spot_img

ಪತ್ನಿಯನ್ನು ರಾಜಕಾರಣಿಗೆ ಮಾರಾಟ ಮಾಡಲು ಯತ್ನ: ಪತ್ನಿಯಿಂದ ಪತಿ,ಅತ್ತೆ, ಮಾವನ ಮೇಲೆ ದೂರು ದಾಖಲು

Date:

ಬೆಂಗಳೂರು : ಪತಿ ಹಾಗೂ ಆತನ ಕುಟುಂಬದವರು ಮಾನಸಿಕ, ದೈಹಿಕ ಹಿಂಸೆ ನೀಡಿದರಲ್ಲದೆ, ಪ್ರಾಣ ಬೆದರಿಕೆ, ಗರ್ಭಪಾತದ ಜबरದಸ್ತಿ, ಮತ್ತು ಹಣಕ್ಕಾಗಿ ರಾಜಕಾರಣಿಗೆ ಮಾರಾಟ ಮಾಡುವ ಪ್ರಯತ್ನ ಮಾಡಿದರೆಂಬ ಭಯಾನಕ ದೂರನ್ನು 21 ವರ್ಷದ ಯುವತಿಯೊಬ್ಬರು ಬನಶಂಕರಿ ಪೊಲೀಸ್ ಠಾಣೆಗೆ ಸಲ್ಲಿಸಿದ್ದಾರೆ. ಈ ದೂರು ಸ್ವೀಕರಿಸಿರುವ ಪೊಲೀಸರು ಪತಿ ಯೂನಸ್ ಪಾಷಾ, ಮಾವ ಚಾಂದ್ ಪಾಷಾ ಮತ್ತು ಅತ್ತೆ ಶಹೀನ್ ತಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ವಿವಾಹದ ನಂತರ ಆರಂಭವಾದ ಕಿರುಕುಳ :
ಸಂತ್ರಸ್ತೆಯು 2021ರ ಜೂನ್ 25ರಂದು ಯೂನಸ್ ಪಾಷಾವನ್ನು ವಿವಾಹವಾಗಿದ್ದರು. ಮದುವೆಯ ನಂತರ ಕೆಲವೇ ತಿಂಗಳಲ್ಲಿ ಪತಿ ಮತ್ತು ಆತನ ಕುಟುಂಬದವರು ಹಿಂಸೆ ನೀಡಲು ಪ್ರಾರಂಭಿಸಿದ್ದಾರೆ. ಗರ್ಭವತಿಯಾದ ಸಂದರ್ಭದಲ್ಲಿ ಪತಿ ಹೊಟ್ಟೆಗೆ ಒದ್ದು ಔಪಚಾರಿಕವಾಗಿ ಗರ್ಭಪಾತ ಮಾಡಲು ಒತ್ತಾಯಿಸಿದ್ದು, 2021ರ ಡಿಸೆಂಬರ್ 17ರಂದು ಗರ್ಭಪಾತ ಮಾಡಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಣಕ್ಕಾಗಿ ರಾಜಕೀಯ ವ್ಯಕ್ತಿಗೆ ಮಾರಾಟ ಯತ್ನ:
ಹಣಕ್ಕಾಗಿ ತನ್ನನ್ನು ರಾಜಕಾರಣಿಗೆ ಮಾರಾಟ ಮಾಡಲು ಪತಿಯ ಯೋಜನೆ ಬಗ್ಗೆ ತಾನು ಅರಿತಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಸಂತ್ರಸ್ತೆ ಗಂಡನ ಮನೆಯಿಂದ ತಪ್ಪಿಸಿಕೊಂಡು ಕಳೆದ ಎರಡು ತಿಂಗಳಿನಿಂದ ತಾಯಿಯೊಂದಿಗೆ ವಾಸವಿದ್ದಾಳೆ.

ಚಾಕು ಹಿಡಿದು ಬೆದರಿಕೆ – ಸಾರ್ವಜನಿಕವಾಗಿ ‘ತಲಾಖ್’:
2024ರ ಜೂನ್ 4ರಂದು ಪತಿಯ ಮನೆಗೆ ತನ್ನ ಬಟ್ಟೆಗಳನ್ನು ತರುವ ಉದ್ದೇಶದಿಂದ ಹೋದಾಗ, ಪತಿ ಯೂನಸ್ ಪಾಷಾ ಮತ್ತು ಆತನ ಕುಟುಂಬದವರು ತಾಯಿಯೊಂದಿಗೆ ಸೇರಿ ಚಾಕು ಹಿಡಿದು ತೊಡೆಯ ಮೇಲೆ ಇರಿಸಿ ಬೆದರಿಕೆ ಹಾಕಿದ್ದ. ಅಲ್ಲದೆ ಎಲ್ಲರ ಮುಂದೆ ಆಕೆಗೆ ಆರು ಬಾರಿ “ತಲಾಖ್” ಘೋಷಿಸಿ ವಿಚ್ಛೇದನೆ ನೀಡಿದ್ದಾನೆ.

ತಲೆಗೆ ಗನ್ ಇಟ್ಟು ಜೀವ ಬೆದರಿಕೆ:
ಪತ್ನಿಯು ಆತನ ನಡವಳಿಕೆಯ ಬಗ್ಗೆ ಪ್ರಶ್ನಿಸಿದಾಗ ಪತಿ ಗನ್ ತೋರಿಸಿ ತಲೆಗೆ ಇಟ್ಟು ಬೆದರಿಕೆ ಹಾಕುತ್ತಿದ್ದ. ಮಹಿಳೆಯ ತಂದೆ ಮತ್ತು ಮನೆಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. 2023ರಲ್ಲಿ ಆಕೆಯ ಮೇಲೆ ಗಂಭೀರ ಹಲ್ಲೆ ಕೂಡ ನಡೆದಿತ್ತು ಎಂದು ಎಫ್‌ಐಆರ್‌ನ ವಿವರಗಳು ತಿಳಿಸುತ್ತವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಫುಟ್‌ಬಾಲ್ : ಕಾರ್ಕಳ ಜ್ಞಾನಸುಧಾ ತಂಡ ಜಿಲ್ಲಾಮಟ್ಟಕ್ಕೆ

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

‘ಸೇವಾ ಪಾಕ್ಷಿಕ ಅಭಿಯಾನ’ ಯಶಸ್ವಿಗೊಳಿಸಲು ಕುತ್ಯಾರು ನವೀನ್ ಶೆಟ್ಟಿ ಕರೆ

ಜಿಲ್ಲೆಯಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಕ್ರಿಯೇಟಿವ್ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ, 'ಕ್ರಿಯೇಟಿವ್ ಗುರುದೇವೋಭವ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ್ಞಾನ ಜ್ಯೋತಿಯನ್ನು ಬೆಳಗಿ, ಡಾ. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ಕಾರ್ಕಳ ಜ್ಞಾನಸುಧಾ – ಶಿಕ್ಷಕರ ದಿನಾಚರಣೆಸಾವಧಾನದ ಮನಸ್ಥಿತಿ ಗೌರವದ ಉಪಸ್ಥಿತಿ : ವಸಂತ್ ಆಚಾರ್

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.