spot_img

ಜೇನು ನೊಣಗಳಿಗೂ ಬಿಸಿ ಕಾಟ! ತಾಪಮಾನ ಏರಿಕೆಯಿಂದ ಅರ್ಧದಷ್ಟು ಇಳುವರಿ ನಷ್ಟದ ಭೀತಿ

Date:

ಸುಳ್ಯ: ಈ ಬಾರಿಯ ಬಿಸಿಲು ಕೇವಲ ಮನುಷ್ಯರಿಗೂ ಅಲ್ಲ, ಜೇನು ನೊಣಗಳಿಗೂ ಸಂಕಷ್ಟ ತಂದಿದೆ. ತಾಪಮಾನ ಹೆಚ್ಚಳದ ಪರಿಣಾಮದ ತೀವ್ರತೆ ಈಗ ಕರಾವಳಿ ಹಾಗೂ ಮಲೆನಾಡು ಭಾಗಗಳ ಜೇನು ಕೃಷಿಗೂ ತಟ್ಟಿದೆ. ಜೇನು ನೊಣಗಳು ಹಾರಲು ಅಸಾಧ್ಯವಾಗುತ್ತಿರುವುದರಿಂದ, ಇಳುವರಿ ಶೇ. 50ರಷ್ಟು ಇಳಿಯುವ ಭೀತಿ ಎದುರಾಗಿದೆ.

ಜೇನು ನೊಣಗಳಿಗೆ ಸಮತೋಲಿತ ಹವಾಮಾನ ಅಗತ್ಯ. ಆದರೆ ಇತ್ತೀಚಿನ ಉಷ್ಣತೆಗೆ ಜೇನು ನೊಣಗಳು ಸಾಯುತ್ತಿವೆ, ಪೆಟ್ಟಿಗೆಯಲ್ಲೂ ಇರಲಾಗುತ್ತಿಲ್ಲ. ಮಕರಂದ ಕೂಡ ಬೇಗ ಕರಗಿ ಹೋಗುತ್ತಿರುವುದರಿಂದ ನೊಣಗಳಿಗೆ ಸಂಗ್ರಹಿಸಲು ಏನೂ ಸಿಗುತ್ತಿಲ್ಲ.

2023-24ರ ತೋಟಗಾರಿಕೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,683 ಜೇನು ಕೃಷಿಕರು 22,289 ಪೆಟ್ಟಿಗೆಗಳಲ್ಲಿ ಜೇನು ಉತ್ಪಾದಿಸುತ್ತಿದ್ದರು. ಆ ವರ್ಷದಲ್ಲಿ 1,22,523 ಕೆ.ಜಿ. ಜೇನು ಉತ್ಪತ್ತಿಯಾದರೆ, ಈ ವರ್ಷ ಅರ್ಧದಷ್ಟು ಸಹ ಉಂಟಾಗಿಲ್ಲ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ದ.ಕ. ಮತ್ತು ಉಡುಪಿಯ ಜೇನು ಸೊಸೈಟಿಗಳಲ್ಲಿ ಒಟ್ಟು 3,200 ಸದಸ್ಯರಿದ್ದು, ಕೇವಲ ಶೇ.10-20 ಮಂದಿ ಮಾತ್ರ ಸೊಸೈಟಿಗೆ ಮಾರಾಟ ಮಾಡುತ್ತಿದ್ದಾರೆ. ಇಳುವರಿ ಕುಸಿತ ಹಾಗೂ ಕಡಿಮೆ ಖರೀದಿ ದರದಿಂದ ಜೇನು ಕೃಷಿಕರು ಗಂಭೀರ ಸಂಕಷ್ಟದಲ್ಲಿದ್ದಾರೆ.

ಕೃಷಿಕರು ಸರ್ಕಾರದಿಂದ ಜೀರೋ ಪರ್ಸೆಂಟ್ ಬೆಳೆಸಾಲ, ಗುತ್ತಿಗೆ ಭದ್ರತೆ, ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಇಂಗ್ಲಿಷ್ ದಿನ

ಪ್ರಪಂಚದ ಬಹುತೇಕ ಭಾಗವನ್ನು ಈ ಭಾಷೆ ಬಸವಾಗಿಸಿಕೊಂಡಿದೆ. ಅಷ್ಟರಮಟ್ಟಿಗೆ ಪ್ರಸಿದ್ಧವಾಗಿದೆ ಹಾಗೂ ಸಂವಹನನಕ್ಕೆ ಮಾಧ್ಯಮವಾಗಿದೆ.

ಹಿರಿಯಡ್ಕದ ಡಾ. ಶೋಭಿತಾ ಅವರಿಗೆ ‘ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ!

ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಗಾಗಿ ಹಿರಿಯಡ್ಕದ ಸೌಮ್ಯ ಕ್ಲಿನಿಕ್ ನ ಡಾ. ಶೋಭಿತಾ ಅವರು ಈ ವರ್ಷ 'ಕರ್ನಾಟಕ ಮಹಿಳಾ ರತ್ನ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ : ಕಿಶೋರ್ ಕುಮಾರ್ ಕುಂದಾಪುರ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಆಡಳಿತಾವಧಿಯ ಹಲವಾರು ವಿದ್ಯಮಾನಗಳು ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಭೇಟಿಯಾದ ರಾಕಿ ರೈ: ಮುತ್ತಪ್ಪ ರೈ ಪುತ್ರನ ರಾಜಕೀಯ ನಂಟು ?

ಅಂಡರ್‌ವಲ್ಡ್ ಹಿನ್ನೆಲೆ ಹೊಂದಿದ್ದ ಮಾಜಿ ಡಾನ್ ಮುತ್ತಪ್ಪ ರೈ ಅವರ ಹಿರಿಯ ಪುತ್ರ ರಾಕಿ ರೈ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಖಾಸಗಿ ಭೇಟಿಗೆ ಆಗಮಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.