spot_img

ಜೇನು ನೊಣಗಳಿಗೂ ಬಿಸಿ ಕಾಟ! ತಾಪಮಾನ ಏರಿಕೆಯಿಂದ ಅರ್ಧದಷ್ಟು ಇಳುವರಿ ನಷ್ಟದ ಭೀತಿ

Date:

spot_img

ಸುಳ್ಯ: ಈ ಬಾರಿಯ ಬಿಸಿಲು ಕೇವಲ ಮನುಷ್ಯರಿಗೂ ಅಲ್ಲ, ಜೇನು ನೊಣಗಳಿಗೂ ಸಂಕಷ್ಟ ತಂದಿದೆ. ತಾಪಮಾನ ಹೆಚ್ಚಳದ ಪರಿಣಾಮದ ತೀವ್ರತೆ ಈಗ ಕರಾವಳಿ ಹಾಗೂ ಮಲೆನಾಡು ಭಾಗಗಳ ಜೇನು ಕೃಷಿಗೂ ತಟ್ಟಿದೆ. ಜೇನು ನೊಣಗಳು ಹಾರಲು ಅಸಾಧ್ಯವಾಗುತ್ತಿರುವುದರಿಂದ, ಇಳುವರಿ ಶೇ. 50ರಷ್ಟು ಇಳಿಯುವ ಭೀತಿ ಎದುರಾಗಿದೆ.

ಜೇನು ನೊಣಗಳಿಗೆ ಸಮತೋಲಿತ ಹವಾಮಾನ ಅಗತ್ಯ. ಆದರೆ ಇತ್ತೀಚಿನ ಉಷ್ಣತೆಗೆ ಜೇನು ನೊಣಗಳು ಸಾಯುತ್ತಿವೆ, ಪೆಟ್ಟಿಗೆಯಲ್ಲೂ ಇರಲಾಗುತ್ತಿಲ್ಲ. ಮಕರಂದ ಕೂಡ ಬೇಗ ಕರಗಿ ಹೋಗುತ್ತಿರುವುದರಿಂದ ನೊಣಗಳಿಗೆ ಸಂಗ್ರಹಿಸಲು ಏನೂ ಸಿಗುತ್ತಿಲ್ಲ.

2023-24ರ ತೋಟಗಾರಿಕೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,683 ಜೇನು ಕೃಷಿಕರು 22,289 ಪೆಟ್ಟಿಗೆಗಳಲ್ಲಿ ಜೇನು ಉತ್ಪಾದಿಸುತ್ತಿದ್ದರು. ಆ ವರ್ಷದಲ್ಲಿ 1,22,523 ಕೆ.ಜಿ. ಜೇನು ಉತ್ಪತ್ತಿಯಾದರೆ, ಈ ವರ್ಷ ಅರ್ಧದಷ್ಟು ಸಹ ಉಂಟಾಗಿಲ್ಲ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ದ.ಕ. ಮತ್ತು ಉಡುಪಿಯ ಜೇನು ಸೊಸೈಟಿಗಳಲ್ಲಿ ಒಟ್ಟು 3,200 ಸದಸ್ಯರಿದ್ದು, ಕೇವಲ ಶೇ.10-20 ಮಂದಿ ಮಾತ್ರ ಸೊಸೈಟಿಗೆ ಮಾರಾಟ ಮಾಡುತ್ತಿದ್ದಾರೆ. ಇಳುವರಿ ಕುಸಿತ ಹಾಗೂ ಕಡಿಮೆ ಖರೀದಿ ದರದಿಂದ ಜೇನು ಕೃಷಿಕರು ಗಂಭೀರ ಸಂಕಷ್ಟದಲ್ಲಿದ್ದಾರೆ.

ಕೃಷಿಕರು ಸರ್ಕಾರದಿಂದ ಜೀರೋ ಪರ್ಸೆಂಟ್ ಬೆಳೆಸಾಲ, ಗುತ್ತಿಗೆ ಭದ್ರತೆ, ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದಲ್ಲಿ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಮಾಹಿತಿ ಶಿಬಿರ

ಈ ಮಾಹಿತಿ ಶಿಬಿರದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಭಾಗವಹಿಸಲಿದ್ದು, ಉದ್ಯೋಗ ಮೇಳದ ಸಮಗ್ರ ವಿವರಗಳನ್ನು ನೀಡಲಿದ್ದಾರೆ.

ಮಂಗಳೂರು: ಔಷಧಿಯೆಂದು ಇಲಿಪಾಷಾಣ ಸೇವಿಸಿದ್ದ ಹೆಡ್ ಕಾನ್ಸ್‌ಟೇಬಲ್ ದುರ್ಮರಣ!

ಔಷಧಿಯೆಂದು ತಪ್ಪಾಗಿ ಭಾವಿಸಿ ಇಲಿಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಧರ್ಮಸ್ಥಳ : ಮೊದಲು ಗುರುತಿಸಿದ ಸ್ಥಳದಲ್ಲಿ ಮಿನಿ ಹಿಟಾಚಿ ಬಳಕೆಯಾದರೂ ಸಿಗದ ಕಳೇಬರ

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ,ಮೊದಲು ಗುರುತಿಸಿದ ಸ್ಥಳದಲ್ಲಿ ಮಿನಿ ಹಿಟಾಚಿ ಯಂತ್ರವನ್ನು ಬಳಸಿದರೂ ಇದುವರೆಗೆ ಕಳೇಬರ ಪತ್ತೆಯಾಗಿಲ್ಲ.

ಮರವಂತೆಯಲ್ಲಿ ಮಳೆಗಾಲದಲ್ಲೂ ಅಪಾಯಕಾರಿ ಬೋಟಿಂಗ್: ಪ್ರವಾಸಿಗರ ಪ್ರಾಣದೊಂದಿಗೆ ಚೆಲ್ಲಾಟ!

ಬೈಂದೂರು ತಾಲೂಕಿನ ಮರವಂತೆ ಗ್ರಾಮದಲ್ಲಿ ಮಳೆಗಾಲದ ನಡುವೆಯೂ ಸೌಪರ್ಣಿಕಾ ನದಿಯಲ್ಲಿ ಅಪಾಯಕಾರಿ ಬೋಟಿಂಗ್ ನಡೆಸಲಾಗುತ್ತಿದ್ದು, ಇದು ಪ್ರವಾಸಿಗರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.