spot_img

ಮಧೂರು ದೇವಸ್ಥಾನದಲ್ಲಿ 33 ವರ್ಷಗಳ ನಂತರ ಅಷ್ಟಬಂಧ ಬ್ರಹ್ಮಕಲಶೋತ್ಸವ

Date:

spot_img

ಕಾಸರಗೋಡು: ಮಧುವಾಹಿನಿ ನದಿಯ ತಟದಲ್ಲಿರುವ ಐತಿಹಾಸಿಕ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ನಂತರ ಮತ್ತೊಮ್ಮೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ನಡೆಯಲಿದೆ. ಈ ಉತ್ಸವಗಳು ಮಾರ್ಚ್ 27ರಿಂದ ಏಪ್ರಿಲ್ 7ರ ವರೆಗೆ ನಡೆಯಲಿವೆ. ದೇವಸ್ಥಾನದ ನವೀಕರಣ ಮತ್ತು ಇತರ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ದೇಗುಲದ ನವೀಕರಣ ಕಾರ್ಯಗಳು ಪೂರ್ಣಗೊಂಡಿವೆ. ದೇವಾಲಯದ ರಾಜಾಂಗಣ ಮತ್ತು ಹೊರಾಂಗಣದ ಕೆಲಸಗಳು ಸಂಪೂರ್ಣಗೊಂಡು, ಗಣಪತಿ ನಡೆ, ಶಿವನ ನಡೆ, ದುರ್ಗಾ ಗುಡಿ ಮತ್ತು ಸುತ್ತು ಪೌಳಿಗೆಗಳಿಗೆ ಕೆಂಪು ಕಲ್ಲು ಹಾಸಲಾಗಿದೆ. ಹೊಸದಾಗಿ ಕಗ್ಗಲ್ಲಿನಿಂದ ನಿರ್ಮಿಸಲಾದ ಕೆತ್ತನೆ ಕೆಲಸದ ಕಂಬಗಳು ಮತ್ತು ಕಾಷ್ಠ ಶಿಲ್ಪಗಳು ಸಂದರ್ಶಕರನ್ನು ಆಕರ್ಷಿಸುತ್ತಿವೆ. ಮೂಡು ಗೋಪುರಕ್ಕೆ ಗ್ರಾನೈಟ್ ಹಾಸಲಾಗಿದೆ. ಮುರುಡೇಶ್ವರದ ಶಂಕರ್ ಮತ್ತು ಅವರ ಬಳಗವು ಅತ್ಯಾಧುನಿಕ ಕೆತ್ತನೆ ಕೆಲಸಗಳನ್ನು ನಿರ್ವಹಿಸಿದ್ದಾರೆ. ಕಾಷ್ಠ ಶಿಲ್ಪಗಳನ್ನು ಮೂಡುಬಿದಿರೆಯ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಹರೀಶ ಆಚಾರ್ಯ ನಿರ್ಮಿಸಿದ್ದಾರೆ.

ದೇವಸ್ಥಾನದ ಸುತ್ತಲೂ ಸುಮಾರು 2-3 ತಿಂಗಳಿಂದ ಸ್ಥಳೀಯರು, ಮಕ್ಕಳು ಮತ್ತು ಮಹಿಳೆಯರು ಸಹ ರಾತ್ರಿ ಹಗಲೆನ್ನದೆ ಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇವಾಲಯದ ಪರಿಸರದಲ್ಲಿ ಚಪ್ಪರಗಳ ನಿರ್ಮಾಣ, ಅನ್ನಛತ್ರ, ಉಗ್ರಾಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ, ಸಭಾ ಕಾರ್ಯಕ್ರಮಗಳಿಗೆ ವೇದಿಕೆ ಮತ್ತು ಕಾರ್ಯಾಲಯಗಳ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ. ವಾಹನ ಪಾರ್ಕಿಂಗ್ ಸೌಲಭ್ಯಕ್ಕೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ.

ತಂಜಾವೂರು ಶೈಲಿಯ ಗೋಪುರಕ್ಕೆ ಅಂತಿಮ ಸ್ಪರ್ಶ

ದೇವಸ್ಥಾನದ ಪ್ರಮುಖ ಆಕರ್ಷಣೆಯಾದ ತಂಜಾವೂರು ಶೈಲಿಯ ಕಗ್ಗಲ್ಲಿನ ಗೋಪುರಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಈ ಗೋಪುರವನ್ನು ಮಧೂರು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮತ್ತು ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಅವರು ಸುಮಾರು 1.11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಖ್ಯಾತ ಶಿಲ್ಪಿ ಮೂಡುಬಿದಿರೆಯ ರಮೇಶ್ ಅವರು ಈ ಗೋಪುರದ ಕೆಲಸವನ್ನು ನಿರ್ವಹಿಸಿದ್ದಾರೆ. ಅವರು ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಜಾಂಗಣ ಮತ್ತು 24 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಸುತ್ತ ಇಂಟರ್ಲಾಕ್ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ.

