
ಕಾರ್ಕಳ: ಬಂಗ್ಲೆಗುಡ್ಡೆ ಹಿಮುಂಜ್ಜೆ 1ನೇ ವಾರ್ಡ್ನ ನಿವಾಸಿಗಳು ಕಳೆದ ಹತ್ತು ಹದಿನೈದು ವರ್ಷಗಳಿಂದ ಮಳೆಗಾಲದ ಸಮಯಲ್ಲಿ ಒಂದೇ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದು, ಈವರೆಗೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ಮಳೆಯ ಸಮಯದಲ್ಲಿ ರಸ್ತೆ ನೀರಿನಲ್ಲಿ ಮುಳುಗಿ ಹೋಗುವುದು, ಹದಗೆಟ್ಟ ಚರಂಡಿಗಳು , ಮನೆಯೊಳಗೆ ನೀರು ನುಗ್ಗುವುದು ಸೇರಿದಂತೆ ಅನೇಕ ತೊಂದರೆಗಳು ಎದುರಾಗುತ್ತವೆ. ಸ್ಥಳೀಯರು ಹಲವಾರು ಬಾರಿ ಪುರಸಭೆಗೆ ಈ ಕುರಿತು ದೂರು ನೀಡಿದ್ದರೂ ಯಾವುದೇ ನಿರ್ಧಾರಾತ್ಮಕ ಕ್ರಮಗಳಿಲ್ಲದೆ ವಿಷಯ ಮುಂದೂಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
“ಈ ಪರಿಸ್ಥಿತಿಯ ಬಗ್ಗೆ ನಾವು ನಿರಂತರವಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಪ್ರತಿ ಸಲವೂ ವಾಗ್ದಾನ ಸಿಕ್ಕಿದ್ದು ಮಾತ್ರವಲ್ಲದೆ ಯಾವುದೇ ಕ್ರಿಯಾತ್ಮಕ ಕ್ರಮ ಈ ವರೆಗೆ ನಡೆದಿಲ್ಲ. ಇದೀಗ ಇನ್ನು ಮುಂದೆ ಸಹಿಸೋ ಸ್ಥಿತಿಯಲ್ಲಿಲ್ಲ. ಪುರಸಭೆ ಕ್ರಮ ಕೈಗೊಳ್ಳದಿದ್ದರೆ ಹೋರಾಟಕ್ಕೆ ಇಳಿಯಲಿದ್ದೇವೆ,” ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.