spot_img

ಬೆಳ್ತಂಗಡಿಯಲ್ಲಿ ವೃದ್ಧ ದಂಪತಿಯ ಕೊಲೆ ಪ್ರಕರಣ: ರಾಜು ಕಲವಡ್ಕರ್‌ಗೆ ಜೀವಾವಧಿ ಶಿಕ್ಷೆ

Date:

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದಲ್ಲಿ 2016ರ ಜನವರಿಯಲ್ಲಿ ನಡೆದ ವೃದ್ಧ ದಂಪತಿಯ ಕೊಲೆ ಮತ್ತು ಸುಲಿಗೆ ಪ್ರಕರಣದಲ್ಲಿ ಆರೋಪಿಯಾದ ರಾಜು ಕಲವಡ್ಕರ್ (ರಾಜೇಶ್)ನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
2016ರ ನವೆಂಬರ್ 10ರಂದು ವೃದ್ಧ ದಂಪತಿಯ ಹತ್ಯೆ ನಡೆದಿತ್ತು. ಈ ಕೊಲೆ ಪ್ರಕರಣದಲ್ಲಿ, 85 ವರ್ಷದ ವರ್ಕಿ ಮತ್ತು 80 ವರ್ಷದ ಎಲಿಕುಟ್ಟಿ ಎಂಬ ದಂಪತಿಗಳನ್ನು ರ ಕೊಲೆ ಮಾಡಿ ಬಳಿಕ, ಅವರ 200 ಗ್ರಾಂ ಚಿನ್ನ ಮತ್ತು 4.5 ಲಕ್ಷ ನಗದು ಹಣವನ್ನು ರಾಜು ದರೋಡೆ ಮಾಡಿದ್ದನು.
ನ್ಯಾಯಾಲಯದಲ್ಲಿ 2018ರ ನವೆಂಬರ್‌ನಲ್ಲಿ ಆರಂಭವಾದ ವಿಚಾರಣೆಯಲ್ಲಿ 38 ಸಾಕ್ಷಿಗಳು ರಾಜು ವಿರುದ್ಧ ಸಾಕ್ಷ್ಯ ನೀಡಿದರು. ನ್ಯಾಯಾಲಯವು ರಾಜುವನ್ನು ಐಪಿಸಿಯ ಸೆಕ್ಷನ್ 302 ಅಡಿಯಲ್ಲಿ ಕೊಲೆ ಮತ್ತು ಸೆಕ್ಷನ್ 392 ಅಡಿಯಲ್ಲಿ ದರೋಡೆಗೆ ಅಪರಾಧಿಯಾಗಿದ್ದ ಎಂದು ತೀರ್ಮಾನಿಸಿದೆ. ಪ್ರತಿಯೊಂದು ಆರೋಪಕ್ಕೆ ₹10,000 ದಂಡ ವಿಧಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಯರ್ಲಪಾಡಿಗೆ KSRTC ಬಸ್ ಸಂಚಾರ ಶೀಘ್ರದಲ್ಲೇ ಆರಂಭ

ಯರ್ಲಪಾಡಿ ಗ್ರಾಮಸ್ಥರ ಬಹುದಿನದ ಬೇಡಿಕೆ ಸಾಕಾರಗೊಂಡಿದ್ದು, ಅತೀ ಶೀಘ್ರದಲ್ಲೇ ಯರ್ಲಪಾಡಿ ಗ್ರಾಮಕ್ಕೆ ಸರಕಾರಿ ಬಸ್ ಸಂಚಾರ ಸೇವೆಯು ಲಭ್ಯವಾಗಲಿದೆ.

ಮೈಕ್ರೋಸಾಫ್ಟ್‌ನಿಂದ 6,000 ಉದ್ಯೋಗಿಗಳು ವಜಾ !

ಟೆಕ್ ದಿಗ್ಗಜ ಮೈಕ್ರೋಸಾಫ್ಟ್ ವಿಶ್ವದಾದ್ಯಂತ ತನ್ನ ಸಿಬ್ಬಂದಿಯ ಶೇಕಡಾ 3 ರಷ್ಟು, ಅಂದರೆ ಸುಮಾರು 6,000 ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಮಾಹಿತಿ ಹೊರಬಿದ್ದಿದೆ.

ಮುಂಗಾರಿನ ಮುನ್ನುಡಿ: ರಾಜ್ಯದ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆಯ Yellow Alert

ರಾಜ್ಯದ ವಾತಾವರಣದಲ್ಲಿ ಮುಂಗಾರು ಮಳೆಯ ಮುನ್ನುಡಿ ಕಾಣಿಸಿಕೊಳ್ಳುತ್ತಿರುವ ಮಧ್ಯೆ, ಹವಾಮಾನ ಇಲಾಖೆ ಮುಂಬರುವ ದಿನಗಳಲ್ಲಿ ತೀವ್ರ ಮಳೆಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ 13ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ಘೋಷಣೆ ಮಾಡಿದೆ.

2025ರಿಂದ ಇಂಜಿನಿಯರಿಂಗ್ ಕೋರ್ಸ್ ಇನ್ನಷ್ಟು ದುಬಾರಿ: ಶೇ 7.5ರಷ್ಟು ಶುಲ್ಕ ಏರಿಕೆ

ರಾಜ್ಯದ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಶೇ 7.5ರಷ್ಟು ಶುಲ್ಕ ಹೆಚ್ಚಿಸಲು ಸರ್ಕಾರದಿಂದ ಅನುಮತಿ ಪಡೆದಿದ್ದು, 2025-26ನೇ ಶೈಕ್ಷಣಿಕ ವರ್ಷದಿಂದಲೇ ಈ ಹೊಸ ಶುಲ್ಕ ಜಾರಿಗೆ ಬರಲಿದೆ.