ಮೂಡಪ್ಪ ಸೇವೆಗೆ 400ಕ್ಕೂ ಹೆಚ್ಚು ಬುಟ್ಟಿ ಸಮರ್ಪಣೆ

ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯ ಅಂಗವಾಗಿ, ಸುಮಾರು 400ಕ್ಕೂ ಹೆಚ್ಚು ಬುಟ್ಟಿಗಳನ್ನು ದೇವಸ್ಥಾನಕ್ಕೆ ಸಮರ್ಪಿಸಲಾಗಿದೆ. ಈ ಬುಟ್ಟಿಗಳನ್ನು ದಂಬೆಮೂಲೆ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಶ್ರೀ ಮಧೂರು ಸನ್ನಿಧಿಗೆ ತರಲಾಯಿತು. ಅನೇಕ ದಾನಿಗಳ ಸಹಕಾರದಿಂದ ಕಾರ್ಯಾಡು ಬಟ್ಯ ಮತ್ತು ಬಳಗದ ಸದಸ್ಯರು ಬುಟ್ಟಿಗಳನ್ನು ಹೆಣೆದು ನೀಡಿದ್ದಾರೆ. ದೇವಾಲಯದ ಪ್ರಧಾನ ಅರ್ಚಕ ವಿ.ಶ್ರೀಕೃಷ್ಣ ಉಪಾಧ್ಯಾಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರತಿ ಬುಟ್ಟಿಗೆ ಸುಮಾರು 300 ರೂಪಾಯಿ ನೀಡಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದಲ್ಲಿ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಮಾಹಿತಿ ಶಿಬಿರ

ಈ ಮಾಹಿತಿ ಶಿಬಿರದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಭಾಗವಹಿಸಲಿದ್ದು, ಉದ್ಯೋಗ ಮೇಳದ ಸಮಗ್ರ ವಿವರಗಳನ್ನು ನೀಡಲಿದ್ದಾರೆ.

ಮಂಗಳೂರು: ಔಷಧಿಯೆಂದು ಇಲಿಪಾಷಾಣ ಸೇವಿಸಿದ್ದ ಹೆಡ್ ಕಾನ್ಸ್‌ಟೇಬಲ್ ದುರ್ಮರಣ!

ಔಷಧಿಯೆಂದು ತಪ್ಪಾಗಿ ಭಾವಿಸಿ ಇಲಿಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಧರ್ಮಸ್ಥಳ : ಮೊದಲು ಗುರುತಿಸಿದ ಸ್ಥಳದಲ್ಲಿ ಮಿನಿ ಹಿಟಾಚಿ ಬಳಕೆಯಾದರೂ ಸಿಗದ ಕಳೇಬರ

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ,ಮೊದಲು ಗುರುತಿಸಿದ ಸ್ಥಳದಲ್ಲಿ ಮಿನಿ ಹಿಟಾಚಿ ಯಂತ್ರವನ್ನು ಬಳಸಿದರೂ ಇದುವರೆಗೆ ಕಳೇಬರ ಪತ್ತೆಯಾಗಿಲ್ಲ.

ಮರವಂತೆಯಲ್ಲಿ ಮಳೆಗಾಲದಲ್ಲೂ ಅಪಾಯಕಾರಿ ಬೋಟಿಂಗ್: ಪ್ರವಾಸಿಗರ ಪ್ರಾಣದೊಂದಿಗೆ ಚೆಲ್ಲಾಟ!

ಬೈಂದೂರು ತಾಲೂಕಿನ ಮರವಂತೆ ಗ್ರಾಮದಲ್ಲಿ ಮಳೆಗಾಲದ ನಡುವೆಯೂ ಸೌಪರ್ಣಿಕಾ ನದಿಯಲ್ಲಿ ಅಪಾಯಕಾರಿ ಬೋಟಿಂಗ್ ನಡೆಸಲಾಗುತ್ತಿದ್ದು, ಇದು ಪ್ರವಾಸಿಗರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.