
ಅಹಮದಾಬಾದ್ : ಗುರುವಾರ ಸಂಭವಿಸಿದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. 242 ಪ್ರಯಾಣಿಕರಿದ್ದ ಬೋಯಿಂಗ್ ವಿಮಾನವು ಟೇಕ್ಆಫ್ ಆದ ತಕ್ಷಣವೇ ಪತನಗೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಈ ಅಪಘಾತದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 265 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಈ ದುರಂತದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದಾಗ ರಕ್ಷಣಾ ಸಿಬ್ಬಂದಿಗೆ ಒಂದು ಅಚ್ಚರಿಯ ಅನುಭವವಾಗಿದೆ. ಸಂಪೂರ್ಣವಾಗಿ ಸುಟ್ಟು ನಾಶವಾದ ಅವಶೇಷಗಳ ನಡುವೆ ಭಗವದ್ಗೀತೆಯೊಂದು ಸಂಪೂರ್ಣ ಸುರಕ್ಷಿತವಾಗಿ ಪತ್ತೆಯಾಗಿದೆ. ಇತರ ವಸ್ತುಗಳು ಭಸ್ಮವಾದರೂ, ಈ ಧಾರ್ಮಿಕ ಗ್ರಂಥ ಮಾತ್ರ ಏನು ಆಗದೇ ಉಳಿದಿರುವುದು ಆಶ್ಚರ್ಯ ಹುಟ್ಟಿಸಿದೆ.
ಈ ಭಗವದ್ಗೀತೆ ಸುರಕ್ಷಿತವಾಗಿ ಉಳಿದಿರುವುದರ ಸತ್ಯಾಸತ್ಯತೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.