪ್ರಯತ್ನ, ಪ್ರಾಮಾಣಿಕ ಶ್ರಮ ನಿಮ್ಮದಾಗಲಿ ಎಂದರು.ಹಾಗೆಯೇತರಬೇತುದಾರ ಮೊದಲು ತರಬೇತಿ ಸ್ಥಳಕ್ಕೆ ಭೇಟಿಕೋಟ್ಟು ತರಬೇತಿ ಪಡೆಯಲು ಬರುವ ಶಿಬಿರಾರ್ಥಿಗಳ ಸೌಲಭ್ಯಗಳನ್ನು ಪರೀಕ್ಷಿಸುವುದು ಅಗತ್ಯವಾಗಿದೆ. ತರಬೇತುದಾರ ವಿಷಯಗಳನ್ನು ಶಿಬಿರಾರ್ಥಿಗಳ ಮನಮುಟ್ಟುವಂತೆ ತಿಳಿಸುವುದು ಮುಖ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ರಾಜ್ಯ ತರಬೇತಿ ಆಯುಕ್ತರಾದ ನಾಗೇಶ್ ಆರ್ ಶಿವಪೂರ್ , ರಾಜ್ಯ ಆಯುಕ್ತರಾದ ಸಿ.ಎಸ್ ರೆಡ್ಡಿ, ಜಿಮ್ಮಿ ಸಿಕ್ವೇರಾ ಎಲ್.ಟಿ (ಸ್ಕೌಟ್ ), ಹೆಚ್.ಬಿ ಭರತ್ ಶೆಟ್ಟಿ ಎಲ್.ಟಿ (ಸ್ಕೌಟ್ ), ರಾಜ್ಯ ಆಯುಕ್ತರಾದ ಬಿ.ವಿ ರಾಮಲತಾ (ಗೈಡ್), ಗೀತಾ ನಟರಾಜ್‌,ರಾಜ್ಯ ಜಂಟಿ ಕಾರ್ಯದರ್ಶಿ ಕೃಪಾ ವಿಜಯ್,ಜಿಲ್ಲಾ ಸಂಘಟಕ ವಿಶ್ವನಾಥ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆಗೆ ಕೇಂದ್ರದಿಂದ ಪರವಾನಿಗೆ! ಸೆಟಲೈಟ್ ಇಂಟರ್ನೆಟ್ ಸೇವೆಗೆ ಮತ್ತೊಂದು ಹೆಜ್ಜೆ

ಅಮೆರಿಕದ ಆಂತರಿಕ್ಷ ತಂತ್ರಜ್ಞಾನ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಸ್ಪೇಸ್ ಎಕ್ಸ್‌ಗೆ ಸೇರಿದ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಸಂಸ್ಥೆಗೆ ಭಾರತದಲ್ಲಿ ಸೆಟಲೈಟ್ ಕಮ್ಯೂನಿಕೇಶನ್ ಸೇವೆ ನೀಡಲು ದೂರಸಂಪರ್ಕ ಇಲಾಖೆಯಿಂದ (DoT) ಪರವಾನಿಗೆ ನೀಡಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಒಂದು ಅನಾನಸಿನಲ್ಲಿ 13 ಗಿಡಗಳು! ಕಾರ್ಕಳದ ಮೆಜೆಸ್ಟಿಕ್ ಕ್ರಶರ್ ಕೈದೋಟದಲ್ಲಿ ಪ್ರಕೃತಿಯ ವಿಸ್ಮಯ

ಕಾರ್ಕಳದ ಗುಂಡ್ಯಡ್ಕದಲ್ಲಿರುವ ಮೆಜೆಸ್ಟಿಕ್ ಕ್ರಶರ್ ನ ಕೈದೋಟದಲ್ಲಿ ಕಂಡುಬಂದಿರುವ ಅನಾನಸು ಹಣ್ಣು ಇಲ್ಲಿನ ಎಲ್ಲರನ್ನೂ ಆಚ್ಚರಿಗೊಳಿಸಿದೆ.

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಯ ಜಾಮೀನು ರದ್ದು ಪಡಿಸಿದ ಸುಪ್ರೀಂ ಕೋರ್ಟ್!

ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಯ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಭಾರತೀಯ ಸೇನೆಗೆ ಆಯ್ಕೆಯಾದ ಬೈಲೂರಿನ ಸಾಗರ್ ಆಚಾರ್ಯರವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೆ-ಬೈಲೂರು

ಭಾರತೀಯ ಸೇನೆಗೆ ಆಯ್ಕೆಯಾದ ಬೈಲೂರಿನ ಸಾಗರ್ ಆಚಾರ್ಯರವರಿಗೆ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೆ-ಬೈಲೂರುರವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