
ಶಿವಪುರ : ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಶಿವಪುರದ ಛಾಯಾಂತರಂಗಕ್ಕೆ ಭೇಟಿ ನೀಡಿದರು.
ಅಮೃತ ಭಾರತಿ ವಿದ್ಯಾಲಯದ ಪೂರ್ವಛಾತ್ರ ಮಾನ್ವಿತ್ ಅಡಿಗ ಅವರ ಛಾಯಾಂತರಂಗ ಮತ್ತು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ಅಲ್ಲಿನ ವಿಷಯಗಳನ್ನು ಪರಿಶೀಲಿಸಿ, ಕೃಷಿಗೆ ಸಂಬಂಧಿಸಿದ ಜೀವಾಮೃತ ತಯಾರಿಕೆಯ ಬಗ್ಗೆ ಹಲವು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಶಿವಪುರ ದೇವಸ್ಥಾನದ ಪ್ರಧಾನ ಅರ್ಚಕ ಮಹಾಬಲೇಶ್ವರ ಅಡಿಗ, ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಹಾಗೂ ಸಂಸ್ಥೆಯ ಶಿಕ್ಷಕರಾದ ಮಹೇಶ್ ಹೈಕಾಡಿ, ಸಾವಿತ್ರಿ ಕಿಣಿ, ಸೌಪರ್ಣಿಕಾ ಜೋಶಿ, ನವ್ಯಾ ಪೈ, ಪಂಚಮಿ, ಸುಮನ್ ನಾಯಕ್, ಮೀನಾಕ್ಷಿ , ನಿಶಾನ್ ಶೆಟ್ಟಿ, ಸುಮನವಾಣಿ, ವಾಹನ ಚಾಲಕ ತಾರಕುಮಾರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



































